<p><strong>ವಿಜಯಪುರ</strong>: ಭಾರತ ದೇಶದ ಬೆನ್ನೆಲುಬು ಎಂದರೆ ರೈತರು ಆದ್ದರಿಂದ ಪ್ರತಿಯೊಬ್ಬ ನಾಗರಿಕನು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಹೃದಯದಿಂದ ಮತ್ತು ಹೆಮ್ಮೆಯಿಂದ ಹೇಳಬೇಕು ಎಂದು ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.</p>.<p>ವಿಜಯಪುರ ತಾಲ್ಲೂಕಿನ ಕವಲಗಿ ಗ್ರಾಮದ ಜಗದ್ಗುರು ಶಿವಯೋಗಿ ಶ್ರೀಸಿದ್ಧರಾಮೇಶ್ವರ ಕುಡು ಒಕ್ಕಲಿಗ ಮಹಾಸಂಸ್ಥಾನ ಗುರುಪೀಠದ ಭೂಮಿಪೂಜೆನೆರವೇರಿಸಿ ಅವರು ಮಾತನಾಡಿದರು.</p>.<p>ಕುಡು ಒಕ್ಕಲಿಗರು ಎಂದರೆ ಪ್ರಪಂಚದ ಎಲ್ಲ ಜನರಿಗೆ ಆಹಾರ ಧಾನ್ಯ, ಕಾಳುಕಡಿಯನ್ನು ಕೊಡುವಂತವರು. ಆಹಾರ ಧಾನ್ಯ ಬೆಳೆಯುವವರೆಲ್ಲರೂ ಸಹ ರೈತರೆ ಎಂದು ಹೇಳಿದರು.</p>.<p>ಜನಿಸಿದ ಪ್ರತಿಯೊಬ್ಬ ಮನುಷ್ಯನಿಗೆ ಭೂಮಿಯ ಮೇಲೆ ಸಾಮರಸ್ಯ ಮತ್ತು ಸಂತಸದಿಂದ ಬದುಕ ಬೇಕೆಂದರೆ ಕಾಯಕ, ಆಧ್ಯಾತ್ಮಿಕ ಚಿಂತನೆ ಮತ್ತು ಉನ್ನತಮಟ್ಟದ ಶಿಕ್ಷಣ ಅತ್ಯವಶ್ಯಕವಾಗಿದೆ. ಜೊತೆಗೆ ಸಾಮಾಜಿಕ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದರು.</p>.<p>ನಿಯೋಜಿತ ಪೀಠಾಧ್ಯಕ್ಷ ಡಾ.ಅಭಿನವ ಸಿದ್ದರಾಮೇಶ್ವರ ಮಹಾಸ್ವಾಮಿ,ಭೂಮಿಪೂಜೆ ನೆರವೇರಿಸಿದ ಈ ಸ್ಥಳ ಜ್ಞಾನ ಸತ್ರವಾಗಲಿದೆ ಎಂದರು.</p>.<p>ಮಾಜಿ ಶಾಸಕ ಎನ್.ಎಸ್.ಖೇಡ, ಕನ್ಹೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಶಿರೋಳ ರಾಮಾಮಠದ ಶಂಕರಾರೂಢ ಸ್ವಾಮೀಜಿ, ಬುರಾಣಪುರ ಆರೂಢಾ ಮಠದಯೋಗೇಶ್ವರಿ ತಾಯಿ, ಬೆಳಗಾವಿಯ ಗಣಿತ ತಜ್ಞ ಪ್ರೊ.ಎನ್.ವೆಂಕಟೇಶ, ಡಾ.ಸಿದ್ದಣ್ಣ ಉತ್ನಾಳ, ಮಂಜುನಾಥ ಜನಗೊಂಡ, ಭೀಮಾಶಂಕರ ಬಿರಾದಾರ ಉಪಸ್ಥಿತರಿದ್ದರು.</p>.<p>***</p>.<p>ದೇಶದಲ್ಲಿ ಸದಾ ಗೌರವಿಸಲ್ಪಡುವವರೆಂದರೆ ದೇಶ ಕಾಯುವ ವೀರ ಸೈನಿಕರು ಮತ್ತು ಬೆವರು ಸುರಿಸಿ ದುಡಿಯುವ ರೈತರು.<br />-<em><strong>ಸಿದ್ಧೇಶ್ವರ ಸ್ವಾಮೀಜಿ<br />ಜ್ಞಾನಯೋಗಾಶ್ರಮ, ವಿಜಯಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಭಾರತ ದೇಶದ ಬೆನ್ನೆಲುಬು ಎಂದರೆ ರೈತರು ಆದ್ದರಿಂದ ಪ್ರತಿಯೊಬ್ಬ ನಾಗರಿಕನು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಹೃದಯದಿಂದ ಮತ್ತು ಹೆಮ್ಮೆಯಿಂದ ಹೇಳಬೇಕು ಎಂದು ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.</p>.<p>ವಿಜಯಪುರ ತಾಲ್ಲೂಕಿನ ಕವಲಗಿ ಗ್ರಾಮದ ಜಗದ್ಗುರು ಶಿವಯೋಗಿ ಶ್ರೀಸಿದ್ಧರಾಮೇಶ್ವರ ಕುಡು ಒಕ್ಕಲಿಗ ಮಹಾಸಂಸ್ಥಾನ ಗುರುಪೀಠದ ಭೂಮಿಪೂಜೆನೆರವೇರಿಸಿ ಅವರು ಮಾತನಾಡಿದರು.</p>.<p>ಕುಡು ಒಕ್ಕಲಿಗರು ಎಂದರೆ ಪ್ರಪಂಚದ ಎಲ್ಲ ಜನರಿಗೆ ಆಹಾರ ಧಾನ್ಯ, ಕಾಳುಕಡಿಯನ್ನು ಕೊಡುವಂತವರು. ಆಹಾರ ಧಾನ್ಯ ಬೆಳೆಯುವವರೆಲ್ಲರೂ ಸಹ ರೈತರೆ ಎಂದು ಹೇಳಿದರು.</p>.<p>ಜನಿಸಿದ ಪ್ರತಿಯೊಬ್ಬ ಮನುಷ್ಯನಿಗೆ ಭೂಮಿಯ ಮೇಲೆ ಸಾಮರಸ್ಯ ಮತ್ತು ಸಂತಸದಿಂದ ಬದುಕ ಬೇಕೆಂದರೆ ಕಾಯಕ, ಆಧ್ಯಾತ್ಮಿಕ ಚಿಂತನೆ ಮತ್ತು ಉನ್ನತಮಟ್ಟದ ಶಿಕ್ಷಣ ಅತ್ಯವಶ್ಯಕವಾಗಿದೆ. ಜೊತೆಗೆ ಸಾಮಾಜಿಕ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದರು.</p>.<p>ನಿಯೋಜಿತ ಪೀಠಾಧ್ಯಕ್ಷ ಡಾ.ಅಭಿನವ ಸಿದ್ದರಾಮೇಶ್ವರ ಮಹಾಸ್ವಾಮಿ,ಭೂಮಿಪೂಜೆ ನೆರವೇರಿಸಿದ ಈ ಸ್ಥಳ ಜ್ಞಾನ ಸತ್ರವಾಗಲಿದೆ ಎಂದರು.</p>.<p>ಮಾಜಿ ಶಾಸಕ ಎನ್.ಎಸ್.ಖೇಡ, ಕನ್ಹೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಶಿರೋಳ ರಾಮಾಮಠದ ಶಂಕರಾರೂಢ ಸ್ವಾಮೀಜಿ, ಬುರಾಣಪುರ ಆರೂಢಾ ಮಠದಯೋಗೇಶ್ವರಿ ತಾಯಿ, ಬೆಳಗಾವಿಯ ಗಣಿತ ತಜ್ಞ ಪ್ರೊ.ಎನ್.ವೆಂಕಟೇಶ, ಡಾ.ಸಿದ್ದಣ್ಣ ಉತ್ನಾಳ, ಮಂಜುನಾಥ ಜನಗೊಂಡ, ಭೀಮಾಶಂಕರ ಬಿರಾದಾರ ಉಪಸ್ಥಿತರಿದ್ದರು.</p>.<p>***</p>.<p>ದೇಶದಲ್ಲಿ ಸದಾ ಗೌರವಿಸಲ್ಪಡುವವರೆಂದರೆ ದೇಶ ಕಾಯುವ ವೀರ ಸೈನಿಕರು ಮತ್ತು ಬೆವರು ಸುರಿಸಿ ದುಡಿಯುವ ರೈತರು.<br />-<em><strong>ಸಿದ್ಧೇಶ್ವರ ಸ್ವಾಮೀಜಿ<br />ಜ್ಞಾನಯೋಗಾಶ್ರಮ, ವಿಜಯಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>