ಲೋಣಿ ಅವರು ಚುನಾಯಿತರಾದರೆ ಪರಿಷತ್ತಿಗೆ ಗೌರವ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಬಲ ಬರುತ್ತದೆ. ಲೋಣಿಯವರಿಗೆ ಪ್ರಥಮ ಪ್ರಾಶಸ್ತ್ಯದ ಮತ ಹಾಕುವ ಮೂಲಕ ನಮ್ಮ ಸ್ವಾಭಿಮಾನ ಎತ್ತಿಹಿಡಿಯುತ್ತೇವೆ ಎಂದು ತಳೇವಾಡ ಗ್ರಾ.ಪಂ ಸದಸ್ಯ ಮಲ್ಲಿಕಾರ್ಜುನ ಕುಂಬಾರ, ಮುತ್ತಗಿ ಗ್ರಾ.ಪಂ ಉಪಾಧ್ಯಕ್ಷ ಕನಕಪ್ಪ ಬಂಡಿವಡ್ಡರ, ಹಣಮಾಪುರ ಗ್ರಾ.ಪಂ ಸದಸ್ಯ ಮಹೇಶ ತೋಟಗೇರ, ನರಸಲಗಿ ಗ್ರಾ.ಪಂ ಸದಸ್ಯ ನಾಮದೇವ ರಾಠೋಡ, ಮಸೂತಿ ಗ್ರಾ.ಪಂ ಅಧ್ಯಕ್ಷ ಸಂತೋಷ ಗಣಾಚಾರಿ ಹಾಗೂ ಕೂಡಗಿ ಗ್ರಾ.ಪಂ ಸದಸ್ಯೆ ಕಾಶಿಬಾಯಿ ಉಳ್ಳಾಗಡ್ಡಿ ಹೇಳಿದರು.