<p><strong>ವಿಜಯಪುರ</strong>: ‘ಪಿಸುಗುಟ್ಟುವ ಗ್ಯಾಲರಿ’ ಗೋಳಗುಮ್ಮಟದ ಅಂಗಳದಲ್ಲಿ ಶನಿವಾರ ಸಂಜೆ ಸಂಗೀತ, ಭರತನಾಟ್ಯ ಲೋಕವೇ ಸೃಷ್ಟಿಯಾಗಿತ್ತು.</p><p>ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸರ್ವೇಕ್ಷಣೆ ಇಲಾಖೆ ಹಾಗೂ ಡಾ.ಸುಧಾಮೂರ್ತಿ ನೇತೃತ್ವದ ಮೂರ್ತಿ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಗೋಳಗುಮ್ಮಟದ ಹಸಿರು ಅಂಗಳದಲ್ಲಿ ನಡೆದ ‘ಕಲಾ ಧಾರಾ’ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಪ್ರಥಮ ಪ್ರಯತ್ನದಲ್ಲೇ ಜನಮನಸೂರೆಗೊಂಡು ಸಂಗೀತಾಸಕ್ತರ ಮನ ತಣಿಸಿತು.</p><p>ಪಂಡಿತ್ ವೆಂಕಟೇಶ ಕುಮಾರ ಅವರ ಸಂಗೀತ ಸುಧೆಯ ಸಂಭ್ರಮವನ್ನು ಸಂಗೀತ ಶೋತೃಗಳು ಸಂಭ್ರಮಿಸಿ, ರಾಗ ವೈಭವದಲ್ಲಿ ಮಿಂದೆದ್ದರು.</p><p>ಖ್ಯಾತ ಹಿಂದೂಸ್ತಾನಿ ಗಾಯಕ ಪಂ.ವೆಂಕಟೇಶ ಕುಮಾರ ಅವರ ಚಿನ್ನದ ಕಂಠದಿಂದ ಹೊರಬಂದ ದಾಸರ ಪದಗಳು ಸಂಗೀತದ ಜೊತೆಗೆ ಭಕ್ತಿಭಾವದಲ್ಲಿ ಮಿಂದೇಳುವಂತೆ ಮಾಡಿದವು.</p><p>‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ....’ ಎಂಬ ಸಾಲು ಪಂ.ವೆಂಕಟೇಶ ಕುಮಾರ ಅವರ ಕಂಠದಿಂದ ಹೊರಬಂದಾಗ ಅಲ್ಲೊಂದು ವಿಭಿನ್ನ ಲೋಕವೇ ಸೃಜಿಸಿತು. </p><p>ಪಂ.ರಘುನಾಥ್ ನಾಕೋಡ ಅವರು ತಬಲಾ ಸಾಥ್ ನೀಡಿದರೆ, ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು.</p>.<p>‘ಕಮಲೆ ಕಮಲಾಲಯೇ...’ ‘ಅಕ್ಕಾ ಕೇಳವ್ವ ನಾನೊಂದ ಕನಸು ಕಂಡೆ...’ ಹೀಗೆ ಅನೇಕ ಗೀತೆಗಳನ್ನು ಭಕ್ತಿಯ ಸ್ಪರ್ಶದೊಂದಿಗೆ ಹಾಡಿದರು.</p><p>ಭರತ ನಾಟ್ಯದಲ್ಲಿ ವಿಶ್ವದ ಗಮನ ಸೆಳೆದ ವಿದೂಷಿ ಮಿಥುನ್ ಶ್ಯಾಮ್ ರ ಭರತನಾಟ್ಯ ಭವ್ಯತೆ ಸ್ಪರ್ಶ ನೀಡಿತು. ಗೆಜ್ಜೆನಾದದ ಪ್ರತಿಧ್ವನಿಯೊಂದಿಗೆ ನರ್ತನ ಕಲಾ ಲೋಕವೇ ಸೃಜಿಸಿತು.</p><p>ಕಾರ್ಯಕ್ರಮದ ರೂವಾರಿ ಹಾಗೂ ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ. ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮೊದಲಾದವರು ಪಾಲ್ಗೊಂಡಿದ್ದರು.</p><h2><strong>‘ಕಲಾ ಧಾರಾ’ ಯಶಸ್ವಿಗೆ ಸಹಕರಿಸಿ: </strong></h2>.<p>ವಿಜಯಪುರ: ಹಂಪಿ ಉತ್ಸವ, ಚಾಲುಕ್ಯ ಉತ್ಸವ, ಕದಂಬ ಉತ್ಸವ ಮಾದರಿಯಲ್ಲಿ ವಿಜಯಪುರದಲ್ಲಿ ಸಂಗೀತ ಉತ್ಸವ ಮಾಡುವ ಆಶಯವಿತ್ತು. ಇದೀಗ ಕಾಲ ಕೂಡಿ ಬಂದಿದ್ದು, ಪ್ರಥಮ ಬಾರಿಗೆ ‘ಕಲಾಧಾರ’ ಆಯೋಜಿಸಿದ್ದೇವೆ ಎಂದು ಮೂರ್ತಿ ಫೌಂಡೇಷನ್ ಅಧ್ಯಕ್ಷೆ, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಹೇಳಿದರು.</p><p>ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೊಂದು ಉತ್ಸವ ಮಾಡುವಷ್ಟು ಕನ್ನಡ ನಾಡು ಶ್ರೀಮಂತ ಸಂಸ್ಕೃತಿ ಹೊಂದಿದೆ. ವಿಜಯಪುರ ಅತ್ಯುತ್ತಮ ಸ್ಥಳ, ಸಾಂಸ್ಕೃತಿಕವಾಗಿಯೂ ಶ್ರೀಮಂತ ಜಿಲ್ಲೆ, ಇಲ್ಲಿ ಒಂದು ಸಾಂಸ್ಕೃತಿಕ ವಾತಾವರಣ ಸೃಷ್ಟಿಸಬೇಕಿದೆ’ ಎಂದರು.</p>.<p>ಎರಡು ದಿನದ ಕಲೋತ್ಸವ ಆಯೋಜಿಸಲಾಗಿದೆ. ಜನರಿಗೆ ಉಚಿತ ಪ್ರವೇಶ ಇದೆ. ಜನರು ಭಾಗವಹಿಸಿ ಸಂತೋಷ ಪಡಬೇಕು. ಜನರ ಸಹಕಾರ, ಪ್ರತಿಕ್ರಿಯೆ ನೋಡಿಕೊಂಡು ಪ್ರತಿವರ್ಷ ಅತ್ಯುತ್ತಮ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶವಿದೆ ಎಂದರು.</p><p>ಗೋಳಗುಮ್ಮಟವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಜಿಲ್ಲಾಡಳಿತ, ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಕಳಿಸಿದರೆ, ನಾನು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.</p><p>ವಿಜಯಪುರದ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಜೊತೆಗೆ ಸ್ವಚ್ಛತೆ ಕಾಪಾಡಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ‘ಪಿಸುಗುಟ್ಟುವ ಗ್ಯಾಲರಿ’ ಗೋಳಗುಮ್ಮಟದ ಅಂಗಳದಲ್ಲಿ ಶನಿವಾರ ಸಂಜೆ ಸಂಗೀತ, ಭರತನಾಟ್ಯ ಲೋಕವೇ ಸೃಷ್ಟಿಯಾಗಿತ್ತು.</p><p>ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸರ್ವೇಕ್ಷಣೆ ಇಲಾಖೆ ಹಾಗೂ ಡಾ.ಸುಧಾಮೂರ್ತಿ ನೇತೃತ್ವದ ಮೂರ್ತಿ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಗೋಳಗುಮ್ಮಟದ ಹಸಿರು ಅಂಗಳದಲ್ಲಿ ನಡೆದ ‘ಕಲಾ ಧಾರಾ’ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಪ್ರಥಮ ಪ್ರಯತ್ನದಲ್ಲೇ ಜನಮನಸೂರೆಗೊಂಡು ಸಂಗೀತಾಸಕ್ತರ ಮನ ತಣಿಸಿತು.</p><p>ಪಂಡಿತ್ ವೆಂಕಟೇಶ ಕುಮಾರ ಅವರ ಸಂಗೀತ ಸುಧೆಯ ಸಂಭ್ರಮವನ್ನು ಸಂಗೀತ ಶೋತೃಗಳು ಸಂಭ್ರಮಿಸಿ, ರಾಗ ವೈಭವದಲ್ಲಿ ಮಿಂದೆದ್ದರು.</p><p>ಖ್ಯಾತ ಹಿಂದೂಸ್ತಾನಿ ಗಾಯಕ ಪಂ.ವೆಂಕಟೇಶ ಕುಮಾರ ಅವರ ಚಿನ್ನದ ಕಂಠದಿಂದ ಹೊರಬಂದ ದಾಸರ ಪದಗಳು ಸಂಗೀತದ ಜೊತೆಗೆ ಭಕ್ತಿಭಾವದಲ್ಲಿ ಮಿಂದೇಳುವಂತೆ ಮಾಡಿದವು.</p><p>‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ....’ ಎಂಬ ಸಾಲು ಪಂ.ವೆಂಕಟೇಶ ಕುಮಾರ ಅವರ ಕಂಠದಿಂದ ಹೊರಬಂದಾಗ ಅಲ್ಲೊಂದು ವಿಭಿನ್ನ ಲೋಕವೇ ಸೃಜಿಸಿತು. </p><p>ಪಂ.ರಘುನಾಥ್ ನಾಕೋಡ ಅವರು ತಬಲಾ ಸಾಥ್ ನೀಡಿದರೆ, ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು.</p>.<p>‘ಕಮಲೆ ಕಮಲಾಲಯೇ...’ ‘ಅಕ್ಕಾ ಕೇಳವ್ವ ನಾನೊಂದ ಕನಸು ಕಂಡೆ...’ ಹೀಗೆ ಅನೇಕ ಗೀತೆಗಳನ್ನು ಭಕ್ತಿಯ ಸ್ಪರ್ಶದೊಂದಿಗೆ ಹಾಡಿದರು.</p><p>ಭರತ ನಾಟ್ಯದಲ್ಲಿ ವಿಶ್ವದ ಗಮನ ಸೆಳೆದ ವಿದೂಷಿ ಮಿಥುನ್ ಶ್ಯಾಮ್ ರ ಭರತನಾಟ್ಯ ಭವ್ಯತೆ ಸ್ಪರ್ಶ ನೀಡಿತು. ಗೆಜ್ಜೆನಾದದ ಪ್ರತಿಧ್ವನಿಯೊಂದಿಗೆ ನರ್ತನ ಕಲಾ ಲೋಕವೇ ಸೃಜಿಸಿತು.</p><p>ಕಾರ್ಯಕ್ರಮದ ರೂವಾರಿ ಹಾಗೂ ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ. ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮೊದಲಾದವರು ಪಾಲ್ಗೊಂಡಿದ್ದರು.</p><h2><strong>‘ಕಲಾ ಧಾರಾ’ ಯಶಸ್ವಿಗೆ ಸಹಕರಿಸಿ: </strong></h2>.<p>ವಿಜಯಪುರ: ಹಂಪಿ ಉತ್ಸವ, ಚಾಲುಕ್ಯ ಉತ್ಸವ, ಕದಂಬ ಉತ್ಸವ ಮಾದರಿಯಲ್ಲಿ ವಿಜಯಪುರದಲ್ಲಿ ಸಂಗೀತ ಉತ್ಸವ ಮಾಡುವ ಆಶಯವಿತ್ತು. ಇದೀಗ ಕಾಲ ಕೂಡಿ ಬಂದಿದ್ದು, ಪ್ರಥಮ ಬಾರಿಗೆ ‘ಕಲಾಧಾರ’ ಆಯೋಜಿಸಿದ್ದೇವೆ ಎಂದು ಮೂರ್ತಿ ಫೌಂಡೇಷನ್ ಅಧ್ಯಕ್ಷೆ, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಹೇಳಿದರು.</p><p>ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೊಂದು ಉತ್ಸವ ಮಾಡುವಷ್ಟು ಕನ್ನಡ ನಾಡು ಶ್ರೀಮಂತ ಸಂಸ್ಕೃತಿ ಹೊಂದಿದೆ. ವಿಜಯಪುರ ಅತ್ಯುತ್ತಮ ಸ್ಥಳ, ಸಾಂಸ್ಕೃತಿಕವಾಗಿಯೂ ಶ್ರೀಮಂತ ಜಿಲ್ಲೆ, ಇಲ್ಲಿ ಒಂದು ಸಾಂಸ್ಕೃತಿಕ ವಾತಾವರಣ ಸೃಷ್ಟಿಸಬೇಕಿದೆ’ ಎಂದರು.</p>.<p>ಎರಡು ದಿನದ ಕಲೋತ್ಸವ ಆಯೋಜಿಸಲಾಗಿದೆ. ಜನರಿಗೆ ಉಚಿತ ಪ್ರವೇಶ ಇದೆ. ಜನರು ಭಾಗವಹಿಸಿ ಸಂತೋಷ ಪಡಬೇಕು. ಜನರ ಸಹಕಾರ, ಪ್ರತಿಕ್ರಿಯೆ ನೋಡಿಕೊಂಡು ಪ್ರತಿವರ್ಷ ಅತ್ಯುತ್ತಮ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶವಿದೆ ಎಂದರು.</p><p>ಗೋಳಗುಮ್ಮಟವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಜಿಲ್ಲಾಡಳಿತ, ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಕಳಿಸಿದರೆ, ನಾನು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.</p><p>ವಿಜಯಪುರದ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಜೊತೆಗೆ ಸ್ವಚ್ಛತೆ ಕಾಪಾಡಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>