<p><strong>ವಿಜಯಪುರ:</strong> ವೀರ ರಾಣಿ ಚನ್ನಮ್ಮ ಅವರ ಮೂರ್ತಿ ಅನಾವರಣಕ್ಕೆ ಯಾವ ವಿರೋಧವೂ ಇಲ್ಲ, ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದವರಿಗೆ ಸಮಾಜದ ಗಣ್ಯರು, ಸ್ವಾಮೀಜಿಗಳು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಹೇಳಿದರು.</p>.<p>ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಜಂಬಗಿಯಲ್ಲಿರುವ ರಾಣಿ ಚೆನ್ನಮ್ಮ ಅವರ ವಂಶಜರಾದ ಜಂಬಗಿಯ ದೇಶಮುಖ ಅವರ ನಿವಾಸದಿಂದ ಬೆಳಿಗ್ಗೆ 6 ರಿಂದ ವೀರ ಜ್ಯೋತಿಯೂ ಹೊರಟು ಸಿದ್ದೇಶ್ವರ ದೇವಾಲಯಕ್ಕೆ ತಲುಪಲಿದೆ. ಸಿದ್ದೇಶ್ವರ ದೇವಾಲಯದಿಂದ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಈ ವೀರ ಜ್ಯೋತಿ ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಲಿದ್ದು, ಈ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ರಾಣಿ ಚನ್ನಮ್ಮ ವೃತ್ತ (ಕೇಂದ್ರ ಬಸ್ ನಿಲ್ದಾಣ)ಕ್ಕೆ ತಲುಪಿ ಸಂಪನ್ನಗೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಈ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದು ವಿವರಿಸಿದರು.</p>.<p>ಕೇಂದ್ರ ಬಸ್ ನಿಲ್ದಾಣದ ಎದುರು ಸುಂದರ ಹಾಗೂ ಭವ್ಯವಾದ ರಾಣಿ ಚನ್ನಮ್ಮ ಮೂರ್ತಿ ಅನಾವರಣ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವಾರು ಸಚಿವರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಒಟ್ಟು 32 ಎತ್ತರದ ಈ ಭವ್ಯ ಪ್ರತಿಮೆ ಜ.9 ರಂದು ಅನಾವರಣವಾಗಲಿದೆ. ಈ ಕಾರ್ಯಕ್ರಮದ ಅಂಗವಾಗಿ 100 ಅಡಿ ಎತ್ತರದ 24 ಗಂಟೆಗಳ ಕಾಲ ತ್ರಿವರ್ಣ ಧ್ವಜ ಹಾರಾಡುವ ನಿಟ್ಟಿನಲ್ಲಿ ಬೃಹತ್ ಧ್ವಜ ಸ್ತಂಭ ನಿರ್ಮಿಸಲಾಗಿದ್ದು, ಈ ಧ್ವಜಸ್ತಂಭದ ಅನಾವರಣ ಸಹ ನಡೆಯಲಿದೆ ಎಂದರು.</p>.<p>ಅಪೂರ್ವ ಇತಿಹಾಸವುಳ್ಳ ಹಾಗೂ ಅನೇಕ ಕಲಾವಿದರಿಗೆ ಕಲಾ ವಿದ್ವತ್ತು ಪ್ರದರ್ಶನಕ್ಕೆ ವೇದಿಕೆಯಾಗಿದ್ದ ಕಿತ್ತೂರ ರಾಣಿ ಚೆನ್ನಮ್ಮ ನಾಟ್ಯ ಮಂದಿರ ಪುನರುಜ್ಜೀವನ ಕಾರ್ಯ ಸಹ ಅದೇ ವೇಳೆ ನಡೆಯಲಿದೆ ಎಂದರು.</p>.<p>ಪ್ರಮುಖರಾದ ಎಸ್.ಎಸ್.ಆಲೂರ, ಡಿ.ಎಸ್. ಬಿರಾದಾರ, ಜಿ.ಜಿ.ಸಲಗರ, ಪುಟ್ಟು ಸಾವಳಗೊಳ, ಆರ್.ಜಿ.ಯರನಾಳ, ರವಿ ತೊರವಿ, ರಾಜುಗೌಡ ಪಾಟೀಲ, ವಿದ್ಯಾರಾಣಿ ತುಂಗಳ ಮೊದಲಾದವರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ವೀರ ರಾಣಿ ಚನ್ನಮ್ಮ ಅವರ ಮೂರ್ತಿ ಅನಾವರಣಕ್ಕೆ ಯಾವ ವಿರೋಧವೂ ಇಲ್ಲ, ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದವರಿಗೆ ಸಮಾಜದ ಗಣ್ಯರು, ಸ್ವಾಮೀಜಿಗಳು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಹೇಳಿದರು.</p>.<p>ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಜಂಬಗಿಯಲ್ಲಿರುವ ರಾಣಿ ಚೆನ್ನಮ್ಮ ಅವರ ವಂಶಜರಾದ ಜಂಬಗಿಯ ದೇಶಮುಖ ಅವರ ನಿವಾಸದಿಂದ ಬೆಳಿಗ್ಗೆ 6 ರಿಂದ ವೀರ ಜ್ಯೋತಿಯೂ ಹೊರಟು ಸಿದ್ದೇಶ್ವರ ದೇವಾಲಯಕ್ಕೆ ತಲುಪಲಿದೆ. ಸಿದ್ದೇಶ್ವರ ದೇವಾಲಯದಿಂದ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಈ ವೀರ ಜ್ಯೋತಿ ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಲಿದ್ದು, ಈ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ರಾಣಿ ಚನ್ನಮ್ಮ ವೃತ್ತ (ಕೇಂದ್ರ ಬಸ್ ನಿಲ್ದಾಣ)ಕ್ಕೆ ತಲುಪಿ ಸಂಪನ್ನಗೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಈ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದು ವಿವರಿಸಿದರು.</p>.<p>ಕೇಂದ್ರ ಬಸ್ ನಿಲ್ದಾಣದ ಎದುರು ಸುಂದರ ಹಾಗೂ ಭವ್ಯವಾದ ರಾಣಿ ಚನ್ನಮ್ಮ ಮೂರ್ತಿ ಅನಾವರಣ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವಾರು ಸಚಿವರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಒಟ್ಟು 32 ಎತ್ತರದ ಈ ಭವ್ಯ ಪ್ರತಿಮೆ ಜ.9 ರಂದು ಅನಾವರಣವಾಗಲಿದೆ. ಈ ಕಾರ್ಯಕ್ರಮದ ಅಂಗವಾಗಿ 100 ಅಡಿ ಎತ್ತರದ 24 ಗಂಟೆಗಳ ಕಾಲ ತ್ರಿವರ್ಣ ಧ್ವಜ ಹಾರಾಡುವ ನಿಟ್ಟಿನಲ್ಲಿ ಬೃಹತ್ ಧ್ವಜ ಸ್ತಂಭ ನಿರ್ಮಿಸಲಾಗಿದ್ದು, ಈ ಧ್ವಜಸ್ತಂಭದ ಅನಾವರಣ ಸಹ ನಡೆಯಲಿದೆ ಎಂದರು.</p>.<p>ಅಪೂರ್ವ ಇತಿಹಾಸವುಳ್ಳ ಹಾಗೂ ಅನೇಕ ಕಲಾವಿದರಿಗೆ ಕಲಾ ವಿದ್ವತ್ತು ಪ್ರದರ್ಶನಕ್ಕೆ ವೇದಿಕೆಯಾಗಿದ್ದ ಕಿತ್ತೂರ ರಾಣಿ ಚೆನ್ನಮ್ಮ ನಾಟ್ಯ ಮಂದಿರ ಪುನರುಜ್ಜೀವನ ಕಾರ್ಯ ಸಹ ಅದೇ ವೇಳೆ ನಡೆಯಲಿದೆ ಎಂದರು.</p>.<p>ಪ್ರಮುಖರಾದ ಎಸ್.ಎಸ್.ಆಲೂರ, ಡಿ.ಎಸ್. ಬಿರಾದಾರ, ಜಿ.ಜಿ.ಸಲಗರ, ಪುಟ್ಟು ಸಾವಳಗೊಳ, ಆರ್.ಜಿ.ಯರನಾಳ, ರವಿ ತೊರವಿ, ರಾಜುಗೌಡ ಪಾಟೀಲ, ವಿದ್ಯಾರಾಣಿ ತುಂಗಳ ಮೊದಲಾದವರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>