<p><strong>ವಿಜಯಪುರ:</strong> ಕಣ್ವ ಮಠಾಧೀಶ ವಿದ್ಯಾಕಣ್ವ ವಿರಾಜ ತೀರ್ಥರು ತಮ್ಮ ಈ ಬಾರಿಯ ಚಾರ್ತುಮಾಸ್ಯ ಸಂಕಲ್ಪವನ್ನು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಮೂಲ ಮಹಾಸಂಸ್ಥಾನ ಹುಣಸಿಹೊಳೆ ಗ್ರಾಮದಲ್ಲಿ ಕೈಗೊಳ್ಳಲಿದ್ದಾರೆ.</p>.<p>ಜುಲೈ 12ರಿಂದ ಸಪ್ಟೆಂಬರ್ 29ರವರೆಗೆ ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ದಂಡೋದಕ ಸ್ನಾನದೊಂದಿಗೆ ಚಾತುರ್ಮಾಸ್ಯ ಆರಂಭಿಸಲಿರುವ ಶ್ರೀಗಳು ಪ್ರತಿನಿತ್ಯ ವಿಠಲ ಕೃಷ್ಣನ ಸಂಸ್ಥಾನ ಪೂಜೆ, ಭಕ್ತರಿಗೆ ತಪ್ತ ಮುದ್ರಾಧಾರಣೆ ಪಾದ ಪೂಜೆ ನೆರವೇರಿಸಲಿರುವರು.</p>.<p>ನಿತ್ಯ ವಿವಿಧ ಪಂಡಿತರಿಂದ ಉಪನ್ಯಾಸ, ಅಧಿಕ ಮಾಸದಲ್ಲಿ ವಿಶೇಷ ಪೂಜೆ ಹೋಮ ಹವನಗಳು ನಡೆಯಲಿವೆ ಎಂದು ಮಠದ ಅಭಿವೃದ್ಧಿ ಸಮಿತಿ ಸದಸ್ಯ ಭೀಮಸೇನರಾವ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಕಣ್ವ ಮಠಾಧೀಶ ವಿದ್ಯಾಕಣ್ವ ವಿರಾಜ ತೀರ್ಥರು ತಮ್ಮ ಈ ಬಾರಿಯ ಚಾರ್ತುಮಾಸ್ಯ ಸಂಕಲ್ಪವನ್ನು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಮೂಲ ಮಹಾಸಂಸ್ಥಾನ ಹುಣಸಿಹೊಳೆ ಗ್ರಾಮದಲ್ಲಿ ಕೈಗೊಳ್ಳಲಿದ್ದಾರೆ.</p>.<p>ಜುಲೈ 12ರಿಂದ ಸಪ್ಟೆಂಬರ್ 29ರವರೆಗೆ ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ದಂಡೋದಕ ಸ್ನಾನದೊಂದಿಗೆ ಚಾತುರ್ಮಾಸ್ಯ ಆರಂಭಿಸಲಿರುವ ಶ್ರೀಗಳು ಪ್ರತಿನಿತ್ಯ ವಿಠಲ ಕೃಷ್ಣನ ಸಂಸ್ಥಾನ ಪೂಜೆ, ಭಕ್ತರಿಗೆ ತಪ್ತ ಮುದ್ರಾಧಾರಣೆ ಪಾದ ಪೂಜೆ ನೆರವೇರಿಸಲಿರುವರು.</p>.<p>ನಿತ್ಯ ವಿವಿಧ ಪಂಡಿತರಿಂದ ಉಪನ್ಯಾಸ, ಅಧಿಕ ಮಾಸದಲ್ಲಿ ವಿಶೇಷ ಪೂಜೆ ಹೋಮ ಹವನಗಳು ನಡೆಯಲಿವೆ ಎಂದು ಮಠದ ಅಭಿವೃದ್ಧಿ ಸಮಿತಿ ಸದಸ್ಯ ಭೀಮಸೇನರಾವ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>