ಹುತಾತ್ಮನಾದ ವೀರ ಯೋಧನ ಪಾರ್ಥಿವ ಶರೀರದ ಮೇಲೆ ಹೊದಿಸಿರುವ ರಾಷ್ಟ್ರ ದ್ವಜವನ್ನು ಯೋಧನ ಪತ್ನಿಗೆ ಸೇನಾ ಅಧಿಕಾರಿಗಳು ಹಸ್ತಾಂತರಿಸಿದರು.
ತಿಕೋಟಾ ಪಟ್ಟಣದ ವಾಡೆ ಮೈದಾನದಲ್ಲಿ ಹುತಾತ್ಮ ವೀರ ಯೋಧ ರಾಜು ಕರಜಗಿ ಅವರ ಪಾರ್ಥಿವ ಶರೀರದ ಮೇಲೆ ರೋಧಿಸುತ್ತಿರುವ ಸಹೋದರಿ.
ತಿಕೋಟಾ ಪಟ್ಟಣದ ವಾಡೆ ಮೈದಾನದಲ್ಲಿ ಹುತಾತ್ಮ ವೀರ ಯೋಧ ರಾಜು ಕರಜಗಿ ಅವರ ಅಂತಿಮ ದರ್ಶನ ಪಡೆಯಲು ನೆರೆದ ಜನರು.
2009ರಿಂದ ಸೇನೆಯಲ್ಲಿ ಕೆಲಸ
ತಿಕೋಟಾ ಪಟ್ಟಣದಲ್ಲಿ ರೈತ ಕುಟುಂಬದ ತಂದೆ ಗಿರಮಲ್ಲ ತಾಯಿ ಅಕ್ಕೂತಾಯಿ ದಂಪತಿಯ ಪುತ್ರನಾಗಿ 1986 ಜೂನ್ 1ರಲ್ಲಿ ಜನಿಸಿದ ಯೋಧ ರಾಜು ಅವರು ಒಂದರಿಂದ ಐದನೇ ತರಗತಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆರರಿಂದ ಏಳನೇ ತರಗತಿ ಜತ್ತ ತಾಲ್ಲೂಕಿನ ಉಮರಾಣಿ ಶಾಲೆ ಪ್ರೌಢ ಶಿಕ್ಷಣ ಪಿಯು ಹಾಗೂ ಪದವಿ ಶಿಕ್ಷಣವನ್ನು ತಿಕೋಟಾದ ಎ.ಬಿ.ಜತ್ತಿ ಶಾಲೆಯಲ್ಲಿ ಪೂರೈಸಿದರು. ದೇಶ ಸೇವೆ ಮಾಡುವ ಮಹದಾಸೆ ಇಟ್ಟುಕೊಂಡ ಅವರು ಪದವಿ ಶಿಕ್ಷಣ ಪಡೆಯುವಾಗಲೇ ಎನ್ಸಿಸಿ ಆಯ್ಕೆ ಮಾಡಿಕೊಂಡು ಪ್ರತಿದಿನ ದೈಹಿಕ ಕಸರತ್ತು ನಡೆಸುತ್ತಿದ್ದರು. ಸತತ ಪರಿಶ್ರಮದಿಂದ ದೇಶ ಸೇವೆ ಮಾಡಲು ಸೈನಿಕ ಹುದ್ದೆಗೆ ಆಯ್ಕೆಯಾಗಿ 2009 ರ ಮಾರ್ಚ್ 21ರಂದು ಕರ್ತವ್ಯಕ್ಕೆ ಹಾಜರಾದರು. 2013 ಮೇ 12 ರಂದು ಅಕ್ಕ ಭಾಗ್ಯಶ್ರಿ ಅವರ ಮಗಳು ಸುಧಾ ಜೊತೆ ವೈವಾಹಿಕ ಜೀವನ ಆರಂಭಿಸಿದರು. ಮಧ್ಯಪ್ರದೇಶ ಪಂಜಾಬ ಆಸ್ಸಾಂ ಜಮ್ಮು ಕಾಶ್ಮಿರದಲ್ಲಿ ಸೇವೆ ಸಲ್ಲಿಸಿದ್ದು ಈಚೆಗಷ್ಟೇ ಹವಾಲ್ದಾರ್ ಆಗಿ ಪದೋನ್ನತಿ ಹೊಂದಿದ್ದರು. ಇನ್ನು ಎರಡ್ಮೂರು ವರ್ಷಗಳಲ್ಲಿ ನಿವೃತ್ತಿ ಹೊಂದುತ್ತಿದ್ದರು. ‘ದಿನವೂ ವಿಡಿಯೊ ಕರೆ ಮಾಡಿ ಕುಟುಂಬದವರೊಂದಿಗೆ ಮಾತನಾಡುತ್ತಿದ್ದ. ಭಾನುವಾರ ಬೆಳಿಗ್ಗೆ ಹುತಾತ್ಮ ಆಗಿದ್ದಾನೆಂದು ಸೇನಾ ಸಿಬ್ಬಂದಿಯಿಂದ ಸುದ್ದಿ ಬಂತು’ ಎಂದು ಸಹೋದರ ಮಹಾದೇವ ‘ಪ್ರಜಾವಾಣಿ’ ಬಳಿ ದುಃಖ ತೋಡಿಕೊಂಡರು.