ಈ ಕುರಿತು ‘ಪ್ರಜಾವಾಣಿ’ ಗುರುವಾರ ಸುದ್ದಿ ಪ್ರಕಟಿಸಿತ್ತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ನಿರ್ದೇಶಕ ಗೋಪಾಲಕೃಷ್ಣ ಅವರು ಗೊಳಸಂಗಿ ಎಸ್ಆರ್ಎಡಿ ಮುಖ್ಯಶಿಕ್ಷಕ ಎಸ್.ಎಂ.ತಾವರಖೇಡ ಅವರಿಗೆ ಶನಿವಾರ ಕರೆ ಮಾಡಿ, ಸುಮಂತ ಕುಪ್ಪಸ್ತನ ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿನ ಲೋಪವನ್ನು ಸರಿಪಡಿಸಲಾಗಿದ್ದು, ತಾತ್ಕಾಲಿಕ ಅಂಕಪಟ್ಟಿ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.