<p><strong>ಆಲಮಟ್ಟಿ</strong>: ಆಲಮಟ್ಟಿ ಜಲಾಶಯಕ್ಕೆ ಒಳಹರಿವು ದಿನೇ ದಿನೇ ಹೆಚ್ಚುತ್ತಿದ್ದು, ಕೃಷ್ಣಾ ಅಚ್ಚುಕಟ್ಟು ವ್ಯಾಪ್ತಿಯ ಕಾಲುವೆಗಳಿಗೆ ಕೃಷಿಗಾಗಿ ನೀರು ಹರಿಸುವ ಬೇಡಿಕೆ ಹೆಚ್ಚಿದೆ.</p>.<p>ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗಿದೆ. ಆದರೆ, ಮುಂಗಾರು ಬಿತ್ತನೆ ಮಾಡಿದ ನಂತರ ಮಳೆ ಕಡಿಮೆಯಾಗಿದೆ. </p>.<p>ಮೆಕ್ಕೆಜೋಳ, ತೊಗರಿ, ಹೆಸರು ಸೇರಿದಂತೆ ನಾನಾ ಬೆಳೆ ಬಿತ್ತನೆ ಮಾಡಿದ್ದಾರೆ. ಜತೆಗೆ ಅಚ್ಚುಕಟ್ಟು ಪ್ರದೇಶದಲ್ಲಿ ಕಬ್ಬು ಬೆಳೆ ವ್ಯಾಪಕವಿದ್ದು, ನೀರಿನ ಅಗತ್ಯ ಅಧಿಕವಾಗಿದೆ.</p>.<p>ಆಲಮಟ್ಟಿ ಜಲಾಶಯವೂ ಭರ್ತಿಯತ್ತ ಸಾಗಿದೆ, ನಾರಾಯಣಪುರ ಜಲಾಶಯ ಬಹುತೇಕ ಭರ್ತಿಯಾಗಿದೆ. ಎರಡೂ ಜಲಾಶಯಗಳಿಂದ ಗೇಟ್ ತೆರೆದು ನೀರನ್ನು ನದಿಯಿಂದ ಹೊರ ಬಿಡಲಾಗುತ್ತಿದೆ. ಅದರ ಬದಲಾಗಿ ಕಾಲುವೆಗಳಿಗೆ ನೀರು ಹರಿಸಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ.</p>.<p>‘ಕೇವಲ ಕೆರೆಗಳ ಭರ್ತಿಗಾಗಿ ಮಾತ್ರ ಸೀಮಿತ ಕಾಲುವೆಗಳಿಗೆ ನೀರು ಬಿಡಲಾಗುತ್ತಿದೆ. ಆದರೆ, ಕೃಷಿಗೆ ನೀರು ಬಿಡಬೇಕಾದರೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ಐಸಿಸಿ)ನಿರ್ಣಯ ಆಗಬೇಕು' ಎಂದು ಸೂಪರಿಂಟೆಂಡೆಂಟ್ ಎಂಜಿನಿಯರ್ ವಿ.ಆರ್.ಹಿರೇಗೌಡರ ತಿಳಿಸಿದರು.</p>.<p>ಬೆಂಗಳೂರಿನಲ್ಲಿ ಐಸಿಸಿ ಸಭೆ: ಈ ಬಾರಿ ಒಂದು ತಿಂಗಳು ಮೊದಲೇ ಜಲಾಶಯಗಳು ಭರ್ತಿಯತ್ತ ಸಾಗಿವೆ, ಹೀಗಾಗಿ ಕಾಲುವೆಗೆ ನೀರು ಬಿಡಬೇಕೆಂಬ ರೈತರ ಬೇಡಿಕೆಯೂ ಹೆಚ್ಚಿದೆ. ಕಾಲುವೆಗೆ ನೀರು ಹರಿಸುವ ಮಹತ್ವದ ಐಸಿಸಿ ಸಭೆ ಜುಲೈ 1 ಬೆಂಗಳೂರಿನಲ್ಲಿ ಮಧ್ಯಾಹ್ನ 3 ಕ್ಕೆ ನಡೆಯಲಿದೆ. ಐಸಿಸಿ ಅಧ್ಯಕ್ಷರೂ ಆಗಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಐಸಿಸಿ ಸದಸ್ಯ ಕಾರ್ಯದರ್ಶಿಯೂ ಆಗಿರುವ, ಭೀಮರಾಯನಗುಡಿ ಕಾಲುವೆ ವಲಯದ ಮುಖ್ಯ ಎಂಜಿನಿಯರ್ ಪ್ರೇಮಸಿಂಗ್ ತಿಳಿಸಿದರು.</p>.<p>ಪ್ರತಿಬಾರಿ ಆಲಮಟ್ಟಿಯಲ್ಲಿ ನಡೆಯುತ್ತಿದ್ದ ಐಸಿಸಿ ಸಭೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ.<br> ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜನಪ್ರತಿನಿಧಿಗಳು ಸದಸ್ಯರಾಗಿದ್ದು, ಐದು ಅಚ್ಚುಕಟ್ಟು ಜಿಲ್ಲೆಗಳಿಗೆ ಕಾಲುವೆಗೆ ನೀರು ಹರಿಸುವ ದಿನ ನಿಗದಿಗೊಳಿಸಲಿದ್ದಾರೆ.</p>.<div><blockquote>ಮೆಕ್ಕೆಜೋಳ ಈರುಳ್ಳಿ ನಾಟಿ ಮಾಡಲಾಗಿದೆ. ಹೀಗಾಗಿ ಕಾಲುವೆಗೆ ನೀರು ಹರಿಸಿದರೇ ಅನುಕೂಲವಾಗಲಿದೆ.</blockquote><span class="attribution">– ಶಿವಾನಂದ ಮುರನಾಳ, ರೈತ</span></div>.<div><blockquote>ಒಳಹರಿವು ಕಡಿಮೆಯಾಗಿದ್ದು ಹೀಗಾಗಿ ಹೊರಹರಿವನ್ನು 50 ಸಾವಿರ ಕ್ಯೂಸೆಕ್ ಗೆ ಇಳಿಸಲಾಗಿದೆ.</blockquote><span class="attribution">– ಡಿ.ಬಸವರಾಜ, ಮುಖ್ಯ ಎಂಜಿನಿಯರ್</span></div>.<p><strong>ಆರಂಭಗೊಳ್ಳದ ಕ್ಲೋಸರ್ ಕಾಮಗಾರಿ</strong></p><p>ಪ್ರತಿ ವರ್ಷ ಕಾಲುವೆಗಳ ದುರಸ್ತಿ ಹೂಳು ತೆಗೆಯುವುದು ಕಾಲುವೆ ಪಕ್ಕದ ಜಂಗಲ್ ಕಟ್ಟಿಂಗ್ ಸೇರಿದಂತೆ ನಾನಾ ಕಾಮಗಾರಿ ಕೈಗೊಂಡ ನಂತರ ಕಾಲುವೆಗೆ ನೀರು ಬಿಡಲಾಗುತ್ತಿತ್ತು. ಆದರೆ ಈ ವರ್ಷ ಕ್ಲೋಸರ್ ಕಾಮಗಾರಿಗೆ ಇನ್ನೂ ಟೆಂಡರ್ ಕರೆದಿಲ್ಲ. ಈ ಬಾರಿ ಕ್ಲೋಸರ್ ಕಾಮಗಾರಿ ನಡೆಯುವುದು ಅನುಮಾನ ಎನ್ನಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮಟ್ಟಿ</strong>: ಆಲಮಟ್ಟಿ ಜಲಾಶಯಕ್ಕೆ ಒಳಹರಿವು ದಿನೇ ದಿನೇ ಹೆಚ್ಚುತ್ತಿದ್ದು, ಕೃಷ್ಣಾ ಅಚ್ಚುಕಟ್ಟು ವ್ಯಾಪ್ತಿಯ ಕಾಲುವೆಗಳಿಗೆ ಕೃಷಿಗಾಗಿ ನೀರು ಹರಿಸುವ ಬೇಡಿಕೆ ಹೆಚ್ಚಿದೆ.</p>.<p>ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗಿದೆ. ಆದರೆ, ಮುಂಗಾರು ಬಿತ್ತನೆ ಮಾಡಿದ ನಂತರ ಮಳೆ ಕಡಿಮೆಯಾಗಿದೆ. </p>.<p>ಮೆಕ್ಕೆಜೋಳ, ತೊಗರಿ, ಹೆಸರು ಸೇರಿದಂತೆ ನಾನಾ ಬೆಳೆ ಬಿತ್ತನೆ ಮಾಡಿದ್ದಾರೆ. ಜತೆಗೆ ಅಚ್ಚುಕಟ್ಟು ಪ್ರದೇಶದಲ್ಲಿ ಕಬ್ಬು ಬೆಳೆ ವ್ಯಾಪಕವಿದ್ದು, ನೀರಿನ ಅಗತ್ಯ ಅಧಿಕವಾಗಿದೆ.</p>.<p>ಆಲಮಟ್ಟಿ ಜಲಾಶಯವೂ ಭರ್ತಿಯತ್ತ ಸಾಗಿದೆ, ನಾರಾಯಣಪುರ ಜಲಾಶಯ ಬಹುತೇಕ ಭರ್ತಿಯಾಗಿದೆ. ಎರಡೂ ಜಲಾಶಯಗಳಿಂದ ಗೇಟ್ ತೆರೆದು ನೀರನ್ನು ನದಿಯಿಂದ ಹೊರ ಬಿಡಲಾಗುತ್ತಿದೆ. ಅದರ ಬದಲಾಗಿ ಕಾಲುವೆಗಳಿಗೆ ನೀರು ಹರಿಸಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ.</p>.<p>‘ಕೇವಲ ಕೆರೆಗಳ ಭರ್ತಿಗಾಗಿ ಮಾತ್ರ ಸೀಮಿತ ಕಾಲುವೆಗಳಿಗೆ ನೀರು ಬಿಡಲಾಗುತ್ತಿದೆ. ಆದರೆ, ಕೃಷಿಗೆ ನೀರು ಬಿಡಬೇಕಾದರೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ಐಸಿಸಿ)ನಿರ್ಣಯ ಆಗಬೇಕು' ಎಂದು ಸೂಪರಿಂಟೆಂಡೆಂಟ್ ಎಂಜಿನಿಯರ್ ವಿ.ಆರ್.ಹಿರೇಗೌಡರ ತಿಳಿಸಿದರು.</p>.<p>ಬೆಂಗಳೂರಿನಲ್ಲಿ ಐಸಿಸಿ ಸಭೆ: ಈ ಬಾರಿ ಒಂದು ತಿಂಗಳು ಮೊದಲೇ ಜಲಾಶಯಗಳು ಭರ್ತಿಯತ್ತ ಸಾಗಿವೆ, ಹೀಗಾಗಿ ಕಾಲುವೆಗೆ ನೀರು ಬಿಡಬೇಕೆಂಬ ರೈತರ ಬೇಡಿಕೆಯೂ ಹೆಚ್ಚಿದೆ. ಕಾಲುವೆಗೆ ನೀರು ಹರಿಸುವ ಮಹತ್ವದ ಐಸಿಸಿ ಸಭೆ ಜುಲೈ 1 ಬೆಂಗಳೂರಿನಲ್ಲಿ ಮಧ್ಯಾಹ್ನ 3 ಕ್ಕೆ ನಡೆಯಲಿದೆ. ಐಸಿಸಿ ಅಧ್ಯಕ್ಷರೂ ಆಗಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಐಸಿಸಿ ಸದಸ್ಯ ಕಾರ್ಯದರ್ಶಿಯೂ ಆಗಿರುವ, ಭೀಮರಾಯನಗುಡಿ ಕಾಲುವೆ ವಲಯದ ಮುಖ್ಯ ಎಂಜಿನಿಯರ್ ಪ್ರೇಮಸಿಂಗ್ ತಿಳಿಸಿದರು.</p>.<p>ಪ್ರತಿಬಾರಿ ಆಲಮಟ್ಟಿಯಲ್ಲಿ ನಡೆಯುತ್ತಿದ್ದ ಐಸಿಸಿ ಸಭೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ.<br> ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜನಪ್ರತಿನಿಧಿಗಳು ಸದಸ್ಯರಾಗಿದ್ದು, ಐದು ಅಚ್ಚುಕಟ್ಟು ಜಿಲ್ಲೆಗಳಿಗೆ ಕಾಲುವೆಗೆ ನೀರು ಹರಿಸುವ ದಿನ ನಿಗದಿಗೊಳಿಸಲಿದ್ದಾರೆ.</p>.<div><blockquote>ಮೆಕ್ಕೆಜೋಳ ಈರುಳ್ಳಿ ನಾಟಿ ಮಾಡಲಾಗಿದೆ. ಹೀಗಾಗಿ ಕಾಲುವೆಗೆ ನೀರು ಹರಿಸಿದರೇ ಅನುಕೂಲವಾಗಲಿದೆ.</blockquote><span class="attribution">– ಶಿವಾನಂದ ಮುರನಾಳ, ರೈತ</span></div>.<div><blockquote>ಒಳಹರಿವು ಕಡಿಮೆಯಾಗಿದ್ದು ಹೀಗಾಗಿ ಹೊರಹರಿವನ್ನು 50 ಸಾವಿರ ಕ್ಯೂಸೆಕ್ ಗೆ ಇಳಿಸಲಾಗಿದೆ.</blockquote><span class="attribution">– ಡಿ.ಬಸವರಾಜ, ಮುಖ್ಯ ಎಂಜಿನಿಯರ್</span></div>.<p><strong>ಆರಂಭಗೊಳ್ಳದ ಕ್ಲೋಸರ್ ಕಾಮಗಾರಿ</strong></p><p>ಪ್ರತಿ ವರ್ಷ ಕಾಲುವೆಗಳ ದುರಸ್ತಿ ಹೂಳು ತೆಗೆಯುವುದು ಕಾಲುವೆ ಪಕ್ಕದ ಜಂಗಲ್ ಕಟ್ಟಿಂಗ್ ಸೇರಿದಂತೆ ನಾನಾ ಕಾಮಗಾರಿ ಕೈಗೊಂಡ ನಂತರ ಕಾಲುವೆಗೆ ನೀರು ಬಿಡಲಾಗುತ್ತಿತ್ತು. ಆದರೆ ಈ ವರ್ಷ ಕ್ಲೋಸರ್ ಕಾಮಗಾರಿಗೆ ಇನ್ನೂ ಟೆಂಡರ್ ಕರೆದಿಲ್ಲ. ಈ ಬಾರಿ ಕ್ಲೋಸರ್ ಕಾಮಗಾರಿ ನಡೆಯುವುದು ಅನುಮಾನ ಎನ್ನಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>