‘ಐದು ವರ್ಷಗಳ ಕಾಲ ನೀರಾವರಿ ಸಚಿವನಾಗಿ ಹಗಲು ರಾತ್ರಿ ದುಡಿದು ನೂರಾರು ಕಿ.ಮೀ ಕಾಲುವೆ ನಿರ್ಮಿಸಿ, ಬೃಹತ್ ಜಾಕ್ವೆಲ್ಗಳನ್ನು ಕಟ್ಟಿ, ಬೃಹದಾಕಾರದ ಮೋಟಾರ್ ಕೂಡಿಸಿ ನಿಮಗೆ ನೀರು ಕೊಟ್ಟಿದ್ದೇವೆ. ರೈತರಾದ ನಿಮ್ಮಲ್ಲಿ ಎಲ್ಲರಿಗೂ ಹಂಚಿ ತಿನ್ನುವ ನ್ಯಾಯ ಬೇಕು. ಆಸೆಗೆ ಮಿತಿ ಬೇಕು, ದುರಾಸೆ ಇರಬಾರದು. ಮುಖ್ಯ ಕಾಲುವೆ, ಉಪಕಾಲುವೆ, ಹಳ್ಳ-ಕೊಳ್ಳ, ನಾಲಾಗಳ ಮೂಲಕ ನೀರು ಹರಿಬಿಟ್ಟಾಗಲೂ ಈ ರೀತಿ ನೀರು ಬಳಸುವುದು ಸರಿಯಲ್ಲ. ಇನ್ನೊಬ್ಬರನ್ನು ಉಪವಾಸವಿಟ್ಟು ನೀವು ಹೊಟ್ಟೆ ತುಂಬ ತಿಂದರೆ ಅದು ಅಜೀರ್ಣವಾಗುತ್ತದೆ’ ಎಂದು ರೈತರಿಗೆ ತಿಳಿ ಹೇಳಿದರು.