<p><strong>ವಿಜಯಪುರ:</strong> ‘ಸಂಘಟನೆಗಳು ಕೇವಲ ಹುಟ್ಟು ಹಾಕುವುದಲ್ಲ, ಸಂಘಟನೆಗಳಿಂದ ಸಮಾಜದ ಓರೆ-ಕೊರೆಗಳನ್ನು ತಿದ್ದುವ ಕೆಲಸವಾಗಬೇಕು’ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಂ.ಸಿ. ಮುಲ್ಲಾ ಹೇಳಿದರು.</p>.<p>ನಗರದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ನಡೆದ ಸಾಮ್ರಾಟ್ ಅಶೋಕ ರೆಜಿಮೆಂಟ್ ಅಸೋಸಿಯೇಶನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಂಘಟನೆಗಳು ಸಮಾಜದ ಪ್ರತಿಯೊಬ್ಬ ದೀನ-ದಲಿತರ, ಮಹಿಳೆಯರ, ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಕೆಲಸ ಮಾಡಬೇಕು. ಅನ್ಯಾಯ ಕಂಡಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ನ್ಯಾಯ ಒದಗಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.</p>.<p>ಸಿದ್ದು ಕಲ್ಲೂರ, ಶ್ರೀಕಾಂತ ಅರಕೇರಿ, ಸುಭಾಷ ನಾಯ್ಕೋಡಿ, ಸುರೇಶ ಶೇಡಶ್ಯಾಳ, ಪ್ರಶಾಂತ ಕಿರಣಗಿ, ದಸ್ತಗೀರ ಸಾಲೋಟಗಿ, ಲಕ್ಷ್ಮಣ ಬೆಟಗೇರಿ, ಫಯಾಜ ಕಲಾದಗಿ, ಸಂತೋಷ ಮಂದಕನಳ್ಳಿ, ಅಶೋಕ ಶಿವಶರಣರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ಸಂಘಟನೆಗಳು ಕೇವಲ ಹುಟ್ಟು ಹಾಕುವುದಲ್ಲ, ಸಂಘಟನೆಗಳಿಂದ ಸಮಾಜದ ಓರೆ-ಕೊರೆಗಳನ್ನು ತಿದ್ದುವ ಕೆಲಸವಾಗಬೇಕು’ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಂ.ಸಿ. ಮುಲ್ಲಾ ಹೇಳಿದರು.</p>.<p>ನಗರದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ನಡೆದ ಸಾಮ್ರಾಟ್ ಅಶೋಕ ರೆಜಿಮೆಂಟ್ ಅಸೋಸಿಯೇಶನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಂಘಟನೆಗಳು ಸಮಾಜದ ಪ್ರತಿಯೊಬ್ಬ ದೀನ-ದಲಿತರ, ಮಹಿಳೆಯರ, ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಕೆಲಸ ಮಾಡಬೇಕು. ಅನ್ಯಾಯ ಕಂಡಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ನ್ಯಾಯ ಒದಗಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.</p>.<p>ಸಿದ್ದು ಕಲ್ಲೂರ, ಶ್ರೀಕಾಂತ ಅರಕೇರಿ, ಸುಭಾಷ ನಾಯ್ಕೋಡಿ, ಸುರೇಶ ಶೇಡಶ್ಯಾಳ, ಪ್ರಶಾಂತ ಕಿರಣಗಿ, ದಸ್ತಗೀರ ಸಾಲೋಟಗಿ, ಲಕ್ಷ್ಮಣ ಬೆಟಗೇರಿ, ಫಯಾಜ ಕಲಾದಗಿ, ಸಂತೋಷ ಮಂದಕನಳ್ಳಿ, ಅಶೋಕ ಶಿವಶರಣರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>