<p><strong>ಇಂಡಿ:</strong> ತಾಲ್ಲೂಕಿನ ಲಚ್ಯಾಣ ಗ್ರಾಮದ ನಡು ಭಾಗದಲ್ಲಿ ಹಾದು ಹೋದ ರೈಲ್ವೆ ಮಾರ್ಗಕ್ಕೆ ಅಪಘಾತ ತಡೆಯಲು ಅಳವಡಿಸಲಾದ ರೈಲ್ವೆ ಗೇಟ್ ಫಾಟಕ್ ಮೂಲಕ ವಾಹನ ಸವಾರರು ಸಂಚರಿಸುವುದು ಈ ಭಾಗದ ಜನರಿಗೆ ಈಗ ಸವಾಲಾಗಿ ಪರಿಣಮಿಸಿದೆ.</p>.<p>ಬಹುದಿನಗಳಿಂದ ಅಂಕುಡೊಂಕಾದ ಫಾಟಕ್ ಬೇಗನೇ ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>.<p>ಇಲ್ಲಿನ ಸಿದ್ಧಲಿಂಗ ಮಹಾರಾಜರ ಕಮರಿಮಠದ ಸಮೀಪದಲ್ಲೆ ಗ್ರಾಮಕ್ಕೆ ಹೊಂದಿಕೊಂಡಿರುವ ಹಳೆಯ ಕಾಲದ ಈ ರೈಲ್ವೆ ಗೇಟ್ನಿಂದಾಗಿ ಈ ಹಿಂದೆ ಕಿರಿ ಕಿರಿಯಾಗಲಿ, ತೊಂದರೆ ಆಗಲಿ ಆಗಿರಲಿಲ್ಲ. ರೈಲುಗಳ ಓಡಾಟವೂ ಕಡಿಮೆ ಇತ್ತು. ಹೆಚ್ಚಿದ ವಾಹನಗಳ ಸಂಖ್ಯೆಯಿಂದಾಗಿ ಈ ರೈಲ್ವೆ ಕ್ರಾಸ್ ಮೂಲಕ ಈಗ ನಿತ್ಯ ನೂರಾರು ವಾಹನಗಳು, ಸಾವಿರಾರು ಜನರು ಸಂಚರಿಸುತ್ತಾರೆ. ಗ್ರಾಮದ ಜನರು, ಸಮೀಪದ ಲೋಣಿ (ಕೆ.ಡಿ) ಬರಗೂಡಿ ಗ್ರಾಮಸ್ಥರು ಇದೇ ಗೇಟ್ ದಾಟಿ ಸಂಚರಿಸಿ 12 ಕಿ.ಮೀ. ದೂರದ ಇಂಡಿ ಪಟ್ಟಣ ತಲುಪುತ್ತಾರೆ.</p>.<p>ಈಚೆಗೆ ಬೈಕ್ಗಳ ಸಂಖ್ಯೆ ಹೆಚ್ಚಾಗಿದ್ದು, ನಿತ್ಯ ಸಾವಿರಾರು ಬೈಕ್, ಸಾರಿಗೆ ಬಸ್, ಕಬ್ಬಿನ ಟ್ಯಾಕ್ಟರ್, ಖಾಸಗಿ ವಾಹನಗಳು ಈ ಗೇಟ್ ಮೂಲಕ ಸಂಚರಿಸುತ್ತಿವೆ. ಈಚೆಗೆ ಜೋಡಿ ರೈಲು ಮಾರ್ಗ, ಈ ಮಾರ್ಗದಲ್ಲಿ ವಿದ್ಯುತ್ ಅಳವಡಿಸಿದ ದಿನದಿಂದ ಅಂತೂ ಈ ಭಾಗದಲ್ಲಿ ಗೂಡ್ಸ ರೈಲು ವಾಹನಗಳ ಓಡಾಟದ ಸಂಖ್ಯೆ ಹೆಚ್ಚಿದೆ. ಕೂಡಗಿ ಶಾಖೋತ್ಪನ್ನ ಘಟಕಕ್ಕೆ ನಿತ್ಯ ಕಲ್ಲಿದ್ದಲು ಪೂರೈಕೆ ಗೂಡ್ಸ ರೈಲು ಹಗಲಿರುಳು ಸಂಚಿಸುತ್ತವೆ. ಇದೇ ಗ್ರಾಮದ ರೈಲು ನಿಲ್ದಾಣದಲ್ಲಿ ಅಧಿಕ ಸಮಯದವರೆಗೆ ಗೂಡ್ಸ ರೈಲುಗಳ ನಿಲುಗಡೆಯಾಗುತ್ತಿದೆ.</p>.<p>ಪರಿಣಾಮ ಈ ಸ್ಥಳದಲ್ಲಿ ಮೇಲಿಂದ ಮೇಲೆ ರೈಲ್ವೆ ಗೇಟ್ ಹಾಕಲಾಗುತ್ತದೆ. ಇದರಿಂದ ಆಸ್ಪತ್ರೆಗೆ, ಶಾಲೆ ಕಾಲೇಜುಗಳಿಗೆ, ಸಂತೆ ಪೇಟೆಗೆ ದ್ವಿಚಕ್ರ, ತ್ರಿಚಕ್ರ ವಾಹನಗಳ ಮೂಲಕ ಲಗುಬಗೆಯಿಂದ ಸಂಚರಿಸುವ ಪ್ರಯಾಣಿಕರಿಗೆ ಭಾರಿ ತೊಂದರೆಯಾಗಿದೆ.</p>.<p>ಈ ರೈಲ್ವೆ ಗೇಟ್ ಬಳಿ ಎಡ ಹಾಗೂ ಬಲ ಬದಿಯಲ್ಲಿ ಜಾರು ರಸ್ತೆ ಇದೆ. ರೈಲ್ವೆ ಗೇಟ್ ತೆರೆದ ಬಳಿಕ ಹರಸಾಹಸದಿಂದ ಎತ್ತರದ ರೈಲ್ವೆ ಗೇಟ್ ತಲುಪಿದ ಎಲ್ಲ ವಾಹನಗಳು ದಾಟುವಾಗ ಈ ಗೇಟ್ಗೆ ಪಶ್ಚಿಮ ಭಾಗದಲ್ಲಿ ಅಳವಡಿಸಲಾದ ಕಬ್ಬಿಣದ ಹಾರೆಯ ಪಾಟಕ್ ಡೊಂಕಾಗಿದೆ. ಇದು ಎತ್ತರದ ವಾಹನಗಳಿಗೆ ನಿತ್ಯ ತಾಕುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಹಾರಿಯ ಕೆಳಭಾಗದಲ್ಲಿ ಹಲವು ತಿಂಗಳುಗಳಿಂದ ಕಾಲು ಭಾಗದ ರಸ್ತೆ ಬಂದ್ ಮಾಡಲಾಗಿದೆ. ಇದರಿಂದ ವಾಹನ ಸವಾರರಿಗೆ ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಲಚ್ಯಾಣ ಗ್ರಾಮದ ಶಿವಪುತ್ರ ವಾಡಿ ದೂರಿದ್ದಾರೆ.</p>.<p>ಇದು ಅತ್ಯಂತ ಹಳೆಯದಾದ ಅಂದರೆ ಮೀಟರ್ ಗೇಜ್ ಇದ್ದಾಗಿನಿಂದಲೂ ಗುರುತಿಸಲಾದ ಕ್ರಾಸಿಂಗ್ ಸ್ಥಳವಾಗಿದೆ. ಈ ಸ್ಥಳದಲ್ಲಿ ನಿತ್ಯ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಪ್ರಸ್ತುತ ಕಬ್ಬು ಸಾಗಾಟದ ಸೀಜನ್ ಇರುವುದಿರಿಂದ ಕಬ್ಬಿನ ಟ್ಯಾಕ್ಟರ್ ವಾಹನಗಳ ಓಡಾಟ ಹೆಚ್ಚಿದೆ. ಆದ್ದರಿಂದ ಅವಘಡ ಸಂಭವಿಸುವ ಮುನ್ನ ಸಂಬಂಧಿಸಿದ ದಕ್ಷಿಣ ಪಶ್ವಿಮ ರೈಲ್ವೆ ವಿಭಾಗೀಯ ನಿಯಂತ್ರಕರು ಬೇಗನೇ ಈ ರೈಲ್ವೆ ಫಾಟಕ್ ಬದಲಾಯಿಸಿ ಹೊಸ ಫಾಟಕ್ ಅಳವಡಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕು ಎಂದು ಲಚ್ಯಾಣ, ಲೋಣಿ ಕೆ.ಡಿ. ಬರಗೂಡಿ, ಪಡನೂರ, ಅಹಿರಸಂಗ ಗ್ರಾಮಗಳ ಜನರು, ರೈಲು ಪ್ರಯಾಣಿಕರು ಒತ್ತಾಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಡಿ:</strong> ತಾಲ್ಲೂಕಿನ ಲಚ್ಯಾಣ ಗ್ರಾಮದ ನಡು ಭಾಗದಲ್ಲಿ ಹಾದು ಹೋದ ರೈಲ್ವೆ ಮಾರ್ಗಕ್ಕೆ ಅಪಘಾತ ತಡೆಯಲು ಅಳವಡಿಸಲಾದ ರೈಲ್ವೆ ಗೇಟ್ ಫಾಟಕ್ ಮೂಲಕ ವಾಹನ ಸವಾರರು ಸಂಚರಿಸುವುದು ಈ ಭಾಗದ ಜನರಿಗೆ ಈಗ ಸವಾಲಾಗಿ ಪರಿಣಮಿಸಿದೆ.</p>.<p>ಬಹುದಿನಗಳಿಂದ ಅಂಕುಡೊಂಕಾದ ಫಾಟಕ್ ಬೇಗನೇ ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>.<p>ಇಲ್ಲಿನ ಸಿದ್ಧಲಿಂಗ ಮಹಾರಾಜರ ಕಮರಿಮಠದ ಸಮೀಪದಲ್ಲೆ ಗ್ರಾಮಕ್ಕೆ ಹೊಂದಿಕೊಂಡಿರುವ ಹಳೆಯ ಕಾಲದ ಈ ರೈಲ್ವೆ ಗೇಟ್ನಿಂದಾಗಿ ಈ ಹಿಂದೆ ಕಿರಿ ಕಿರಿಯಾಗಲಿ, ತೊಂದರೆ ಆಗಲಿ ಆಗಿರಲಿಲ್ಲ. ರೈಲುಗಳ ಓಡಾಟವೂ ಕಡಿಮೆ ಇತ್ತು. ಹೆಚ್ಚಿದ ವಾಹನಗಳ ಸಂಖ್ಯೆಯಿಂದಾಗಿ ಈ ರೈಲ್ವೆ ಕ್ರಾಸ್ ಮೂಲಕ ಈಗ ನಿತ್ಯ ನೂರಾರು ವಾಹನಗಳು, ಸಾವಿರಾರು ಜನರು ಸಂಚರಿಸುತ್ತಾರೆ. ಗ್ರಾಮದ ಜನರು, ಸಮೀಪದ ಲೋಣಿ (ಕೆ.ಡಿ) ಬರಗೂಡಿ ಗ್ರಾಮಸ್ಥರು ಇದೇ ಗೇಟ್ ದಾಟಿ ಸಂಚರಿಸಿ 12 ಕಿ.ಮೀ. ದೂರದ ಇಂಡಿ ಪಟ್ಟಣ ತಲುಪುತ್ತಾರೆ.</p>.<p>ಈಚೆಗೆ ಬೈಕ್ಗಳ ಸಂಖ್ಯೆ ಹೆಚ್ಚಾಗಿದ್ದು, ನಿತ್ಯ ಸಾವಿರಾರು ಬೈಕ್, ಸಾರಿಗೆ ಬಸ್, ಕಬ್ಬಿನ ಟ್ಯಾಕ್ಟರ್, ಖಾಸಗಿ ವಾಹನಗಳು ಈ ಗೇಟ್ ಮೂಲಕ ಸಂಚರಿಸುತ್ತಿವೆ. ಈಚೆಗೆ ಜೋಡಿ ರೈಲು ಮಾರ್ಗ, ಈ ಮಾರ್ಗದಲ್ಲಿ ವಿದ್ಯುತ್ ಅಳವಡಿಸಿದ ದಿನದಿಂದ ಅಂತೂ ಈ ಭಾಗದಲ್ಲಿ ಗೂಡ್ಸ ರೈಲು ವಾಹನಗಳ ಓಡಾಟದ ಸಂಖ್ಯೆ ಹೆಚ್ಚಿದೆ. ಕೂಡಗಿ ಶಾಖೋತ್ಪನ್ನ ಘಟಕಕ್ಕೆ ನಿತ್ಯ ಕಲ್ಲಿದ್ದಲು ಪೂರೈಕೆ ಗೂಡ್ಸ ರೈಲು ಹಗಲಿರುಳು ಸಂಚಿಸುತ್ತವೆ. ಇದೇ ಗ್ರಾಮದ ರೈಲು ನಿಲ್ದಾಣದಲ್ಲಿ ಅಧಿಕ ಸಮಯದವರೆಗೆ ಗೂಡ್ಸ ರೈಲುಗಳ ನಿಲುಗಡೆಯಾಗುತ್ತಿದೆ.</p>.<p>ಪರಿಣಾಮ ಈ ಸ್ಥಳದಲ್ಲಿ ಮೇಲಿಂದ ಮೇಲೆ ರೈಲ್ವೆ ಗೇಟ್ ಹಾಕಲಾಗುತ್ತದೆ. ಇದರಿಂದ ಆಸ್ಪತ್ರೆಗೆ, ಶಾಲೆ ಕಾಲೇಜುಗಳಿಗೆ, ಸಂತೆ ಪೇಟೆಗೆ ದ್ವಿಚಕ್ರ, ತ್ರಿಚಕ್ರ ವಾಹನಗಳ ಮೂಲಕ ಲಗುಬಗೆಯಿಂದ ಸಂಚರಿಸುವ ಪ್ರಯಾಣಿಕರಿಗೆ ಭಾರಿ ತೊಂದರೆಯಾಗಿದೆ.</p>.<p>ಈ ರೈಲ್ವೆ ಗೇಟ್ ಬಳಿ ಎಡ ಹಾಗೂ ಬಲ ಬದಿಯಲ್ಲಿ ಜಾರು ರಸ್ತೆ ಇದೆ. ರೈಲ್ವೆ ಗೇಟ್ ತೆರೆದ ಬಳಿಕ ಹರಸಾಹಸದಿಂದ ಎತ್ತರದ ರೈಲ್ವೆ ಗೇಟ್ ತಲುಪಿದ ಎಲ್ಲ ವಾಹನಗಳು ದಾಟುವಾಗ ಈ ಗೇಟ್ಗೆ ಪಶ್ಚಿಮ ಭಾಗದಲ್ಲಿ ಅಳವಡಿಸಲಾದ ಕಬ್ಬಿಣದ ಹಾರೆಯ ಪಾಟಕ್ ಡೊಂಕಾಗಿದೆ. ಇದು ಎತ್ತರದ ವಾಹನಗಳಿಗೆ ನಿತ್ಯ ತಾಕುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಹಾರಿಯ ಕೆಳಭಾಗದಲ್ಲಿ ಹಲವು ತಿಂಗಳುಗಳಿಂದ ಕಾಲು ಭಾಗದ ರಸ್ತೆ ಬಂದ್ ಮಾಡಲಾಗಿದೆ. ಇದರಿಂದ ವಾಹನ ಸವಾರರಿಗೆ ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಲಚ್ಯಾಣ ಗ್ರಾಮದ ಶಿವಪುತ್ರ ವಾಡಿ ದೂರಿದ್ದಾರೆ.</p>.<p>ಇದು ಅತ್ಯಂತ ಹಳೆಯದಾದ ಅಂದರೆ ಮೀಟರ್ ಗೇಜ್ ಇದ್ದಾಗಿನಿಂದಲೂ ಗುರುತಿಸಲಾದ ಕ್ರಾಸಿಂಗ್ ಸ್ಥಳವಾಗಿದೆ. ಈ ಸ್ಥಳದಲ್ಲಿ ನಿತ್ಯ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಪ್ರಸ್ತುತ ಕಬ್ಬು ಸಾಗಾಟದ ಸೀಜನ್ ಇರುವುದಿರಿಂದ ಕಬ್ಬಿನ ಟ್ಯಾಕ್ಟರ್ ವಾಹನಗಳ ಓಡಾಟ ಹೆಚ್ಚಿದೆ. ಆದ್ದರಿಂದ ಅವಘಡ ಸಂಭವಿಸುವ ಮುನ್ನ ಸಂಬಂಧಿಸಿದ ದಕ್ಷಿಣ ಪಶ್ವಿಮ ರೈಲ್ವೆ ವಿಭಾಗೀಯ ನಿಯಂತ್ರಕರು ಬೇಗನೇ ಈ ರೈಲ್ವೆ ಫಾಟಕ್ ಬದಲಾಯಿಸಿ ಹೊಸ ಫಾಟಕ್ ಅಳವಡಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕು ಎಂದು ಲಚ್ಯಾಣ, ಲೋಣಿ ಕೆ.ಡಿ. ಬರಗೂಡಿ, ಪಡನೂರ, ಅಹಿರಸಂಗ ಗ್ರಾಮಗಳ ಜನರು, ರೈಲು ಪ್ರಯಾಣಿಕರು ಒತ್ತಾಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>