ನಾಮ, ರೂಪ, ಗುಣ, ದೋಷಗಳಿಂದ ಮುಕ್ತವಾಗಿರುವ, ಜಾತಿ, ನೀತಿ, ಕುಲ, ಗೋತ್ರಗಳಿಂದ ಹೊರತಾಗಿರುಬ, ದೇಶ, ಕಾಲಗಳಿಗೂ, ಇಂದ್ರಿಯಗಳಿಗೂ ಅತೀತವಾಗಿರುವ ‘ಅದು’ ನೀನೇ ಆಗಿರುವೆ. ಆ ‘ನಿನ್ನನ್ನು’ ಕುರಿತು ಧ್ಯಾನಿಸು. ಆ ‘ನೀನೇ’ ಗುರು. ಇದನ್ನೇ ರಾಷ್ಟ್ರಕವಿ ಕುವೆಂಪು ಅವರು ‘ಅಂತರತಮ ನೀ ಗುರು ಹೇ ಆತ್ಮ ತಮೋಹಾರಿ’ ಎಂದು ವರ್ಣಿಸಿದ್ದಾರೆ.