ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಭೂ ಹಗರಣ: ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

Published : 27 ಜೂನ್ 2024, 16:22 IST
Last Updated : 27 ಜೂನ್ 2024, 16:22 IST
ಫಾಲೋ ಮಾಡಿ
Comments
ನಿವೇಶನ ಭೂಮಿ ಖರೀದಿ ಮತ್ತು ಮಾರಾಟದ ವಿಷಯದಲ್ಲಿ ಜಿಲ್ಲೆಯಲ್ಲಿ ಯಾರಿಗಾದರೂ ಮೋಸ ವಂಚನೆಯಾಗಿದ್ದರೇ ಸಂಬಂಧಿಸಿದವರು ದೂರು ನೀಡಿದರೆ ಅಗತ್ಯ ಕ್ರಮಕೈಗೊಳ್ಳಲಾಗುವುದು
ಋಷಿಕೇಶ ಸೋನಾವಣೆ ಎಸ್‌ಪಿ ವಿಜಯಪುರ
ಬ್ಯಾಂಕ್‌ಗೆ ಮೋಸ: ಆರೋಪಿಗಳ ಬಂಧನ
ವಿಜಯಪುರ: ಬಬಲೇಶ್ವರ ತಾಲ್ಲೂಕಿನ ನಿಡೋಣಿಯ ಜಿನ್ನಪ್ಪ ಮಂಜರಗಿ 2016 ರಲ್ಲಿ ತಮ್ಮ ಜಮೀನಿನ ಮೇಲೆ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರ್‌ನಲ್ಲಿ ₹3 ಲಕ್ಷ ಸಾಲ ಪಡೆದುಕೊಂಡಿದ್ದು ಮರು ಪಾವತಿಸಿದ ಬ್ಯಾಂಕಿನ ಖೊಟ್ಟಿ ಪೇಯ್ಡ್‌ ಪಾವತಿಯನ್ನು ತಯಾರಿಸಿ ಬೋಜಾ ಕಡಿಮೆ ಮಾಡಲು ಯತ್ನಿಸಿ ಬ್ಯಾಂಕಿಗೆ ಮೋಸ ಮಾಡಿರುವ ಕುರಿತು ಬ್ಯಾಂಕಿನ ಎಸ್‌ಡಿಎ ಇಮಾಮಸಾಬ್‌ ಸಯ್ಯದ್‌ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು. ಜಿನ್ನಪ್ಪ ಸಂತೋಷ ನಾವಿ ಮಹಾವೀರ ಮಂಜರಗಿ ಶ್ರೀಧರ ಅಮೀನಗಡ ತುಕಾರಾಮ ಸಾಳುಂಕೆ  ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದರು ಹೇಳಿದರು. ಆರೋಪಿಗಳು ಖೊಟ್ಟಿಯಾಗಿ ತಯಾರಿಸಿದ ಪೇಯ್ಡ್‌ ಪಾವತಿ ಬಾಂಡ್‌ ಪೇಪರ್ ಎಸ್.ಬಿ.ಐ ಬ್ಯಾಂಕಿನ ಹೆಸರಿನಲ್ಲಿ ತಯಾರಿಸಿದ ಸೀಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ವೃದ್ಧೆ ಜಮೀನು ಅನ್ಯರಿಗೆ ಮಾರಾಟ
ವಿಜಯಪುರ ನಗರದ ದಿವಟಗೇರಿ ನಿವಾಸಿ ನೀಲವ್ವ ನಿರ್ವಾಣಶೆಟ್ಟಿ ಅವರಿಗೆ ಸೇರಿದ 10 ಗುಂಟೆ  ಜಮೀನಿಗೆ ಸಂಬಂಧಿಸಿದಂತೆ ಬೇರೊಬ್ಬರ ಹೆಸರಲ್ಲಿ ಖೊಟ್ಟಿ ದಾಖಲಾತಿಗಳನ್ನು ತಯಾರಿಸಿ ₹ 5 ಲಕ್ಷಕ್ಕೆ ಭೂತನಾಳ ತಾಂಡದ  ಶಂಕರ  ಚವ್ಹಾಣ ಅವನಿಗೆ ಮಾರಾಟ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು. ಪ್ರಕರಣದ ಸಂಬಂಧ ಜಮೀನು ಖರೀದಿಸಿದ್ದ ಭೂತನಾಳ ತಾಂಡದ ಶಂಕರ ಚವ್ಹಾಣ(38) ಇಂಡಿ ತಾಲ್ಲೂಕಿನ ಹಳಗುಣಕಿಯ ಭೀಮರಾಯ ಕಟ್ಟಿಮನಿ(32) ದಿವಟಗೇರಿ ಗಲ್ಲಿಯ ನಾಗಪ್ಪ ಕೋಲಕಾರ(50) ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT