<p>ವಿಜಯಪುರ: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಡಿ.5ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ನಡುವೆ ಜಟಾಪಟಿ ತಾರಕ್ಕೇರಿದೆ.</p>.<p class="Subhead">ಬಂದ್ ವಿಫಲಗೊಳಿಸಿ:</p>.<p>ವ್ಯಾಪಾರಸ್ಥರು, ಹಿಂದೂಪರ ಸಂಘಟನೆಗಳು, ಬೆಂಬಲಿಗರೊಂದಿಗೆ ನಗರದ ಫ.ಗು.ಹಳಕಟ್ಟಿ ಸಭಾಂಗಣದಲ್ಲಿ ಸಭೆ ನಡೆಸಿದ ಶಾಸಕ ಯತ್ನಾಳ, ಕರವೇ ಅಂದರೆ ಕಳ್ಳರ ರಕ್ಷಣಾ ವೇದಿಕೆ. ಅಯೋಗ್ಯರು ಕರೆ ನೀಡಿರುವ ಬಂದ್ ಅನ್ನು ವಿಫಲಗೊಳಿಸಬೇಕು ಎಂದು ಹೇಳಿದರು.</p>.<p>ಮರಾಠಾ ಸಮುದಾಯದವರು ಅಪ್ಪಟ ದೇಶಭಕ್ತರು, ಅವರ ಅಭಿವೃದ್ಧಿಗಾಗಿ ನಿಗಮ ರಚಿಸಲಾಗಿದೆ ಎಂದರು.</p>.<p>ಕರವೇ ಹೋರಾಟಗಾರರ ಜಾತಕ ನನಗೆ ಗೊತ್ತಿದೆ. ಒಬ್ಬರಿಗೂ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ವಾಟಾಳ್ಗೆ ಶುದ್ಧ ಕನ್ನಡ ಮಾತನಾಡಲು ಬರುವುದಿಲ್ಲ. ಇಂಗ್ಲಿಷ್ ಪದ ಬಳಸುತ್ತಾನೆ. ಆದರೆ, ನಾನು ಇಂದಿಗೂ ಕನ್ನಡದಲ್ಲೇ ಸಹಿ ಮಾಡುತ್ತೇನೆ ಎಂದು ಏಕ ವಚನದಲ್ಲೇ ಕಿಡಿಕಾರಿದರು.</p>.<p>‘ನನಗೆ ಯಾರೂ ಕನ್ನಡ ಕಲಿಸಲು ಬರಬೇಡಿ. ಕನ್ನಡದ ಹೆಸರಿನಲ್ಲಿ ದಂದೆ ಮಾಡುವವರ ವಿರುದ್ಧ ನಾನು ಸುಮ್ಮನಿರೆನು’ ಎಂದು ಎಚ್ಚರಿಕೆ ನೀಡಿದರು.</p>.<p class="Subhead">ಹಕ್ಕುಚ್ಯುತಿ ಮಂಡನೆ:</p>.<p>‘ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ ಎಂದು ವಾಟಾಳ್ಗೆ ತಿಳಿ ಹೇಳಿದ ಯತ್ನಾಳ್, ನನ್ನನ್ನು ಟೀಕೆ ಮಾಡುವ ಬರದಲ್ಲಿ ಏಕ ವಚನದಲ್ಲಿ ಮಾತನಾಡುವುದು, ಅಸಭ್ಯ ಪದಗಳನ್ನು ಪ್ರಯೋಗಿಸುವುದು ಮಾಡಿದರೆ ಸದನದಲ್ಲಿ ನಿಮ್ಮ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಬೇಕಾಗುತ್ತದೆ’ ಎಂದು ಹೇಳಿದರು.</p>.<p>‘ನಾನೇ ಹಕ್ಕು ಬಾಧ್ಯತಾ ಸಮಿತಿ ಸದಸ್ಯನಿದ್ದೇನೆ. ವಿಧಾನಸೌಧಕ್ಕೆ ಕರೆದು, ಛೀಮಾರಿ, ದಂಡ ಇಲ್ಲವೇ ಜೈಲಿಗೆ ಹಾಕಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.</p>.<p>‘ವಾಟಾಳ್ ನಾಗರಾಜ್, ಕನ್ನಡ ಪರ ಸಂಘಟನೆಗಳ ಮುಖಂಡರಿಗೆ ತಾಕತ್ತಿದ್ದರೆ ಕಲಬುರ್ಗಿ ಕಾರ್ಪೊರೇಷನ್, ರೈಲು ನಿಲ್ದಾಣದ ಮೇಲಿರುವ ಉರ್ದು ಬೋರ್ಡ್ ತೆಗೆಸಲಿ. ಕನ್ನಡ ಹೋರಾಟಗಾರರ ಮಕ್ಕಳು ಯಾವ ಮಾಧ್ಯಮದ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಅನ್ನೋದನ್ನು ಸರ್ಕಾರ ಬಹಿರಂಗ ಪಡಿಸಲಿ’ ಎಂದರು.</p>.<p>ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಮುಖಂಡರಾದ ರಾಘವ ಅಣ್ಣಿಗೇರಿ, ಶಿವರುದ್ರ ಬಾಗಲಕೋಟೆ, ಗುರು ಗಚ್ಚಿನಮಠ, ಚಂದ್ರು ಚೌಧರಿ, ಗೋಪಾಲ ಮಹಾರಾಜರು ಸಭೆಯಲ್ಲಿ ಉಪಸ್ಥಿತರಿದ್ದರು.</p>.<p class="Briefhead">‘ಯತ್ನಾಳ ಎಂಇಎಸ್ ಏಜೆಂಟ್’</p>.<p>ವಿಜಯಪುರ: ಕರವೇಯನ್ನು ಕಳ್ಳರ ರಕ್ಷಣಾ ವೇದಿಕೆ ಎಂದಿರುವಶಾಸಕ ಬಸನಗೌಡ ಪಾಟೀಲ ಯತ್ನಾಳ ಎಂಇಎಸ್ ಏಜೆಂಟ್ ಆಗಿದ್ದಾರೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ ಕುಟುಕಿದರು.</p>.<p>ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರವೇ ಇತಿಹಾಸ ತಿಳಿದುಕೊಂಡು ಯತ್ನಾಳ ಮಾತನಾಡಬೇಕು. ಕನ್ನಡ ಪರ ಸಂಘಟನೆಗಳ ಬಗ್ಗೆ ಯತ್ನಾಳಗೆ ಅಷ್ಟೊಂದು ಭಯ ಏಕೆ ಎಂಬುದು ತಿಳಿಯುತ್ತಿಲ್ಲ ಎಂದರು.</p>.<p>ಯತ್ನಾಳ ಅವರು ಪೊಲೀಸರನ್ನು ಬಳಸಿಕೊಂಡು ಬಂದ್ ವಿಫಲಗೊಳಿಸಲು ಯತ್ನಿಸುತ್ತಿದ್ದಾರೆ. ಯತ್ನಾಳ ಅವರು ವರ್ತಕರು, ವ್ಯಾಪಾರಸ್ಥರಲ್ಲಿ ಬಂದ್ ಕುರಿತು ಭಯ ಹುಟ್ಟಿಸುತ್ತಿದ್ದಾರೆ. ಸಿದ್ಧೇಶ್ವರ ಗುಡಿಯಿಂದ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.</p>.<p>ಕರವೇ ಮರಾಠಿಗರ ವಿರೋಧಿಯಲ್ಲ. ಮರಾಠಿಗಳ ಹಿತಚಿಂತಕರು.ಆದರೆ, ವೋಟಿಗಾಗಿ ಬಿಜೆಪಿ ಸರ್ಕಾರ ನಿಗಮ ಸ್ಥಾಪನೆ ಮಾಡುತ್ತಿದೆಯೇ ಹೊರತು, ನಿಜವಾದ ಕಾಳಜಿ ಇಲ್ಲ ಎಂದು ಹೇಳಿದರು.</p>.<p>ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಕರ್ನಾಟಕ ಸರ್ಕಾರ ಎಂಇಎಸ್ಗೆ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದರು.</p>.<p>ಕರವೇಯಲ್ಲಿ ಎಲ್ಲ ಧರ್ಮ, ಜಾತಿಯವರು ಇದ್ದಾರೆ. ಕೇವಲ ಮುಸ್ಲಿಮರಿಲ್ಲ ಎಂಬುದನ್ನು ಶಾಸಕರು ಅರಿತುಕೊಳ್ಳಬೇಕು ಎಂದರು.</p>.<p>ಯತ್ನಾಳ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಅವರಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಆರೋಗ್ಯ ಸಚಿವರಿಗೆ ಮನವಿ ಮಾಡಿದರು.</p>.<p>ಕರವೇ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿ, ಕನ್ನಡಿಗರು ಮತ್ತು ಮರಾಠಿಗರ ನಡುವೆ ಶಾಸಕ ಯತ್ನಾಳ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.</p>.<p>ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ದೊಡ್ಡವರಾಗಲು ಯತ್ನಾಳ ಪ್ರಯತ್ನಿಸುತ್ತಿದ್ದಾರೆ. ಹಕ್ಕುಚ್ಯುತಿ ಬಗ್ಗೆ ಮಾತನಾಡುವವರು ಮೊದಲು ಇನ್ನೊಬ್ಬರ ಬಗ್ಗೆ ಗೌರವಯುತವಾಗಿ ಮಾತನಾಡುವುದು ಕಲಿಯಬೇಕು ಎಂದರು.</p>.<p>ಕರವೇ ಮುಖಂಡ ಅಶೋಕ ಹರಿವಾಳ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಗಮನ ಹರಿಸಲಿ, ಕನ್ನಡಿಗರ ವೋಟಿನಿಂದ ಶಾಸಕರಾಗಿದ್ದಾರೆಯೇ ಹೊರತು ಮರಾಠಿಗರ ವೋಟಿನಿಂದಲ್ಲ ಎಂದು ಹೇಳಿದರು.</p>.<p>ಕರವೇ ಮುಖಂಡರಾದ ಮಹಾದೇವ ರಾವಜಿ, ಫಯಾಜ್ ಕಲಾದಗಿ, ಆರ್.ಬಸವರಾಜ, ದಸ್ತಗೀರ ಸಾಲೊಟಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಡಿ.5ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ನಡುವೆ ಜಟಾಪಟಿ ತಾರಕ್ಕೇರಿದೆ.</p>.<p class="Subhead">ಬಂದ್ ವಿಫಲಗೊಳಿಸಿ:</p>.<p>ವ್ಯಾಪಾರಸ್ಥರು, ಹಿಂದೂಪರ ಸಂಘಟನೆಗಳು, ಬೆಂಬಲಿಗರೊಂದಿಗೆ ನಗರದ ಫ.ಗು.ಹಳಕಟ್ಟಿ ಸಭಾಂಗಣದಲ್ಲಿ ಸಭೆ ನಡೆಸಿದ ಶಾಸಕ ಯತ್ನಾಳ, ಕರವೇ ಅಂದರೆ ಕಳ್ಳರ ರಕ್ಷಣಾ ವೇದಿಕೆ. ಅಯೋಗ್ಯರು ಕರೆ ನೀಡಿರುವ ಬಂದ್ ಅನ್ನು ವಿಫಲಗೊಳಿಸಬೇಕು ಎಂದು ಹೇಳಿದರು.</p>.<p>ಮರಾಠಾ ಸಮುದಾಯದವರು ಅಪ್ಪಟ ದೇಶಭಕ್ತರು, ಅವರ ಅಭಿವೃದ್ಧಿಗಾಗಿ ನಿಗಮ ರಚಿಸಲಾಗಿದೆ ಎಂದರು.</p>.<p>ಕರವೇ ಹೋರಾಟಗಾರರ ಜಾತಕ ನನಗೆ ಗೊತ್ತಿದೆ. ಒಬ್ಬರಿಗೂ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ವಾಟಾಳ್ಗೆ ಶುದ್ಧ ಕನ್ನಡ ಮಾತನಾಡಲು ಬರುವುದಿಲ್ಲ. ಇಂಗ್ಲಿಷ್ ಪದ ಬಳಸುತ್ತಾನೆ. ಆದರೆ, ನಾನು ಇಂದಿಗೂ ಕನ್ನಡದಲ್ಲೇ ಸಹಿ ಮಾಡುತ್ತೇನೆ ಎಂದು ಏಕ ವಚನದಲ್ಲೇ ಕಿಡಿಕಾರಿದರು.</p>.<p>‘ನನಗೆ ಯಾರೂ ಕನ್ನಡ ಕಲಿಸಲು ಬರಬೇಡಿ. ಕನ್ನಡದ ಹೆಸರಿನಲ್ಲಿ ದಂದೆ ಮಾಡುವವರ ವಿರುದ್ಧ ನಾನು ಸುಮ್ಮನಿರೆನು’ ಎಂದು ಎಚ್ಚರಿಕೆ ನೀಡಿದರು.</p>.<p class="Subhead">ಹಕ್ಕುಚ್ಯುತಿ ಮಂಡನೆ:</p>.<p>‘ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ ಎಂದು ವಾಟಾಳ್ಗೆ ತಿಳಿ ಹೇಳಿದ ಯತ್ನಾಳ್, ನನ್ನನ್ನು ಟೀಕೆ ಮಾಡುವ ಬರದಲ್ಲಿ ಏಕ ವಚನದಲ್ಲಿ ಮಾತನಾಡುವುದು, ಅಸಭ್ಯ ಪದಗಳನ್ನು ಪ್ರಯೋಗಿಸುವುದು ಮಾಡಿದರೆ ಸದನದಲ್ಲಿ ನಿಮ್ಮ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಬೇಕಾಗುತ್ತದೆ’ ಎಂದು ಹೇಳಿದರು.</p>.<p>‘ನಾನೇ ಹಕ್ಕು ಬಾಧ್ಯತಾ ಸಮಿತಿ ಸದಸ್ಯನಿದ್ದೇನೆ. ವಿಧಾನಸೌಧಕ್ಕೆ ಕರೆದು, ಛೀಮಾರಿ, ದಂಡ ಇಲ್ಲವೇ ಜೈಲಿಗೆ ಹಾಕಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.</p>.<p>‘ವಾಟಾಳ್ ನಾಗರಾಜ್, ಕನ್ನಡ ಪರ ಸಂಘಟನೆಗಳ ಮುಖಂಡರಿಗೆ ತಾಕತ್ತಿದ್ದರೆ ಕಲಬುರ್ಗಿ ಕಾರ್ಪೊರೇಷನ್, ರೈಲು ನಿಲ್ದಾಣದ ಮೇಲಿರುವ ಉರ್ದು ಬೋರ್ಡ್ ತೆಗೆಸಲಿ. ಕನ್ನಡ ಹೋರಾಟಗಾರರ ಮಕ್ಕಳು ಯಾವ ಮಾಧ್ಯಮದ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಅನ್ನೋದನ್ನು ಸರ್ಕಾರ ಬಹಿರಂಗ ಪಡಿಸಲಿ’ ಎಂದರು.</p>.<p>ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಮುಖಂಡರಾದ ರಾಘವ ಅಣ್ಣಿಗೇರಿ, ಶಿವರುದ್ರ ಬಾಗಲಕೋಟೆ, ಗುರು ಗಚ್ಚಿನಮಠ, ಚಂದ್ರು ಚೌಧರಿ, ಗೋಪಾಲ ಮಹಾರಾಜರು ಸಭೆಯಲ್ಲಿ ಉಪಸ್ಥಿತರಿದ್ದರು.</p>.<p class="Briefhead">‘ಯತ್ನಾಳ ಎಂಇಎಸ್ ಏಜೆಂಟ್’</p>.<p>ವಿಜಯಪುರ: ಕರವೇಯನ್ನು ಕಳ್ಳರ ರಕ್ಷಣಾ ವೇದಿಕೆ ಎಂದಿರುವಶಾಸಕ ಬಸನಗೌಡ ಪಾಟೀಲ ಯತ್ನಾಳ ಎಂಇಎಸ್ ಏಜೆಂಟ್ ಆಗಿದ್ದಾರೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ ಕುಟುಕಿದರು.</p>.<p>ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರವೇ ಇತಿಹಾಸ ತಿಳಿದುಕೊಂಡು ಯತ್ನಾಳ ಮಾತನಾಡಬೇಕು. ಕನ್ನಡ ಪರ ಸಂಘಟನೆಗಳ ಬಗ್ಗೆ ಯತ್ನಾಳಗೆ ಅಷ್ಟೊಂದು ಭಯ ಏಕೆ ಎಂಬುದು ತಿಳಿಯುತ್ತಿಲ್ಲ ಎಂದರು.</p>.<p>ಯತ್ನಾಳ ಅವರು ಪೊಲೀಸರನ್ನು ಬಳಸಿಕೊಂಡು ಬಂದ್ ವಿಫಲಗೊಳಿಸಲು ಯತ್ನಿಸುತ್ತಿದ್ದಾರೆ. ಯತ್ನಾಳ ಅವರು ವರ್ತಕರು, ವ್ಯಾಪಾರಸ್ಥರಲ್ಲಿ ಬಂದ್ ಕುರಿತು ಭಯ ಹುಟ್ಟಿಸುತ್ತಿದ್ದಾರೆ. ಸಿದ್ಧೇಶ್ವರ ಗುಡಿಯಿಂದ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.</p>.<p>ಕರವೇ ಮರಾಠಿಗರ ವಿರೋಧಿಯಲ್ಲ. ಮರಾಠಿಗಳ ಹಿತಚಿಂತಕರು.ಆದರೆ, ವೋಟಿಗಾಗಿ ಬಿಜೆಪಿ ಸರ್ಕಾರ ನಿಗಮ ಸ್ಥಾಪನೆ ಮಾಡುತ್ತಿದೆಯೇ ಹೊರತು, ನಿಜವಾದ ಕಾಳಜಿ ಇಲ್ಲ ಎಂದು ಹೇಳಿದರು.</p>.<p>ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಕರ್ನಾಟಕ ಸರ್ಕಾರ ಎಂಇಎಸ್ಗೆ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದರು.</p>.<p>ಕರವೇಯಲ್ಲಿ ಎಲ್ಲ ಧರ್ಮ, ಜಾತಿಯವರು ಇದ್ದಾರೆ. ಕೇವಲ ಮುಸ್ಲಿಮರಿಲ್ಲ ಎಂಬುದನ್ನು ಶಾಸಕರು ಅರಿತುಕೊಳ್ಳಬೇಕು ಎಂದರು.</p>.<p>ಯತ್ನಾಳ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಅವರಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಆರೋಗ್ಯ ಸಚಿವರಿಗೆ ಮನವಿ ಮಾಡಿದರು.</p>.<p>ಕರವೇ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿ, ಕನ್ನಡಿಗರು ಮತ್ತು ಮರಾಠಿಗರ ನಡುವೆ ಶಾಸಕ ಯತ್ನಾಳ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.</p>.<p>ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ದೊಡ್ಡವರಾಗಲು ಯತ್ನಾಳ ಪ್ರಯತ್ನಿಸುತ್ತಿದ್ದಾರೆ. ಹಕ್ಕುಚ್ಯುತಿ ಬಗ್ಗೆ ಮಾತನಾಡುವವರು ಮೊದಲು ಇನ್ನೊಬ್ಬರ ಬಗ್ಗೆ ಗೌರವಯುತವಾಗಿ ಮಾತನಾಡುವುದು ಕಲಿಯಬೇಕು ಎಂದರು.</p>.<p>ಕರವೇ ಮುಖಂಡ ಅಶೋಕ ಹರಿವಾಳ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಗಮನ ಹರಿಸಲಿ, ಕನ್ನಡಿಗರ ವೋಟಿನಿಂದ ಶಾಸಕರಾಗಿದ್ದಾರೆಯೇ ಹೊರತು ಮರಾಠಿಗರ ವೋಟಿನಿಂದಲ್ಲ ಎಂದು ಹೇಳಿದರು.</p>.<p>ಕರವೇ ಮುಖಂಡರಾದ ಮಹಾದೇವ ರಾವಜಿ, ಫಯಾಜ್ ಕಲಾದಗಿ, ಆರ್.ಬಸವರಾಜ, ದಸ್ತಗೀರ ಸಾಲೊಟಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>