ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಕಳವು

Last Updated 7 ಅಕ್ಟೋಬರ್ 2020, 14:53 IST
ಅಕ್ಷರ ಗಾತ್ರ

ವಿಜಯಪುರ: ನಗರದ ರೈಲು ನಿಲ್ದಾಣದಿಂದ ಕೆಎಫ್‌ಸಿಎಸ್‌ಸಿ ಗೋದಾಮಿಗೆ ಪಡಿತರ ಅಕ್ಕಿ ಚೀಲ ತುಂಬಿಕೊಂಡು ಹೊರಟ್ಟಿದ್ದ ಲಾರಿಯನ್ನೇ ಕಳವು ಮಾಡಲಾಗಿದೆ.

ಪಿ.ಎಂ.ಹೊಸೂರ ಎಂಬ ಪಡಿತರ ಅಕ್ಕಿ ಸಾಗಾಣಿಕೆ ಗುತ್ತಿಗೆದಾರರಿಗೆ ಸೇರಿದ ಕೆಎ 22 ಸಿ 0758 ಅಶೋಕ ಲೈಲ್ಯಾಂಡ್‌ ಲಾರಿಯಲ್ಲಿ₹4.80 ಲಕ್ಷ ಮೌಲ್ಯದ 21.1 ಟನ್‌ ಪಡಿತರ ಅಕ್ಕಿಯನ್ನು ತುಂಬಿಕೊಂಡು ಹೊರಟ್ಟಿದ್ದ ಚಾಲಕ ಮದಾರಸಾಬ್‌ ಮುಲ್ಲಾ ಕಳೆದ ಸೋಮವಾರ ಸಂಜೆ 6.30ಕ್ಕೆ ನಗರದ ಐಒಸಿ ಮುಂದೆ ಇರುವ ವಿನಾಯಕ ಪೆಟ್ರೋಲ್‌ ಪಂಪ್‌ನಲ್ಲಿ ಡೀಸೆಲ್‌ ಹಾಕಿಸಿ, ಅಲ್ಲಿಯೇ‌ ಎದುರು ಲಾರಿಯನ್ನು ನಿಲ್ಲಿಸಿ, ಮನೆಗೆ ಹೋಗಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮರು ದಿನ ಮಂಗಳವಾರ ಬೆಳಿಗ್ಗೆ ಚಾಲಕ ಸ್ಥಳಕ್ಕೆ ಬಂದು ನೋಡಿದಾಗ ಲಾರಿ ಕಳುವಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT