<p><strong>ಆಲಮಟ್ಟಿ:</strong> ಸಮೀಪದ ವಂದಾಲ ಗ್ರಾಮದ ಪ್ರಸಿದ್ಧ ಬನಶಂಕರಿ ದೇವಿ ಜಾತ್ರೆ ಜ.7 ರಿಂದ ನಾಲ್ಕು ದಿನಗಳ ಕಾಲ ಜರುಗಲಿದೆ. ಈಗಾಗಲೇ ಕಿರುರಥೋತ್ಸವ (ಹುಚ್ಚಯ್ಯನ ತೇರು) ಶನಿವಾರದಿಂದ ನಿತ್ಯ ಐದು ದಿನಗಳ ಕಾಲ ಆರಂಭಗೊಂಡಿದೆ.</p>.<p>ಜ.7 ರಂದು ಬನಶಂಕರಿ ದೇವಿಗೆ ವಿಶೇಷ ಪೂಜೆ ಜರುಗಲಿದ್ದು, ನಸುಕಿನ ಜಾವ ಸಹಸ್ರಾರು ಭಕ್ತರು ದೀಡ ನಮಸ್ಕಾರ ಹಾಕಿ ತಮ್ಮ ಹರಕೆ ತೀರಿಸಲಿದ್ದಾರೆ. ನಂತರ ದೇವಿಗೆ ವಿಶೇಷ ಪೂಜೆ, ಮಹಾ ಅಭಿಷೇಕ ಜರುಗಲಿದೆ.</p>.<p>ಮಧ್ಯಾಹ್ನ 2.30 ರಿಂದ ಎರಡು ಗಂಟೆಗಳ ಕಾಲ ಕಳಸದ ಮೆರವಣಿಗೆ ಗ್ರಾಮದಲ್ಲಿ ಜರುಗಲಿದೆ.<br> ಸಂಜೆ 5 ಕ್ಕೆ ಬನಶಂಕರಿ ದೇವಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. 7 ಕ್ಕೆ ಹೂಮಾಲೆಯ ಮೆರವಣಿಗೆ ನಡೆಯಲಿದೆ.</p>.<p>ಜ.8 ರಂದು ಮಧ್ಯಾಹ್ನ 2 ಕ್ಕೆ ದ್ಯಾಮವ್ವನ ಸೋಗು ನಡೆಯಲಿದ್ದು, ಸಂಜೆ 7 ಕ್ಕೆ ಗೌರಿ ಉತ್ಸವ ಜರುಗಲಿದೆ. ರಾತ್ರಿ 10 ಕ್ಕೆ 'ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ' ನಾಟಕ ಪ್ರದರ್ಶನಗೊಳ್ಳಲಿದೆ.<br /> ಜ.9 ರಂದು ಭಾರ ಎತ್ತುವ ಸ್ಪರ್ಧೆಗಳು, ಸಂಜೆ 4 ಕ್ಕೆ ಕುಸ್ತಿ ಪಂದ್ಯಾವಳಿ ನಡೆಯಲಿದೆ. ರಾತ್ರಿ 10 ಕ್ಕೆ ' ಮಾರಿಕಣ್ಣು ಹೋರಿಮ್ಯಾಲೆ' ಎಂಬ ನಾಟಕ ಪ್ರದರ್ಶನ ಜರುಗಲಿದೆ.</p>.<p>ಜ.10 ರಂದು ಬಸವೇಶ್ವರ ಮೂರ್ತಿಯ ವಿಸರ್ಜನೆ ನಡೆಯಲಿದೆ. ಜಾತ್ರೆಯ ನಾಲ್ಕು ದಿನಗಳ ಕಾಲ ನಿರಂತರ ಅನ್ನ ದಾಸೋಹ ಜರುಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮಟ್ಟಿ:</strong> ಸಮೀಪದ ವಂದಾಲ ಗ್ರಾಮದ ಪ್ರಸಿದ್ಧ ಬನಶಂಕರಿ ದೇವಿ ಜಾತ್ರೆ ಜ.7 ರಿಂದ ನಾಲ್ಕು ದಿನಗಳ ಕಾಲ ಜರುಗಲಿದೆ. ಈಗಾಗಲೇ ಕಿರುರಥೋತ್ಸವ (ಹುಚ್ಚಯ್ಯನ ತೇರು) ಶನಿವಾರದಿಂದ ನಿತ್ಯ ಐದು ದಿನಗಳ ಕಾಲ ಆರಂಭಗೊಂಡಿದೆ.</p>.<p>ಜ.7 ರಂದು ಬನಶಂಕರಿ ದೇವಿಗೆ ವಿಶೇಷ ಪೂಜೆ ಜರುಗಲಿದ್ದು, ನಸುಕಿನ ಜಾವ ಸಹಸ್ರಾರು ಭಕ್ತರು ದೀಡ ನಮಸ್ಕಾರ ಹಾಕಿ ತಮ್ಮ ಹರಕೆ ತೀರಿಸಲಿದ್ದಾರೆ. ನಂತರ ದೇವಿಗೆ ವಿಶೇಷ ಪೂಜೆ, ಮಹಾ ಅಭಿಷೇಕ ಜರುಗಲಿದೆ.</p>.<p>ಮಧ್ಯಾಹ್ನ 2.30 ರಿಂದ ಎರಡು ಗಂಟೆಗಳ ಕಾಲ ಕಳಸದ ಮೆರವಣಿಗೆ ಗ್ರಾಮದಲ್ಲಿ ಜರುಗಲಿದೆ.<br> ಸಂಜೆ 5 ಕ್ಕೆ ಬನಶಂಕರಿ ದೇವಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. 7 ಕ್ಕೆ ಹೂಮಾಲೆಯ ಮೆರವಣಿಗೆ ನಡೆಯಲಿದೆ.</p>.<p>ಜ.8 ರಂದು ಮಧ್ಯಾಹ್ನ 2 ಕ್ಕೆ ದ್ಯಾಮವ್ವನ ಸೋಗು ನಡೆಯಲಿದ್ದು, ಸಂಜೆ 7 ಕ್ಕೆ ಗೌರಿ ಉತ್ಸವ ಜರುಗಲಿದೆ. ರಾತ್ರಿ 10 ಕ್ಕೆ 'ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ' ನಾಟಕ ಪ್ರದರ್ಶನಗೊಳ್ಳಲಿದೆ.<br /> ಜ.9 ರಂದು ಭಾರ ಎತ್ತುವ ಸ್ಪರ್ಧೆಗಳು, ಸಂಜೆ 4 ಕ್ಕೆ ಕುಸ್ತಿ ಪಂದ್ಯಾವಳಿ ನಡೆಯಲಿದೆ. ರಾತ್ರಿ 10 ಕ್ಕೆ ' ಮಾರಿಕಣ್ಣು ಹೋರಿಮ್ಯಾಲೆ' ಎಂಬ ನಾಟಕ ಪ್ರದರ್ಶನ ಜರುಗಲಿದೆ.</p>.<p>ಜ.10 ರಂದು ಬಸವೇಶ್ವರ ಮೂರ್ತಿಯ ವಿಸರ್ಜನೆ ನಡೆಯಲಿದೆ. ಜಾತ್ರೆಯ ನಾಲ್ಕು ದಿನಗಳ ಕಾಲ ನಿರಂತರ ಅನ್ನ ದಾಸೋಹ ಜರುಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>