ರಾಜ್ಯದ ಯಾವುದೇ ಜಿಲ್ಲೆ ವಿಭಜಿಸಲು ಸರ್ಕಾರ ಮುಂದಾದರೆ ಅದೇ ಸಂದರ್ಭದಲ್ಲಿ ಇಂಡಿ ಕೂಡಾ ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಗುವುದು.
ಯಶವಂತರಾಯಗೌಡ ಪಾಟೀಲ, ಶಾಸಕ
ನಮ್ಮ ತಾಲ್ಲೂಕು ಮಹಾರಾಷ್ಟ್ರದ ಗಡಿಯಲ್ಲಿರುವುದರಿಂದ ಕಳೆದ 7 ದಶಕಗಳಿಂದ ಅಭಿವೃದ್ಧಿ ವಂಚಿತವಾಗಿದೆ. ಇದು ಜಿಲ್ಲೆಯಾದರೆ ಅಭಿವೃದ್ಧಿಯ ಭರವಸೆಯಿದೆ. ಜಿಲ್ಲೆ ಮಾಡಲು ಯಾರೇ ಪ್ರಯತ್ನಿಸಲಿ ಅದಕ್ಕೆ ಸಂಪೂರ್ಣ ಬೆಂಬಲವಿದೆ
ಬಿ.ಡಿ.ಪಾಟೀಲ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ, ಇಂಡಿ
ತಾಲ್ಲೂಕಿನಲ್ಲಿ ವಿಭಾಗೀಯ ಎಸಿ ಕಚೇರಿ ಡಿವೈಎಸ್ಪಿ ಕಚೇರಿ ರಾಜ್ಯಮಟ್ಟದ ನಿಂಬೆ ಅಭಿವೃದ್ಧಿ ಮಂಡಳಿ ಕೃಷಿ ವಿಜ್ಞಾನ ಕೇಂದ್ರ ಆಗಿರುವುದರಿಂದ ಇದು ಜಿಲ್ಲೆಯಾದರೆ ಗಡಿ ಪ್ರದೇಶವಾದ ಇಂಡಿ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ.
ಭೀಮಣ್ಣ ಕವಲಗಿ, ಅಧ್ಯಕ್ಷ, ನಿಂಬೆ ಅಭಿವೃದ್ಧಿ ಮಂಡಳಿ
ಗಡಿ ನಾಡು ಇಂಡಿ ತಾಲ್ಲೂಕಿನಲ್ಲಿ ಭೀಮಾ ನದಿ ಹರಿದಿದೆ. ಅದರ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಬೇಕಿದೆ. ಇದು ಜಿಲ್ಲೆಯಾದರೆ ರಾಜ್ಯದ ಗಮನ ಸೆಳೆಯುತ್ತದೆ. ಅಭಿವೃದ್ಧಿಗೆ ಅನುಕೂಲವಾಗುತ್ತದೆ.