<p><strong>ಸಿಂದಗಿ</strong>: ಗ್ರಾಮ ದೇವತೆ ನೀಲಗಂಗಾದೇವಿ ಜಾತ್ರೆ ಗುರುವಾರ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವಕ್ಕೆ ಸಾರಂಗಮಠದ ಪೀಠಾಧ್ಯಕ್ಷ ಡಾ. ಪ್ರಭು ಸಾರಂಗದೇವ ಶ್ರೀ ಚಾಲನೆ ನೀಡಿದರು. ದೇವಸ್ಥಾನದ ಧರ್ಮದರ್ಶಿ ಸಿದ್ಧರಾಮಪ್ಪ ಪವಾಡಿ (ದೇವರಮನಿ) ಇದ್ದರು.</p>.<p>ವಾದ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ಪಟ್ಟಣದಲ್ಲಿ ಸಾಗಿ ಬಂದಿತು. ಭಕ್ತರು ರಸ್ತೆಯುದ್ದಕ್ಕೂ ನಿಂತುಕೊಂಡು ಪಲ್ಲಕ್ಕಿ ದರ್ಶನ ಪಡೆದರು. ಪಲ್ಲಕ್ಕಿ ಮುಂಚೂಣಿಯಲ್ಲಿ ಛತ್ರ– ಚಾಮರ, ನಂದಿಕೋಲ ರಾರಾಜಿಸುತ್ತಿದ್ದವು. ಪುರವಂತರ ಸೇವೆ ನಡೆಯಿತು.</p>.<p>ಮಹಿಳೆಯರು ಕೈಯಲ್ಲಿ ಆರತಿ ಹಿಡಿದುಕೊಂಡು ಪಲ್ಲಕ್ಕಿ ಜೊತೆ ಸಾಗಿದರು. ಪಲ್ಲಕ್ಕಿ ಹಳೆಯ ಬಜಾರದಲ್ಲಿನ ಬಸವಣ್ಣ ದೇವರ ದೇವಸ್ಥಾನಕ್ಕೆ ತಲುಪಿದ ನಂತರ ಅಲ್ಲಿ ಭಕ್ತರು ದೇವಸ್ಥಾನದ ಸುತ್ತಲೂ ಉರಳು ಸೇವೆ ಭಕ್ತಿ ಸೇವೆ ಸಲ್ಲಿಸಿದರು.</p>.<p>ದೇವಿಯ ಜಾತ್ರೆಯ ಹಿನ್ನೆಲೆಯಲ್ಲಿ ಉಪವಾಸ ವ್ರತ ಕೈಗೊಂಡಿದ್ದ ಮಹಿಳೆಯರು ಇಂದು ದೇವಿಯ ದರ್ಶನದ ನಂತರ ವ್ರತ ಅಂತ್ಯಗೊಳಿಸಿದರು. ಇಡೀ ಪಟ್ಟಣದಾದ್ಯಂತ ಭಕ್ತಿಯ ಪರಾಕಾಷ್ಟೆ ಕಂಡು ಬಂದಿತು. ಬೆಳಿಗ್ಗೆಯಿಂದ ಸಂಜೆಯವರೆಗೂ<br />ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ</strong>: ಗ್ರಾಮ ದೇವತೆ ನೀಲಗಂಗಾದೇವಿ ಜಾತ್ರೆ ಗುರುವಾರ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವಕ್ಕೆ ಸಾರಂಗಮಠದ ಪೀಠಾಧ್ಯಕ್ಷ ಡಾ. ಪ್ರಭು ಸಾರಂಗದೇವ ಶ್ರೀ ಚಾಲನೆ ನೀಡಿದರು. ದೇವಸ್ಥಾನದ ಧರ್ಮದರ್ಶಿ ಸಿದ್ಧರಾಮಪ್ಪ ಪವಾಡಿ (ದೇವರಮನಿ) ಇದ್ದರು.</p>.<p>ವಾದ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ಪಟ್ಟಣದಲ್ಲಿ ಸಾಗಿ ಬಂದಿತು. ಭಕ್ತರು ರಸ್ತೆಯುದ್ದಕ್ಕೂ ನಿಂತುಕೊಂಡು ಪಲ್ಲಕ್ಕಿ ದರ್ಶನ ಪಡೆದರು. ಪಲ್ಲಕ್ಕಿ ಮುಂಚೂಣಿಯಲ್ಲಿ ಛತ್ರ– ಚಾಮರ, ನಂದಿಕೋಲ ರಾರಾಜಿಸುತ್ತಿದ್ದವು. ಪುರವಂತರ ಸೇವೆ ನಡೆಯಿತು.</p>.<p>ಮಹಿಳೆಯರು ಕೈಯಲ್ಲಿ ಆರತಿ ಹಿಡಿದುಕೊಂಡು ಪಲ್ಲಕ್ಕಿ ಜೊತೆ ಸಾಗಿದರು. ಪಲ್ಲಕ್ಕಿ ಹಳೆಯ ಬಜಾರದಲ್ಲಿನ ಬಸವಣ್ಣ ದೇವರ ದೇವಸ್ಥಾನಕ್ಕೆ ತಲುಪಿದ ನಂತರ ಅಲ್ಲಿ ಭಕ್ತರು ದೇವಸ್ಥಾನದ ಸುತ್ತಲೂ ಉರಳು ಸೇವೆ ಭಕ್ತಿ ಸೇವೆ ಸಲ್ಲಿಸಿದರು.</p>.<p>ದೇವಿಯ ಜಾತ್ರೆಯ ಹಿನ್ನೆಲೆಯಲ್ಲಿ ಉಪವಾಸ ವ್ರತ ಕೈಗೊಂಡಿದ್ದ ಮಹಿಳೆಯರು ಇಂದು ದೇವಿಯ ದರ್ಶನದ ನಂತರ ವ್ರತ ಅಂತ್ಯಗೊಳಿಸಿದರು. ಇಡೀ ಪಟ್ಟಣದಾದ್ಯಂತ ಭಕ್ತಿಯ ಪರಾಕಾಷ್ಟೆ ಕಂಡು ಬಂದಿತು. ಬೆಳಿಗ್ಗೆಯಿಂದ ಸಂಜೆಯವರೆಗೂ<br />ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>