ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಮುದ್ದೇಬಿಹಾಳ: ಸಾಧಕರ ಊರಲ್ಲಿ ಸಮಸ್ಯೆಗಳದ್ದೇ ಕಾರುಬಾರು!

ಬೀದಿ ದೀಪವಿಲ್ಲ, ಮಹಿಳೆಯರಿಗೆ ಬಯಲು ಬಹಿರ್ದೆಸೆಯೇ ಆಸರೆ
Published : 2 ಆಗಸ್ಟ್ 2023, 6:49 IST
Last Updated : 2 ಆಗಸ್ಟ್ 2023, 6:49 IST
ಫಾಲೋ ಮಾಡಿ
Comments
ಮುದ್ದೇಬಿಹಾಳ ತಾಲ್ಲೂಕಿನ ಯರಗಲ್‍ದಲ್ಲಿ ಶಿಥಿಲಗೊಂಡು ಉರುಳಿ ಬಿದ್ದಿರುವ ಸಾರ್ವಜನಿಕ ಶೌಚಾಲಯ 
ಮುದ್ದೇಬಿಹಾಳ ತಾಲ್ಲೂಕಿನ ಯರಗಲ್‍ದಲ್ಲಿ ಶಿಥಿಲಗೊಂಡು ಉರುಳಿ ಬಿದ್ದಿರುವ ಸಾರ್ವಜನಿಕ ಶೌಚಾಲಯ 
ಸಾಧಕರ ತವರೂರು ಯರಗಲ್ 
ಯರಗಲ್ ಗ್ರಾಮ ಎಂದಾಕ್ಷಣ ಧಾರವಾಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ.ಎಚ್.ಬಿ.ವಾಲೀಕಾರ ಹೆಸರು ಕಣ್ಮುಂದೆ ಹಾಯ್ದು ಹೋಗುತ್ತದೆ. ಕೊಪ್ಪಳ ಹೆಚ್ಚುವರಿ ಜಿಲ್ಲಾಧಿಕಾರಿಗಳಾಗಿರುವ ಸಾವಿತ್ರಿ ಕಡಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿ ಶಾಂತಾ ಕಡಿ ಅವರು ಇದೇ ಯರಗಲ್‍ದವರು. ಅಷ್ಟೇ ಏಕೆ ಉತ್ತರ ಕರ್ನಾಟಕ ಹೊರ ರಾಜ್ಯಗಳಲ್ಲಿ ತಮ್ಮ ಹಾಸ್ಯ ಕಲೆಯ ಮೂಲಕ ಹೆಸರು ಮಾಡಿರುವ ನಟ ಗೋಪಾಲ ಹೂಗಾರ ಸಂಗೀತ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಗಮೇಶ ಶಿವಣಗಿ ಗವಾಯಿಗಳು ಚಿತ್ರಕಲಾ ಶಿಕ್ಷಕ ಬಸವರಾಜ ಹಡಪದ ಇದೇ ಊರಿನವರು ಎಂಬುದು ವಿಶೇಷ.
ಹೆಸ್ಕಾಂಗೆ ಪತ್ರ ಬರೆಯುತ್ತೇವೆ...
ಯರಗಲ್‌ನ ಹೊಸ ಪ್ಲಾಟ್‍ಗಳಲ್ಲಿ ಬೀದಿ ದೀಪ ವ್ಯವಸ್ಥೆಗೆ ಹೆಸ್ಕಾಂಗೆ ಪತ್ರ ಬರೆಯುತ್ತೇವೆ. ಚರಂಡಿ ವ್ಯವಸ್ಥೆ ಸುಧಾರಣೆಗೂ ಯೋಜನೆ ಹಾಕಿಕೊಂಡಿದ್ದೇವೆ. ಎರಡ್ಮೂರು ಸಲ ಯರಗಲ್‍ದಿಂದ ಮದರಿ ಹೋಗುವ ಊರೊಳಗಿನ ಗುಂಡಿಗಳಿಗೆ ಮಣ್ಣು ಹಾಕಿಸಿ ಸಮತಟ್ಟು ಮಾಡಿಸಲಾಗಿತ್ತು. ಅದರ ದುರಸ್ತಿ ಸುಧಾರಣೆ ಪಿಡಬ್ಲ್ಯುಡಿ ಇಲಾಖೆಯವರಿಗೆ ಬರುತ್ತದೆ ಎಂದು ಆಲೂರ ಗ್ರಾ.ಪಂ. ಪಿಡಿಒ ಪಿ.ಎಸ್.ನಾಯ್ಕೋಡಿ ಹೇಳಿದರು.
ಯರಗಲ್‌ನ ಹೊಸ ಪ್ಲಾಟ್‍ಗಳಲ್ಲಿ ಬೀದಿ ದೀಪ ವ್ಯವಸ್ಥೆಗೆ ಹೆಸ್ಕಾಂಗೆ ಪತ್ರ ಬರೆಯುತ್ತೇವೆ. ಚರಂಡಿ ವ್ಯವಸ್ಥೆ ಸುಧಾರಣೆಗೂ ಯೋಜನೆ ಹಾಕಿಕೊಂಡಿದ್ದೇವೆ. ಎರಡ್ಮೂರು ಸಲ ಯರಗಲ್‍ದಿಂದ ಮದರಿ ಹೋಗುವ ಊರೊಳಗಿನ ಗುಂಡಿಗಳಿಗೆ ಮಣ್ಣು ಹಾಕಿಸಿ ಸಮತಟ್ಟು ಮಾಡಿಸಲಾಗಿತ್ತು. ಅದರ ದುರಸ್ತಿ, ಸುಧಾರಣೆ ಪಿಡಬ್ಲ್ಯುಡಿ ಇಲಾಖೆಯವರಿಗೆ ಬರುತ್ತದೆ.
– ಪಿ.ಎಸ್.ನಾಯ್ಕೋಡಿ,ಗ್ರಾ.ಪಂ ಆಲೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT