ಬ್ಯಾಂಕ್ಗೆ ಮೋಸ: ಆರೋಪಿಗಳ ಬಂಧನ
ವಿಜಯಪುರ: ಬಬಲೇಶ್ವರ ತಾಲ್ಲೂಕಿನ ನಿಡೋಣಿಯ ಜಿನ್ನಪ್ಪ ಮಂಜರಗಿ 2016 ರಲ್ಲಿ ತಮ್ಮ ಜಮೀನಿನ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ನಲ್ಲಿ ₹3 ಲಕ್ಷ ಸಾಲ ಪಡೆದುಕೊಂಡಿದ್ದು ಮರು ಪಾವತಿಸಿದ ಬ್ಯಾಂಕಿನ ಖೊಟ್ಟಿ ಪೇಯ್ಡ್ ಪಾವತಿಯನ್ನು ತಯಾರಿಸಿ ಬೋಜಾ ಕಡಿಮೆ ಮಾಡಲು ಯತ್ನಿಸಿ ಬ್ಯಾಂಕಿಗೆ ಮೋಸ ಮಾಡಿರುವ ಕುರಿತು ಬ್ಯಾಂಕಿನ ಎಸ್ಡಿಎ ಇಮಾಮಸಾಬ್ ಸಯ್ಯದ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದರು. ಜಿನ್ನಪ್ಪ ಸಂತೋಷ ನಾವಿ ಮಹಾವೀರ ಮಂಜರಗಿ ಶ್ರೀಧರ ಅಮೀನಗಡ ತುಕಾರಾಮ ಸಾಳುಂಕೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದರು ಹೇಳಿದರು. ಆರೋಪಿಗಳು ಖೊಟ್ಟಿಯಾಗಿ ತಯಾರಿಸಿದ ಪೇಯ್ಡ್ ಪಾವತಿ ಬಾಂಡ್ ಪೇಪರ್ ಎಸ್.ಬಿ.ಐ ಬ್ಯಾಂಕಿನ ಹೆಸರಿನಲ್ಲಿ ತಯಾರಿಸಿದ ಸೀಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.