<p><strong>ವಿಜಯಪುರ: </strong>ಪಾಲಕರು ತಮ್ಮ ಮಕ್ಕಳನ್ನು ಅಂಕ ಮತ್ತು ಹಣ ಗಳಿಕೆಗೆ ಸೀಮಿತ ಮಾಡಬಾರದು. ಈ ಸಂಬಂಧ ಅವರ ಮೇಲೆ ಮಾನಸಿಕ ಒತ್ತಡ ಹೇರಬಾರದು ಎಂದು ಪ್ರಸಿದ್ಧಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಹೇಳಿದರು.</p>.<p>ನಗರದ ಬಿಎಲ್ ಡಿಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ಅಮೃತ ಮಹೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ವಿದ್ಯಾರ್ಥಿಗಳುಬದುಕಿನಲ್ಲಿ ಆಶಾಭಾವನೆ ಇಟ್ಟು ಕೊಳ್ಳಬೇಕು, ಸಾಧಕರಾಗಬೇಕು, ನಿಸ್ವಾರ್ಥಿಗಳಾಗಬೇಕು, ಜ್ಞಾನದಾಹಿಗಳಾಗಬೇಕು, ವಿದ್ಯಾರ್ಥಿಗಳು ವಿದ್ಯೆ, ವಿವೇಕ, ವಿದ್ವತ್, ಹೃದಯ ವೈಶಾಲ್ಯತೆ ಬೆಳಸಿಕೊಳ್ಳಬೇಕು ಎಂದರು.</p>.<p>ವಿದ್ಯಾರ್ಥಿಗಳು ತಂಬಾಕಿನ ತಲುಬಿಗೆ ಒಳಗಾಗಬಾರದು, ಗುಟ್ಕಾ ಸೇವನೆ ಬಿಡಬೇಕು ಎಂದು ಬುದ್ದಿಮಾತು ಹೇಳಿದರು.</p>.<p>ವಿದ್ಯಾರ್ಥಿಗಳು ಶಾಂತ ಮನಸ್ಸು, ಇಂದ್ರಿಯ ನಿಗ್ರಹ, ಸಹನೆ ಬೆಳಸಬೇಕು, ಸದಾ ಸಂತಸದಿಂದ ಇರಬೇಕು, ಶ್ರದ್ಧೆ ಬೆಳಸಿಕೊಳ್ಳಬೇಕು ಹಾಗೂ ಸಮಾದಾನ ಚಿತ್ತ ಬೆಳಸಬೇಕುಮಕ್ಕಳಿಗೆ ಬೇಕಾದ ಆರು ಸಂಪತ್ತು ಎಂದರು.</p>.<p>ಶಿಕ್ಷಕರಾದವರು ಶಾಂತ ಸ್ವಭಾವದವರಾಗಿರಬೇಕು, ಪ್ರೀತಿಯಿಂದ ಕಲಿಸಬೇಕು.ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಬೇಕು. ತಮ್ಮ ವಿದ್ಯಾರ್ಥಿಗಳಲ್ಲಿ ಶಿಸ್ತು, ಶಿಷ್ಟಾಚಾರ, ಧೈರ್ಯ, ಸ್ಥೈರ್ಯ ಬೆಳಸಲು ಆದ್ಯತೆ ನೀಡಬೇಕು ಎಂದರು.</p>.<p>ಜ್ಞಾನದ, ಸುಜ್ಞಾನದ ಬೆಳಕು ಇದ್ದಲ್ಲಿ ಅಜ್ಞಾನ ದೂರವಾಗುತ್ತದೆ ಎಂದು ಹೇಳಿದರು.</p>.<p>ಬಂಥನಾಳ ಶಿವಯೋಗಿ ಶ್ರೀಗಳ ಇಚ್ಛಾಶಕ್ತಿ, ಫ.ಗು.ಹಳಕಟ್ಟಿಯವರ ಜ್ಞಾನಶಕ್ತಿ ಹಾಗೂ ಬಂಗಾರಮ್ಮ ಸಜ್ಜನ, ಬಿ.ಎಂ.ಪಾಟೀಲರ ಕ್ರೀಯಾಶಕ್ತಿಯಿಂದ ಬಿಎಲ್ಡಿಇ ಸಂಸ್ಥೆ ಬೆಳೆದು ನಿಂತಿದೆಎಂದರು.</p>.<p>ಬೆಳಗಾವಿಯ ಕೆಎಲ್ಇ ಅಕ್ಕನಾದರೆ ವಿಜಯಪುರದ ಬಿಎಲ್ಡಿಇ ಅದರತಂಗಿಯಾಗಿದೆ ಎಂದು ಶ್ಲಾಘಿಸಿದರು.</p>.<p>ಅನ್ನದಾಸೋಹ ಮಾಡಿದಾಗ ಒಂದು ಹೊತ್ತು ಹೊಟ್ಟೆ ತುಂಬುತ್ತದೆ. ಅದೇ ವಿದ್ಯಾದಾನದಿಂದ ಇಡೀ ಬದುಕು ತುಂಬುತ್ತದೆ.ವಿದ್ಯಾ ಸಂಪತ್ತು ಗಳಿಸಬೇಕು ಮತ್ತು ದಾನ ಮಾಡಬೇಕು ಎಂದರು.</p>.<p>ವಿಜಯಪುರ ಜ್ಞಾನ ಯೋಗ ಆಶ್ರಮ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಎ.ಎಂ.ಪಾಟೀಲ (ಬಿಜ್ಜರಗಿ), ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಪತಿ ಡಾ.ಆರ್.ಎಸ್.ಮುಧೋಳ, ಕುಲಸಚಿವ ಡಾ.ಆರ್.ವಿ.ಕುಲಕರ್ಣಿ, ಆಡಳಿತಾಧಿಕಾರಿಗಳಾದ ಎಸ್.ಎಚ್.ಲಗಳಿ, ಬಿ.ಆರ್.ಪಾಟೀಲ, ಡಾ.ಕೆ.ಜಿ.ಪೂಜಾರಿ, ಪ್ರಾಚಾರ್ಯ ಡಾ. ಯು.ಎಸ್.ಪೂಜಾ ಉಪಸ್ಥಿತರಿದ್ದರು.</p>.<p>***</p>.<p>ವಿದ್ಯಾರ್ಥಿಗಳು ಏಕಾಗ್ರತೆ ಬೆಳಸಿಕೊಳ್ಳಬೇಕು, ಜೀವನದಲ್ಲಿ ಉನ್ನತ ಗುರಿ ಇಟ್ಟು ಕೊಳ್ಳಬೇಕು,ತಮ್ಮ ಸ್ವಂತ ಬಲದಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು</p>.<p>–ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ,ಹೃದ್ರೋಗ ತಜ್ಞೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಪಾಲಕರು ತಮ್ಮ ಮಕ್ಕಳನ್ನು ಅಂಕ ಮತ್ತು ಹಣ ಗಳಿಕೆಗೆ ಸೀಮಿತ ಮಾಡಬಾರದು. ಈ ಸಂಬಂಧ ಅವರ ಮೇಲೆ ಮಾನಸಿಕ ಒತ್ತಡ ಹೇರಬಾರದು ಎಂದು ಪ್ರಸಿದ್ಧಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಹೇಳಿದರು.</p>.<p>ನಗರದ ಬಿಎಲ್ ಡಿಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ಅಮೃತ ಮಹೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ವಿದ್ಯಾರ್ಥಿಗಳುಬದುಕಿನಲ್ಲಿ ಆಶಾಭಾವನೆ ಇಟ್ಟು ಕೊಳ್ಳಬೇಕು, ಸಾಧಕರಾಗಬೇಕು, ನಿಸ್ವಾರ್ಥಿಗಳಾಗಬೇಕು, ಜ್ಞಾನದಾಹಿಗಳಾಗಬೇಕು, ವಿದ್ಯಾರ್ಥಿಗಳು ವಿದ್ಯೆ, ವಿವೇಕ, ವಿದ್ವತ್, ಹೃದಯ ವೈಶಾಲ್ಯತೆ ಬೆಳಸಿಕೊಳ್ಳಬೇಕು ಎಂದರು.</p>.<p>ವಿದ್ಯಾರ್ಥಿಗಳು ತಂಬಾಕಿನ ತಲುಬಿಗೆ ಒಳಗಾಗಬಾರದು, ಗುಟ್ಕಾ ಸೇವನೆ ಬಿಡಬೇಕು ಎಂದು ಬುದ್ದಿಮಾತು ಹೇಳಿದರು.</p>.<p>ವಿದ್ಯಾರ್ಥಿಗಳು ಶಾಂತ ಮನಸ್ಸು, ಇಂದ್ರಿಯ ನಿಗ್ರಹ, ಸಹನೆ ಬೆಳಸಬೇಕು, ಸದಾ ಸಂತಸದಿಂದ ಇರಬೇಕು, ಶ್ರದ್ಧೆ ಬೆಳಸಿಕೊಳ್ಳಬೇಕು ಹಾಗೂ ಸಮಾದಾನ ಚಿತ್ತ ಬೆಳಸಬೇಕುಮಕ್ಕಳಿಗೆ ಬೇಕಾದ ಆರು ಸಂಪತ್ತು ಎಂದರು.</p>.<p>ಶಿಕ್ಷಕರಾದವರು ಶಾಂತ ಸ್ವಭಾವದವರಾಗಿರಬೇಕು, ಪ್ರೀತಿಯಿಂದ ಕಲಿಸಬೇಕು.ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಬೇಕು. ತಮ್ಮ ವಿದ್ಯಾರ್ಥಿಗಳಲ್ಲಿ ಶಿಸ್ತು, ಶಿಷ್ಟಾಚಾರ, ಧೈರ್ಯ, ಸ್ಥೈರ್ಯ ಬೆಳಸಲು ಆದ್ಯತೆ ನೀಡಬೇಕು ಎಂದರು.</p>.<p>ಜ್ಞಾನದ, ಸುಜ್ಞಾನದ ಬೆಳಕು ಇದ್ದಲ್ಲಿ ಅಜ್ಞಾನ ದೂರವಾಗುತ್ತದೆ ಎಂದು ಹೇಳಿದರು.</p>.<p>ಬಂಥನಾಳ ಶಿವಯೋಗಿ ಶ್ರೀಗಳ ಇಚ್ಛಾಶಕ್ತಿ, ಫ.ಗು.ಹಳಕಟ್ಟಿಯವರ ಜ್ಞಾನಶಕ್ತಿ ಹಾಗೂ ಬಂಗಾರಮ್ಮ ಸಜ್ಜನ, ಬಿ.ಎಂ.ಪಾಟೀಲರ ಕ್ರೀಯಾಶಕ್ತಿಯಿಂದ ಬಿಎಲ್ಡಿಇ ಸಂಸ್ಥೆ ಬೆಳೆದು ನಿಂತಿದೆಎಂದರು.</p>.<p>ಬೆಳಗಾವಿಯ ಕೆಎಲ್ಇ ಅಕ್ಕನಾದರೆ ವಿಜಯಪುರದ ಬಿಎಲ್ಡಿಇ ಅದರತಂಗಿಯಾಗಿದೆ ಎಂದು ಶ್ಲಾಘಿಸಿದರು.</p>.<p>ಅನ್ನದಾಸೋಹ ಮಾಡಿದಾಗ ಒಂದು ಹೊತ್ತು ಹೊಟ್ಟೆ ತುಂಬುತ್ತದೆ. ಅದೇ ವಿದ್ಯಾದಾನದಿಂದ ಇಡೀ ಬದುಕು ತುಂಬುತ್ತದೆ.ವಿದ್ಯಾ ಸಂಪತ್ತು ಗಳಿಸಬೇಕು ಮತ್ತು ದಾನ ಮಾಡಬೇಕು ಎಂದರು.</p>.<p>ವಿಜಯಪುರ ಜ್ಞಾನ ಯೋಗ ಆಶ್ರಮ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಎ.ಎಂ.ಪಾಟೀಲ (ಬಿಜ್ಜರಗಿ), ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಪತಿ ಡಾ.ಆರ್.ಎಸ್.ಮುಧೋಳ, ಕುಲಸಚಿವ ಡಾ.ಆರ್.ವಿ.ಕುಲಕರ್ಣಿ, ಆಡಳಿತಾಧಿಕಾರಿಗಳಾದ ಎಸ್.ಎಚ್.ಲಗಳಿ, ಬಿ.ಆರ್.ಪಾಟೀಲ, ಡಾ.ಕೆ.ಜಿ.ಪೂಜಾರಿ, ಪ್ರಾಚಾರ್ಯ ಡಾ. ಯು.ಎಸ್.ಪೂಜಾ ಉಪಸ್ಥಿತರಿದ್ದರು.</p>.<p>***</p>.<p>ವಿದ್ಯಾರ್ಥಿಗಳು ಏಕಾಗ್ರತೆ ಬೆಳಸಿಕೊಳ್ಳಬೇಕು, ಜೀವನದಲ್ಲಿ ಉನ್ನತ ಗುರಿ ಇಟ್ಟು ಕೊಳ್ಳಬೇಕು,ತಮ್ಮ ಸ್ವಂತ ಬಲದಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು</p>.<p>–ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ,ಹೃದ್ರೋಗ ತಜ್ಞೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>