<p><strong>ವಿಜಯಪುರ</strong>: ಇಚ್ಛಾಶಕ್ತಿ ಇರುವ ರಾಜಕಾರಣಿ ನಾನಾಗಿದ್ದೇನೆ. ಜನರನ್ನು ಲೂಟಿ ಮಾಡುವ ರಾಜಕಾರಣಿ ನಾನಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.</p>.<p>ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರ ಬಡಾವಣೆಯ ಎಂಜಿಎಂಕೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮತ್ತು ನಾಗರಿಕರಿಂದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಮುಂದಿನ 10 ವರ್ಷಗಳಲ್ಲಿ ಸಂಪೂರ್ಣ ಅಭಿವೃದ್ದಿ ಪಡಿಸಿ, ಎಲ್ಲ ರಂಗಗಳಲ್ಲಿ ಪ್ರಥಮ ಸ್ಥಾನಕ್ಕೆ ತರಲು ಯತ್ನಿಸಲಾಗುವುದು ಎಂದರು.</p>.<p>ಚುನಾವಣೆ ಹತ್ತಿರವಾದಾಗ ನನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಾರೆ. ನನಗೆ ಹಣ ಗಳಿಸುವ ಅವಶ್ಯಕತೆ ಇಲ್ಲ. ಹಣ ಗಳಿಸುವ ವ್ಯಕ್ತಿ ದಾಸೋಹ ಮಾಡುವುದಿಲ್ಲ ಎಂದರು.</p>.<p>ಕ್ಷೇತ್ರದಲ್ಲಿ ಔದ್ಯೋಗಿಕ ಕ್ರಾಂತಿ ಆಗಬೇಕು. ಯುವಕ, ಯುವತಿಯರಿಗೆ ಉದ್ಯೋಗ ಸಿಕ್ಕು ಅವರ ಭವಿಷ್ಯ ರೂಪುಗೊಳ್ಳಬೇಕು ಎನ್ನುವ ಸಂಕಲ್ಪ ನನ್ನದು. ಮೊದಲ ಹಂತದಲ್ಲಿ ಮೂಲ ಸೌಕರ್ಯ ಬಲಪಡಿಸುವ ಕೆಲಸ ಮಾಡಿದ್ದೇನೆ. ಇವು ಬಲಗೊಂಡರೆ ಮಾತ್ರ ಉದ್ಯೋಗ ಸೃಷ್ಟಿ ಸಾಧ್ಯ ಎಂದು ಹೇಳಿದರು.</p>.<p>ಬೆಂಗಳೂರು ಸುತ್ತಮುತ್ತಲೇ ಏಕೆ ಕೈಗಾರಿಕೆ ಸ್ಥಾಪನೆ ಆಗುತ್ತವೆ. ಏಕೆ ನಮ್ಮೂರಿಗೆ ಬರುವುದಿಲ್ಲ ಎಂಬ ಚಿಂತನೆ ನಡೆಸಿದಾಗ ಮೊದಲು ಎದುರಾಗುವುದು ಮೂಲಸೌಕರ್ಯಗಳ ಲಭ್ಯತೆ. ಅದನ್ನು ನಾನೀಗ ಮಾಡಿದ್ದೇನೆ ಎಂದರು.</p>.<p>ಯುವ ಉದ್ಯಮಿ ಭರತ್ ಪಾಟೀಲ ನಡಹಳ್ಳಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶಕ್ಕೆ ವರವಾಗಿ ಸಿಕ್ಕಿದ್ದಾರೆ. ಅವರ ಕೊಡುಗೆ ದೇಶಕ್ಕೆ ಅಪಾರವಾಗಿದೆ. ಯುವಜನತೆ ಆರೋಪಿಸುವುದನ್ನು ಕೈಬಿಡಬೇಕು. ಕಡ್ಡಾಯವಾಗಿ ಮತದಾನ ಮಾಡಲು ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಸೌಲಭ್ಯಗಳಿಗಾಗಿ ಧ್ವನಿ ಎತ್ತಬೇಕು ಎಂದರು.</p>.<p>ಜಾತಿ, ಮತ, ಪಕ್ಷ, ಧರ್ಮ ಎಂದು ನೋಡದೆ ಕೆಲಸ ಮಾಡುವ ಶಾಸಕರಿಗೆ ವೋಟ್ ಹಾಕಿ ಮತ್ತೊಮ್ಮೆ ಅವರನ್ನು ಶಾಸಕರನ್ನಾಗಿ ಮಾಡಿ ಅವರ ಕನಸು ನನಸು ಮಾಡಿಸಲು ನೆರವಾಗಬೇಕು ಎಂದರು.</p>.<p>ಶರಣಮ್ಮ ತಾಯಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ, ಪುರಸಭೆ ಸದಸ್ಯರಾದ ಸದಾಶಿವ ಮಾಗಿ, ಭಾರತಿ ಪಾಟೀಲ, ಪ್ರಮುಖರಾದ ಲಕ್ಷ್ಮಣ ಬಿಜ್ಜೂರ, ಶ್ರೀಶೈಲ ದೊಡಮನಿ ರೂಢಗಿ, ಎಸ್.ಎಂ.ಚಿಲ್ಲಾಳಶೆಟ್ಟರ್, ಶಿವಪ್ಪ ಚಿಮ್ಮಲಗಿ, ಹಣಮಂತ ಅಂಬಿಗೇರ, ಕಿತ್ತೂರ, ಬಡಾವಣೆಯ ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಇಚ್ಛಾಶಕ್ತಿ ಇರುವ ರಾಜಕಾರಣಿ ನಾನಾಗಿದ್ದೇನೆ. ಜನರನ್ನು ಲೂಟಿ ಮಾಡುವ ರಾಜಕಾರಣಿ ನಾನಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.</p>.<p>ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರ ಬಡಾವಣೆಯ ಎಂಜಿಎಂಕೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮತ್ತು ನಾಗರಿಕರಿಂದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಮುಂದಿನ 10 ವರ್ಷಗಳಲ್ಲಿ ಸಂಪೂರ್ಣ ಅಭಿವೃದ್ದಿ ಪಡಿಸಿ, ಎಲ್ಲ ರಂಗಗಳಲ್ಲಿ ಪ್ರಥಮ ಸ್ಥಾನಕ್ಕೆ ತರಲು ಯತ್ನಿಸಲಾಗುವುದು ಎಂದರು.</p>.<p>ಚುನಾವಣೆ ಹತ್ತಿರವಾದಾಗ ನನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಾರೆ. ನನಗೆ ಹಣ ಗಳಿಸುವ ಅವಶ್ಯಕತೆ ಇಲ್ಲ. ಹಣ ಗಳಿಸುವ ವ್ಯಕ್ತಿ ದಾಸೋಹ ಮಾಡುವುದಿಲ್ಲ ಎಂದರು.</p>.<p>ಕ್ಷೇತ್ರದಲ್ಲಿ ಔದ್ಯೋಗಿಕ ಕ್ರಾಂತಿ ಆಗಬೇಕು. ಯುವಕ, ಯುವತಿಯರಿಗೆ ಉದ್ಯೋಗ ಸಿಕ್ಕು ಅವರ ಭವಿಷ್ಯ ರೂಪುಗೊಳ್ಳಬೇಕು ಎನ್ನುವ ಸಂಕಲ್ಪ ನನ್ನದು. ಮೊದಲ ಹಂತದಲ್ಲಿ ಮೂಲ ಸೌಕರ್ಯ ಬಲಪಡಿಸುವ ಕೆಲಸ ಮಾಡಿದ್ದೇನೆ. ಇವು ಬಲಗೊಂಡರೆ ಮಾತ್ರ ಉದ್ಯೋಗ ಸೃಷ್ಟಿ ಸಾಧ್ಯ ಎಂದು ಹೇಳಿದರು.</p>.<p>ಬೆಂಗಳೂರು ಸುತ್ತಮುತ್ತಲೇ ಏಕೆ ಕೈಗಾರಿಕೆ ಸ್ಥಾಪನೆ ಆಗುತ್ತವೆ. ಏಕೆ ನಮ್ಮೂರಿಗೆ ಬರುವುದಿಲ್ಲ ಎಂಬ ಚಿಂತನೆ ನಡೆಸಿದಾಗ ಮೊದಲು ಎದುರಾಗುವುದು ಮೂಲಸೌಕರ್ಯಗಳ ಲಭ್ಯತೆ. ಅದನ್ನು ನಾನೀಗ ಮಾಡಿದ್ದೇನೆ ಎಂದರು.</p>.<p>ಯುವ ಉದ್ಯಮಿ ಭರತ್ ಪಾಟೀಲ ನಡಹಳ್ಳಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶಕ್ಕೆ ವರವಾಗಿ ಸಿಕ್ಕಿದ್ದಾರೆ. ಅವರ ಕೊಡುಗೆ ದೇಶಕ್ಕೆ ಅಪಾರವಾಗಿದೆ. ಯುವಜನತೆ ಆರೋಪಿಸುವುದನ್ನು ಕೈಬಿಡಬೇಕು. ಕಡ್ಡಾಯವಾಗಿ ಮತದಾನ ಮಾಡಲು ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಸೌಲಭ್ಯಗಳಿಗಾಗಿ ಧ್ವನಿ ಎತ್ತಬೇಕು ಎಂದರು.</p>.<p>ಜಾತಿ, ಮತ, ಪಕ್ಷ, ಧರ್ಮ ಎಂದು ನೋಡದೆ ಕೆಲಸ ಮಾಡುವ ಶಾಸಕರಿಗೆ ವೋಟ್ ಹಾಕಿ ಮತ್ತೊಮ್ಮೆ ಅವರನ್ನು ಶಾಸಕರನ್ನಾಗಿ ಮಾಡಿ ಅವರ ಕನಸು ನನಸು ಮಾಡಿಸಲು ನೆರವಾಗಬೇಕು ಎಂದರು.</p>.<p>ಶರಣಮ್ಮ ತಾಯಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ, ಪುರಸಭೆ ಸದಸ್ಯರಾದ ಸದಾಶಿವ ಮಾಗಿ, ಭಾರತಿ ಪಾಟೀಲ, ಪ್ರಮುಖರಾದ ಲಕ್ಷ್ಮಣ ಬಿಜ್ಜೂರ, ಶ್ರೀಶೈಲ ದೊಡಮನಿ ರೂಢಗಿ, ಎಸ್.ಎಂ.ಚಿಲ್ಲಾಳಶೆಟ್ಟರ್, ಶಿವಪ್ಪ ಚಿಮ್ಮಲಗಿ, ಹಣಮಂತ ಅಂಬಿಗೇರ, ಕಿತ್ತೂರ, ಬಡಾವಣೆಯ ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>