ಕೋವಿಡ್ ಹಿನ್ನೆಲೆಯಲ್ಲಿಏಳು ದಿನದಗಣೇಶೋತ್ಸವಕ್ಕೆ ಮಾತ್ರ ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದರಿಂದ ಬಹುತೇಕ ಸಂಘ, ಸಂಸ್ಥೆಗಳು, ಗಣೇಶೋತ್ಸವ ಮಂಡಳಿಗಳು ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಗಳನ್ನು ಗುರುವಾರ ವಿಸರ್ಜಿಸಿದರು. ಆದರೆ, ನಗರದ ಶಿವಾಜಿ ಸರ್ಕಲ್ನಲ್ಲಿ ಶ್ರೀ ಗಜಾನನ ಉತ್ಸವ ಮಹಾಮಂಡಳ ಪ್ರತಿಷ್ಠಾಪಿಸಿರುವ ಗಣೇಶ ಸೇರಿದಂತೆ ನಾಲ್ಕೈದು ಪ್ರಮುಖ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಒಂಬತ್ತನೇ ದಿನದಂದು ಮಾಡಲು ನಿರ್ಧರಿಸಿದ್ದಾರೆ.