<p><strong>ವಿಜಯಪುರ:</strong> ನಗರದ ಎನ್.ಜಿ.ಒ ಕಾಲೊನಿಯಲ್ಲಿರುವ ಜೈ ಶ್ರೀ ಆಂಜನೇಯ ದೇವಸ್ಥಾನದ 6ನೇ ಜಾತ್ರಾ ಮಹೋತ್ಸವದ ಆಂಜನೇಯ ಬೆಳ್ಳಿ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಶನಿವಾರ ನಡೆಯಿತು.</p>.<p>ಆಂಜನೇಯ ಭಜನೆ, ರಾಮನಾಮ ಪಠಣ ಮತ್ತು ಸಕಲ ವಾದ್ಯಗಳೊಂದಿಗೆ ದೇವಸ್ಥಾನದಿಂದ ಹೊರಟ ಆಂಜನೇಯ ಉತ್ಸವ ಮೂರ್ತಿಯ ಮೆರವಣಿಗೆಯು ನವರಸಪುರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ನಂತರ ಪುನಃ ಆಂಜನೇಯ ದೇವಸ್ಥಾನಕ್ಕೆ ಬಂದು ತಲುಪಿತು.</p>.<p>ಮೆರವಣಿಗೆ ಉದ್ಘಾಟಿಸಿದ ಪ್ರೊ.ಎಂ.ಎನ್.ಉಕುಮನಾಳ, ‘ಪ್ರತಿದಿನ ಧ್ಯಾನ, ತಪಸ್ಸು, ಪ್ರಾರ್ಥನೆ, ಮಂತ್ರ ಪಠಣ, ದೇವರ ನಾಮಸ್ಮರಣೆ, ಪುರಾಣ, ಪ್ರವಚನ, ಕೀರ್ತನೆ ಮತ್ತು ಜೀವನ ಸಂದೇಶ ನೀಡುವ ಅಧ್ಯಾತ್ಮದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.</p>.<p>ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಅಮ್ಮಣ್ಣ ದಂಧರಗಿ, ಎಸ್.ಎಂ.ಪತ್ತಾರ, ಮಹಾದೇವ ಪಾಟೀಲ, ಎಂ.ಆರ್.ಪಾಟೀಲ, ಶ್ರೀರಾಮ ದೇಶಪಾಂಡೆ, ಪ್ರಭು ಬಳೂಲಗಿಡದ, ವೆಂಕಟೇಶ ವೈದ್ಯ, ಶ್ರೀಶೈಲ ಮಠಪತಿ, ಮನೋಜ ಬಿರಾದಾರ, ಜಗದೀಶ ಅಳ್ಳಗಿ, ಆರ್.ಎಸ್.ತಳವಾರ, ಬಸವರಾಜ ಕನ್ನೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ನಗರದ ಎನ್.ಜಿ.ಒ ಕಾಲೊನಿಯಲ್ಲಿರುವ ಜೈ ಶ್ರೀ ಆಂಜನೇಯ ದೇವಸ್ಥಾನದ 6ನೇ ಜಾತ್ರಾ ಮಹೋತ್ಸವದ ಆಂಜನೇಯ ಬೆಳ್ಳಿ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಶನಿವಾರ ನಡೆಯಿತು.</p>.<p>ಆಂಜನೇಯ ಭಜನೆ, ರಾಮನಾಮ ಪಠಣ ಮತ್ತು ಸಕಲ ವಾದ್ಯಗಳೊಂದಿಗೆ ದೇವಸ್ಥಾನದಿಂದ ಹೊರಟ ಆಂಜನೇಯ ಉತ್ಸವ ಮೂರ್ತಿಯ ಮೆರವಣಿಗೆಯು ನವರಸಪುರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ನಂತರ ಪುನಃ ಆಂಜನೇಯ ದೇವಸ್ಥಾನಕ್ಕೆ ಬಂದು ತಲುಪಿತು.</p>.<p>ಮೆರವಣಿಗೆ ಉದ್ಘಾಟಿಸಿದ ಪ್ರೊ.ಎಂ.ಎನ್.ಉಕುಮನಾಳ, ‘ಪ್ರತಿದಿನ ಧ್ಯಾನ, ತಪಸ್ಸು, ಪ್ರಾರ್ಥನೆ, ಮಂತ್ರ ಪಠಣ, ದೇವರ ನಾಮಸ್ಮರಣೆ, ಪುರಾಣ, ಪ್ರವಚನ, ಕೀರ್ತನೆ ಮತ್ತು ಜೀವನ ಸಂದೇಶ ನೀಡುವ ಅಧ್ಯಾತ್ಮದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.</p>.<p>ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಅಮ್ಮಣ್ಣ ದಂಧರಗಿ, ಎಸ್.ಎಂ.ಪತ್ತಾರ, ಮಹಾದೇವ ಪಾಟೀಲ, ಎಂ.ಆರ್.ಪಾಟೀಲ, ಶ್ರೀರಾಮ ದೇಶಪಾಂಡೆ, ಪ್ರಭು ಬಳೂಲಗಿಡದ, ವೆಂಕಟೇಶ ವೈದ್ಯ, ಶ್ರೀಶೈಲ ಮಠಪತಿ, ಮನೋಜ ಬಿರಾದಾರ, ಜಗದೀಶ ಅಳ್ಳಗಿ, ಆರ್.ಎಸ್.ತಳವಾರ, ಬಸವರಾಜ ಕನ್ನೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>