ಐ.ಸಿ.ಎ.ಆರ್ ನಿಯಮಾವಳಿಗಳಿಗೆ ವಿರುದ್ಧವಾಗಿ ಒಂದೇ ಕ್ಯಾಂಪಸ್ನಲ್ಲಿ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಜಲಾನಯನ ತರಬೇತಿ ಕೇಂದ್ರ, ಕೃಷಿ ವಿಸ್ತರಣೆ ಶಿಕ್ಷಣ ಕೇಂದ್ರ, ಕೃಷಿ ಮಹಾವಿದ್ಯಾಲಯ, ಪಕ್ಕದಲ್ಲಿ ತೋಟಗಾರಿಕೆ ವಿಸ್ತರಣೆ ಮತ್ತು ಸಂಶೋಧನಾ ಕೇಂದ್ರ ಕಾರ್ಯನಿರ್ವಸುತ್ತಿದ್ದು ಜಿಲ್ಲಾ ಕೇಂದ್ರದಿಂದ ಅತೀ ಹೆಚ್ಚು ದೂರದಲ್ಲಿರುವ ಮುದ್ದೇಬಿಹಾಳ ಮತ್ತು ಸುತ್ತಲಿನ ತಾಲೂಕುಗಳ ರೈತರಿಗೆ ನ್ಯಾಯ ಒದಗಿಸಬೇಕು ಎಂಬ ಕೂಗು ಬಹಳ ದಿನಗಳಿಂದ ಇದೆ.