<p><strong>ಆಲಮಟ್ಟಿ</strong>: ಆಲಮಟ್ಟಿ ಜಲಾಶಯಕ್ಕೆ ಹತ್ತಿಕೊಂಡಿರುವ ಗ್ಯಾಲರಿ ಬಳಿ ಶುಕ್ರವಾರ ನಸುಕಿನ ಜಾವ ಕಂಡಿದ್ದ 5 ಅಡಿ ಉದ್ದದ ಮೊಸಳೆಯನ್ನು ಪ್ರಾದೇಶಿಕ ಅರಣ್ಯ ಇಲಾಖೆಯ ಮೊಸಳೆ ರಕ್ಷಕರು ಹಿಡಿದು ಕೃಷ್ಣಾ ನದಿಗೆ ಬಿಟ್ಟರು.</p>.<p>ಶುಕ್ರವಾರ ನಸುಕಿನ ಜಾವ ಕೆಎಸ್ಐಎಸ್ಎಫ್ ಪೊಲೀಸರು ಗಸ್ತು ತಿರುಗುವಾಗ ಮೊಸಳೆ ಕಂಡಿತ್ತು. ಅದು ಸಮೀಪದ ಉದ್ಯಾನದೊಳಗೆ ಪ್ರವೇಶಿಸಬಾರದು ಎಂಬ ಉದ್ದೇಶದಿಂದ ಅದರ ಚಲನವಲನದ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು.</p>.<p>ನಂತರ ಬೆಳಿಗ್ಗೆ 11ಕ್ಕೆ ಆಗಮಿಸಿದ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು, ಅರಣ್ಯ ದಿನಗೂಲಿ ಕಾರ್ಮಿಕರು, ಪೊಲೀಸರು ಸೇರಿ ಮೊಸಳೆ ಸೆರೆ ಹಿಡಿದರು. ಅದನ್ನು ನಂತರ ಬೇನಾಳ ಬಳಿ ಇರುವ ಕೃಷ್ಣೆಯ ಹಿನ್ನೀರಿಗೆ ಒಯ್ದು ಸುರಕ್ಷಿತವಾಗಿ ನದಿಗೆ ಬಿಟ್ಟರು.</p>.<p>ಉಪವಲಯ ಅರಣ್ಯಾಧಿಕಾರಿ ಶ್ರೀಕಾಂತ ಘೋರ್ಪಡೆ, ಪೊಲೀಸ್ ಇನ್ಸ್ಪೆಕ್ಟರ್ ಶಿವಲಿಂಗ ಕುರೆನ್ನವರ, ಅಹ್ಮದ್ ಸಂಗಾಪುರ, ವಿಠ್ಠಲ ಜಾಧವ, ಮೊಸಳೆ ರಕ್ಷಕ ನಾಗೇಶ ಮೋಪಗಾರ, ವಿರೂಪಾಕ್ಷಿ ಮಾದರ ಸೇರಿ ಕೆಎಸ್ಐಎಸ್ಎಫ್ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮಟ್ಟಿ</strong>: ಆಲಮಟ್ಟಿ ಜಲಾಶಯಕ್ಕೆ ಹತ್ತಿಕೊಂಡಿರುವ ಗ್ಯಾಲರಿ ಬಳಿ ಶುಕ್ರವಾರ ನಸುಕಿನ ಜಾವ ಕಂಡಿದ್ದ 5 ಅಡಿ ಉದ್ದದ ಮೊಸಳೆಯನ್ನು ಪ್ರಾದೇಶಿಕ ಅರಣ್ಯ ಇಲಾಖೆಯ ಮೊಸಳೆ ರಕ್ಷಕರು ಹಿಡಿದು ಕೃಷ್ಣಾ ನದಿಗೆ ಬಿಟ್ಟರು.</p>.<p>ಶುಕ್ರವಾರ ನಸುಕಿನ ಜಾವ ಕೆಎಸ್ಐಎಸ್ಎಫ್ ಪೊಲೀಸರು ಗಸ್ತು ತಿರುಗುವಾಗ ಮೊಸಳೆ ಕಂಡಿತ್ತು. ಅದು ಸಮೀಪದ ಉದ್ಯಾನದೊಳಗೆ ಪ್ರವೇಶಿಸಬಾರದು ಎಂಬ ಉದ್ದೇಶದಿಂದ ಅದರ ಚಲನವಲನದ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು.</p>.<p>ನಂತರ ಬೆಳಿಗ್ಗೆ 11ಕ್ಕೆ ಆಗಮಿಸಿದ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು, ಅರಣ್ಯ ದಿನಗೂಲಿ ಕಾರ್ಮಿಕರು, ಪೊಲೀಸರು ಸೇರಿ ಮೊಸಳೆ ಸೆರೆ ಹಿಡಿದರು. ಅದನ್ನು ನಂತರ ಬೇನಾಳ ಬಳಿ ಇರುವ ಕೃಷ್ಣೆಯ ಹಿನ್ನೀರಿಗೆ ಒಯ್ದು ಸುರಕ್ಷಿತವಾಗಿ ನದಿಗೆ ಬಿಟ್ಟರು.</p>.<p>ಉಪವಲಯ ಅರಣ್ಯಾಧಿಕಾರಿ ಶ್ರೀಕಾಂತ ಘೋರ್ಪಡೆ, ಪೊಲೀಸ್ ಇನ್ಸ್ಪೆಕ್ಟರ್ ಶಿವಲಿಂಗ ಕುರೆನ್ನವರ, ಅಹ್ಮದ್ ಸಂಗಾಪುರ, ವಿಠ್ಠಲ ಜಾಧವ, ಮೊಸಳೆ ರಕ್ಷಕ ನಾಗೇಶ ಮೋಪಗಾರ, ವಿರೂಪಾಕ್ಷಿ ಮಾದರ ಸೇರಿ ಕೆಎಸ್ಐಎಸ್ಎಫ್ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>