<p><strong>ಅಳ್ನಾವರ</strong>: ಪ್ರಭು ಯೇಸು ಅವರ ಜೀವನದ ಕೊನೆಯ ಕ್ಷಣಗಳ ಪವಿತ್ರ ಈಸ್ಟರ್ ಆಚರಣೆಯ ಮೊದಲನೇ ಭಾನುವಾರ ಇಲ್ಲಿನ ಸಂತ ಅನ್ನಮ್ಮ ಚರ್ಚ್ನಲ್ಲಿ ವಿಶೇಷ<br> ಪ್ರಾರ್ಥನೆಯೊಂದಿಗೆ ತಾಳೆಗರಿಗಳನ್ನು ಧರ್ಮಗುರುಗಳು ಆಶೀರ್ವದಿಸಿ, ಪೂಜಿಸಿ, ಕ್ರೈಸ್ತರಿಗೆ ವಿತರಿಸಿದರು.</p>.<p>ಫಾದರ್ ಜೋಸೆಫ್ ರೂಡ್ರಿಗ್ಸ್ ಆಶೀರ್ವಚನ ನೀಡಿ, ಯೇಸು ಅವರನ್ನು ಸಿಲುಬೆಗೆ ಏರಿಸುವ ಮುನ್ನ ಪಟ್ಟ ಕಷ್ಟ, ಅಪವಾದ, ಯಾತನೆ ಸನ್ನಿವೇಶಗಳನ್ನು ಏಳೆ ಏಳೆಯಾಗಿ ಬಡಿಸಿಟ್ಟು, ಸಿಲುಬೆಗೆ ಎರುವ ವಾರದ ಮುನ್ನ ಧ್ಯಾನಿಸಲು ಈ ಆಚರಣೆ ನಡೆದು ಬಂದಿದೆ ಎಂದರು.</p>.<p>ಜೆರೋಸಲಿಯಂಗೆ ಕ್ರಿಸ್ತನ ವಿಜಯೋತ್ಸವದ ಪ್ರವೇಶ ಸ್ಮರಿಸುವ ಸಂಪ್ರದಾಯ ಅನಾದಿ ಕಾಲದಿಂದ ನಡೆದು ಬಂದಿದೆ. ಯೇಸು ಅವರನ್ನು ರಾಜನ ರೂಪದಲ್ಲಿ ನೋಡಲು ಬಯಸಿದ ಪ್ರಜೆಗಳು ಅವರನ್ನು ಒತ್ತಾಯಪೂರ್ವಕವಾಗಿ ಮೆರವಣಿಗೆ ಮಾಡಲು ಹೊರಡುತ್ತಾರೆ.</p>.<p>ಸಾಮಾನ್ಯ ಮಾನವನ ರೂಪದ ಯೇಸು ಅವರು ಕುದುರೆ ಬದಲು ಕತ್ತೆ ಮೇಲೆ ಕುಳಿತು ಮೆರವಣಿಗೆ ಹೊರಡುತ್ತಾರೆ. ಅವರ ಪ್ರವೇಶ ಸ್ವಾಗತಿಸಲು ಮತ್ತು ಗೌರವಿಸಲು ಜನ ಸಮೂಹದಿಂದ ಬೀಸಲ್ಪಟ್ಟ ತಾಳೆ ಕೊಂಬೆಗಳಿಂದ ಆ ಆಚರಣೆ ಹುಟ್ಟುಕೊಂಡಿದೆ ಎಂದರು.</p>.<p>ಧರ್ಮಗುರುಗಳು ನೀಡಿದ ತಾಳೆ ಗರಿಗಳನ್ನು ಕ್ರೈಸ್ತರು ತಮ್ಮ ಮೆನಗಳಿಗೆ ತೆಗೆದುಕೊಂಡು ಹೋದರು. ಅದಕ್ಕೂ ಮುಂಚೆ ಚರ್ಚ್ ಆವರಣದಲ್ಲಿ ತಾಳೆಗರಿಗಳ ಮೆರವಣಿಗೆ ನಡೆಯಿತು. ಪ್ರಾರ್ಥನೆಯಿಂದ ಪಡೆದ ಈ ಪವಿತ್ರ ತಾಳೆ ಗರಿಗಳನ್ನು ಮನೆಗಳಲ್ಲಿ ನೇತು ಹಾಕುವುದು ಮತ್ತು ಪವಿತ್ರ ಬೈಬಲ್ ಗ್ರಂಥದಲ್ಲಿಡುವುದು ವಾಡಿಕೆ, ಹಲವರು ಇದನ್ನು ಸಿಲುಬೆ<br /> ರೂಪದಲ್ಲಿ ನೇಯ್ದು ಮನೆಯಲ್ಲಿ ನೇತು ಹಾಕುತ್ತಾರೆ. ಇನ್ನೂ ಹಲವರು ಚಿಕ್ಕ ರೂಪದಲ್ಲಿ ನೇಯ್ದು ಕೊರಳಲ್ಲಿ ಹಾಕಿಕೊಳ್ಳವುದು ವಾಡಿಕೆ. ಜನರಿಗೆ ಕಷ್ಟ ಬಂದಾಗ ಈ ತಾಳೆ<br /> ಗರಿಗಳಿಗೆ ಪ್ರಾರ್ಥಿಸುವುದು ರೂಢಿಯಲ್ಲಿದೆ ಎಂದು ಕ್ರೈಸ್ಥ ಸಮಾಜದ ಹಿರಿಯರು ಹೇಳುತ್ತಾರೆ.</p>.<p>ಹಲವು ರಾಷ್ಟ್ರಗಳಲ್ಲಿ ತಾಳೆ ಮರದ ಬದಲು ಆಲಿವ್, ವಿಲೋ ಸ್ಥಳೀಯ ಮರಗಳ ಕೊಂಬೆ ಬಳಕೆ ರೂಢಿಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳ್ನಾವರ</strong>: ಪ್ರಭು ಯೇಸು ಅವರ ಜೀವನದ ಕೊನೆಯ ಕ್ಷಣಗಳ ಪವಿತ್ರ ಈಸ್ಟರ್ ಆಚರಣೆಯ ಮೊದಲನೇ ಭಾನುವಾರ ಇಲ್ಲಿನ ಸಂತ ಅನ್ನಮ್ಮ ಚರ್ಚ್ನಲ್ಲಿ ವಿಶೇಷ<br> ಪ್ರಾರ್ಥನೆಯೊಂದಿಗೆ ತಾಳೆಗರಿಗಳನ್ನು ಧರ್ಮಗುರುಗಳು ಆಶೀರ್ವದಿಸಿ, ಪೂಜಿಸಿ, ಕ್ರೈಸ್ತರಿಗೆ ವಿತರಿಸಿದರು.</p>.<p>ಫಾದರ್ ಜೋಸೆಫ್ ರೂಡ್ರಿಗ್ಸ್ ಆಶೀರ್ವಚನ ನೀಡಿ, ಯೇಸು ಅವರನ್ನು ಸಿಲುಬೆಗೆ ಏರಿಸುವ ಮುನ್ನ ಪಟ್ಟ ಕಷ್ಟ, ಅಪವಾದ, ಯಾತನೆ ಸನ್ನಿವೇಶಗಳನ್ನು ಏಳೆ ಏಳೆಯಾಗಿ ಬಡಿಸಿಟ್ಟು, ಸಿಲುಬೆಗೆ ಎರುವ ವಾರದ ಮುನ್ನ ಧ್ಯಾನಿಸಲು ಈ ಆಚರಣೆ ನಡೆದು ಬಂದಿದೆ ಎಂದರು.</p>.<p>ಜೆರೋಸಲಿಯಂಗೆ ಕ್ರಿಸ್ತನ ವಿಜಯೋತ್ಸವದ ಪ್ರವೇಶ ಸ್ಮರಿಸುವ ಸಂಪ್ರದಾಯ ಅನಾದಿ ಕಾಲದಿಂದ ನಡೆದು ಬಂದಿದೆ. ಯೇಸು ಅವರನ್ನು ರಾಜನ ರೂಪದಲ್ಲಿ ನೋಡಲು ಬಯಸಿದ ಪ್ರಜೆಗಳು ಅವರನ್ನು ಒತ್ತಾಯಪೂರ್ವಕವಾಗಿ ಮೆರವಣಿಗೆ ಮಾಡಲು ಹೊರಡುತ್ತಾರೆ.</p>.<p>ಸಾಮಾನ್ಯ ಮಾನವನ ರೂಪದ ಯೇಸು ಅವರು ಕುದುರೆ ಬದಲು ಕತ್ತೆ ಮೇಲೆ ಕುಳಿತು ಮೆರವಣಿಗೆ ಹೊರಡುತ್ತಾರೆ. ಅವರ ಪ್ರವೇಶ ಸ್ವಾಗತಿಸಲು ಮತ್ತು ಗೌರವಿಸಲು ಜನ ಸಮೂಹದಿಂದ ಬೀಸಲ್ಪಟ್ಟ ತಾಳೆ ಕೊಂಬೆಗಳಿಂದ ಆ ಆಚರಣೆ ಹುಟ್ಟುಕೊಂಡಿದೆ ಎಂದರು.</p>.<p>ಧರ್ಮಗುರುಗಳು ನೀಡಿದ ತಾಳೆ ಗರಿಗಳನ್ನು ಕ್ರೈಸ್ತರು ತಮ್ಮ ಮೆನಗಳಿಗೆ ತೆಗೆದುಕೊಂಡು ಹೋದರು. ಅದಕ್ಕೂ ಮುಂಚೆ ಚರ್ಚ್ ಆವರಣದಲ್ಲಿ ತಾಳೆಗರಿಗಳ ಮೆರವಣಿಗೆ ನಡೆಯಿತು. ಪ್ರಾರ್ಥನೆಯಿಂದ ಪಡೆದ ಈ ಪವಿತ್ರ ತಾಳೆ ಗರಿಗಳನ್ನು ಮನೆಗಳಲ್ಲಿ ನೇತು ಹಾಕುವುದು ಮತ್ತು ಪವಿತ್ರ ಬೈಬಲ್ ಗ್ರಂಥದಲ್ಲಿಡುವುದು ವಾಡಿಕೆ, ಹಲವರು ಇದನ್ನು ಸಿಲುಬೆ<br /> ರೂಪದಲ್ಲಿ ನೇಯ್ದು ಮನೆಯಲ್ಲಿ ನೇತು ಹಾಕುತ್ತಾರೆ. ಇನ್ನೂ ಹಲವರು ಚಿಕ್ಕ ರೂಪದಲ್ಲಿ ನೇಯ್ದು ಕೊರಳಲ್ಲಿ ಹಾಕಿಕೊಳ್ಳವುದು ವಾಡಿಕೆ. ಜನರಿಗೆ ಕಷ್ಟ ಬಂದಾಗ ಈ ತಾಳೆ<br /> ಗರಿಗಳಿಗೆ ಪ್ರಾರ್ಥಿಸುವುದು ರೂಢಿಯಲ್ಲಿದೆ ಎಂದು ಕ್ರೈಸ್ಥ ಸಮಾಜದ ಹಿರಿಯರು ಹೇಳುತ್ತಾರೆ.</p>.<p>ಹಲವು ರಾಷ್ಟ್ರಗಳಲ್ಲಿ ತಾಳೆ ಮರದ ಬದಲು ಆಲಿವ್, ವಿಲೋ ಸ್ಥಳೀಯ ಮರಗಳ ಕೊಂಬೆ ಬಳಕೆ ರೂಢಿಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>