<p>ಬಸವಣ್ಣನವರ ವಚನದಂತೆ, ಶಿವಪಥವರಿವೊಡೆ ಗುರುಪಥವೇ ಮೊದಲು. ಇಂದು ಗುರುಪೂರ್ಣಿಮಾ - ಆಷಾಢ ಮಾಸದ ಹುಣ್ಣಿಮೆ. ಇಂದು ವೇದಗಳನ್ನು ಸಂಗ್ರಹಿಸಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಜಗತ್ತಿಗೆ ನೀಡಿದ ಮಾನವಕುಲದ ಮೂಲ ಗುರು ಬ್ರಹ್ಮರ್ಷಿ ವ್ಯಾಸರ ಜನ್ಮದಿನ. ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದ ದಿನ, ಬುದ್ಧ ತನ್ನ ಪ್ರಥಮ ಧರ್ಮೋಪದೇಶ ನೀಡಿದ ಶುಭದಿನ.</p>.<p>ಶ್ರೀ ರಾಮಕೃಷ್ಣ ಪರಮಹಂಸರು ಹೇಳುವಂತೆ ‘ನಿನ್ನ ಅಂತರಾತ್ಮವೇ ನಿಜವಾದ ಗುರು’ ಈ ವಿಶೇಷ ದಿನದಂದು ಆ ಗುರುವಿನ ಕೃಪೆಗೆ ಪಾತ್ರರಾಗಲೆಂದೆ ನಮ್ಮ ಆಧ್ಯಾತ್ಮಿಕ ಸಾಧನೆ - ಅಂತರಿಕ ಹೋರಾಟಗಳು ಎಲ್ಲವೂ ನೆಡೆಯುತ್ತಿರುವುದು. ಅವನ ನಿಜ ಸ್ವರೂಪವನ್ನು ಶಂಕರರು ತಮ್ಮ ‘ವಿವೇಕಚೂಡಾಮಣಿ’ಯಲ್ಲಿ ಹೀಗೆ ವಿವರಿಸಿದ್ದಾರೆ.</p>.<p>ಜಾತಿ -ನೀತಿ -ಕುಲ- ಗೋತ್ರ- ದೂರಗಂ<br />ನಾಮ -ರೂಪ -ಗುಣ -ದೋಷ ವರ್ಜಿತಂ|<br />ದೇಶ -ಕಾಲ- ವಿಷಯಾತಿವರ್ತಿ ಯದ್<br />ಬ್ರಹ್ಮ ತತ್ವಮಸಿ ಭಾವ ಯಾತ್ಮನಿ||</p>.<p>ನಾಮ, ರೂಪ, ಗುಣ, ದೋಷಗಳಿಂದ ಮುಕ್ತವಾಗಿರುವ, ಜಾತಿ, ನೀತಿ, ಕುಲ, ಗೋತ್ರಗಳಿಂದ ಹೊರತಾಗಿರುಬ, ದೇಶ, ಕಾಲಗಳಿಗೂ, ಇಂದ್ರಿಯಗಳಿಗೂ ಅತೀತವಾಗಿರುವ ‘ಅದು’ ನೀನೇ ಆಗಿರುವೆ. ಆ ‘ನಿನ್ನನ್ನು’ ಕುರಿತು ಧ್ಯಾನಿಸು. ಆ ‘ನೀನೇ’ ಗುರು. ಇದನ್ನೇ ರಾಷ್ಟ್ರಕವಿ ಕುವೆಂಪು ಅವರು ‘ಅಂತರತಮ ನೀ ಗುರು ಹೇ ಆತ್ಮ ತಮೋಹಾರಿ’ ಎಂದು ವರ್ಣಿಸಿದ್ದಾರೆ.</p>.<p>ಅಂತರಾತ್ಮದ ಅಂತರವನ್ನು ನೀಗಿಸಿ ನಿರಂತರ ಸತ್ಯದರ್ಶನ ಮಾಡಿಸುವ ಗುರುವಿಗೆ ನಮನವೇ ಗುರುಪೂರ್ಣಿಮಾ. ವಂದೇ ಗುರುಪರಂಪರಂ...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಣ್ಣನವರ ವಚನದಂತೆ, ಶಿವಪಥವರಿವೊಡೆ ಗುರುಪಥವೇ ಮೊದಲು. ಇಂದು ಗುರುಪೂರ್ಣಿಮಾ - ಆಷಾಢ ಮಾಸದ ಹುಣ್ಣಿಮೆ. ಇಂದು ವೇದಗಳನ್ನು ಸಂಗ್ರಹಿಸಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಜಗತ್ತಿಗೆ ನೀಡಿದ ಮಾನವಕುಲದ ಮೂಲ ಗುರು ಬ್ರಹ್ಮರ್ಷಿ ವ್ಯಾಸರ ಜನ್ಮದಿನ. ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದ ದಿನ, ಬುದ್ಧ ತನ್ನ ಪ್ರಥಮ ಧರ್ಮೋಪದೇಶ ನೀಡಿದ ಶುಭದಿನ.</p>.<p>ಶ್ರೀ ರಾಮಕೃಷ್ಣ ಪರಮಹಂಸರು ಹೇಳುವಂತೆ ‘ನಿನ್ನ ಅಂತರಾತ್ಮವೇ ನಿಜವಾದ ಗುರು’ ಈ ವಿಶೇಷ ದಿನದಂದು ಆ ಗುರುವಿನ ಕೃಪೆಗೆ ಪಾತ್ರರಾಗಲೆಂದೆ ನಮ್ಮ ಆಧ್ಯಾತ್ಮಿಕ ಸಾಧನೆ - ಅಂತರಿಕ ಹೋರಾಟಗಳು ಎಲ್ಲವೂ ನೆಡೆಯುತ್ತಿರುವುದು. ಅವನ ನಿಜ ಸ್ವರೂಪವನ್ನು ಶಂಕರರು ತಮ್ಮ ‘ವಿವೇಕಚೂಡಾಮಣಿ’ಯಲ್ಲಿ ಹೀಗೆ ವಿವರಿಸಿದ್ದಾರೆ.</p>.<p>ಜಾತಿ -ನೀತಿ -ಕುಲ- ಗೋತ್ರ- ದೂರಗಂ<br />ನಾಮ -ರೂಪ -ಗುಣ -ದೋಷ ವರ್ಜಿತಂ|<br />ದೇಶ -ಕಾಲ- ವಿಷಯಾತಿವರ್ತಿ ಯದ್<br />ಬ್ರಹ್ಮ ತತ್ವಮಸಿ ಭಾವ ಯಾತ್ಮನಿ||</p>.<p>ನಾಮ, ರೂಪ, ಗುಣ, ದೋಷಗಳಿಂದ ಮುಕ್ತವಾಗಿರುವ, ಜಾತಿ, ನೀತಿ, ಕುಲ, ಗೋತ್ರಗಳಿಂದ ಹೊರತಾಗಿರುಬ, ದೇಶ, ಕಾಲಗಳಿಗೂ, ಇಂದ್ರಿಯಗಳಿಗೂ ಅತೀತವಾಗಿರುವ ‘ಅದು’ ನೀನೇ ಆಗಿರುವೆ. ಆ ‘ನಿನ್ನನ್ನು’ ಕುರಿತು ಧ್ಯಾನಿಸು. ಆ ‘ನೀನೇ’ ಗುರು. ಇದನ್ನೇ ರಾಷ್ಟ್ರಕವಿ ಕುವೆಂಪು ಅವರು ‘ಅಂತರತಮ ನೀ ಗುರು ಹೇ ಆತ್ಮ ತಮೋಹಾರಿ’ ಎಂದು ವರ್ಣಿಸಿದ್ದಾರೆ.</p>.<p>ಅಂತರಾತ್ಮದ ಅಂತರವನ್ನು ನೀಗಿಸಿ ನಿರಂತರ ಸತ್ಯದರ್ಶನ ಮಾಡಿಸುವ ಗುರುವಿಗೆ ನಮನವೇ ಗುರುಪೂರ್ಣಿಮಾ. ವಂದೇ ಗುರುಪರಂಪರಂ...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>