ನಗರದ ಮನಗೂಳಿ ಅಗಸಿಯ ಹನುಮಾನ್ ದೇವಸ್ಥಾನ, ಬಾಗಲಕೋಟೆ ರಸ್ತೆಯ ರೈಲ್ವೆ ಗೇಟ್ ಬಳಿ ಇರುವ ಹನುಮಾನ್ ದೇವಸ್ಥಾನ, ಕನಕದಾಸ ಬಡಾವಣೆಯಲ್ಲಿರುವ ಅಂಬಾಭವಾನಿ ದೇವಸ್ಥಾನ, ಶಾಹಪೇಟೆ, ಸಿದ್ಧೇಶ್ವರ ಗುಡಿ ಆವರಣ, ಬುದ್ದವಿಹಾರ ಸಮೀಪದ ಆಂಜನೇಯ ದೇವಸ್ಥಾನ ಸೇರಿದಂತೆ ನಗರದ ಬಹುತೇಕ ಬಡಾವಣೆಗಳ ವಿವಿಧ ದೇವಸ್ಥಾನಗಳ ಆವರಣದಲ್ಲಿ ಇರುವ ನಾಗರಕಟ್ಟೆಗಳಲ್ಲಿ ಮುತ್ತೈದೆಯರು ಬೆಳಿಗ್ಗೆಯಿಂದ ಸಂಜೆವರೆಗೂ ನಾಗ ದೇವತೆಗೆ ಕ್ಷೀರಾಭಿಷೇಕ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.