ಇದು ಈಗಿನ ಹೋರಾಟವಲ್ಲ, 25-30 ವರ್ಷಗಳಿಂದ ನಡೆದುಕೊಂಡು ಬಂದಿದೆ. ಸಂಘಟನೆ ಮಾಡಿಕೊಳ್ಳುತ್ತಾ ಬಂದು ಇದೀಗ ದೊಡ್ಡ ಶಕ್ತಿ ಆಗಿ ನಿಂತಿದ್ದೇವೆ. ಮುಖ್ಯಮಂತ್ರಿಗಳು ತಾವಾಗಿಯೇ ಗಡುವು ನೀಡಿದ್ದರು. ಧಮಕಿ ಹಾಕಿಲ್ಲದಿದ್ದರೂ, ಸಚಿವರಿಂದ ಧಮಕಿ ಅಂತ ಹೇಳಿಸಲಾಯಿತು. ಬೆಳಗಾವಿ ಸಮಾವೇಶದ ದಿನ ಲಕ್ಷಾಂತರ ಜನ ಸೇರಿದ್ದರು. ಅಂದು ಸುವರ್ಣ ಸೌಧಕ್ಕೆ ಮುತ್ತಿಗೆಗೆ ಕರೆ ಕೊಟ್ಟಿದ್ದರೆ, ಹೊರ ಬರಲು ಗೋಲಿಬಾರ್ ಹೊರತು ಬೇರೆ ಪರ್ಯಾಯ ಅಸ್ತ್ರ ಇರಲಿಲ್ಲ. ಅದನ್ನು ನಾವು ಮಾಡಲು ಹೋಗಲಿಲ್ಲ ಎಂದರು.