ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ‘ಹಾಸ್ಟೆಲ್ ಪ್ರವೇಶಕ್ಕೆ ಈಗಿರುವ ನಿಯಮಾವಳಿಯಲ್ಲಿ ಸಡಿಲಿಕೆ ನೀಡಬೇಕು. ಎಷ್ಟೋ ಮಕ್ಕಳಿಗೆ ಕಲಿಯಬೇಕು ಎಂಬ ಉತ್ಸಾಹ ಇರುತ್ತದೆ. ಆದರೆ, ಒಂದೆಡೆ ಬಡತನ ಅಡ್ಡಿಯಾದರೆ, ಇನ್ನೊಂದೆಡೆ ಹೆಚ್ಚು ಅಂಕಗಳಿಸಿರುವುದಿಲ್ಲ. ಹೀಗಾಗಿ, ಇಂತಹ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.