ನಾಗಠಾಣ ಮತಕ್ಷೇತ್ರದಲ್ಲಿ ಹಲವಾರು ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಿದೆ. ನಗರದ ಹೊರವಲಯದಲ್ಲಿ ನಿರ್ಗತಿಕರು, ಬಡವರು ವಾಸವಿದ್ದಾರೆ. ಇದರ ಹತ್ತಿರವೇ ಸಾಕಷ್ಟು ಜಗತ್ಪ್ರಸಿದ್ಧ ಸ್ಮಾರಕಗಳು ಇವೆ ಮತ್ತು ಅಕ್ವಾಡೆಕ್ಟ್ ಹಾದು ಹೋಗಿದೆ. ಈ ಪ್ರದೇಶವೂ ಅತ್ಯಂತ ಸೂಕ್ಷ್ಮವಾಗಿದ್ದು, ಇಂತಹ ಸ್ಥಳದಲ್ಲಿ ಗಣಿಗಾರಿಕೆ ನಡೆಯುವುದರಿಂದ ಪದೇ ಪದೇ ತೊಂದರೆಯಾಗುತ್ತಿದೆ ಎಂದು ಹೇಳಿದರು.