ಸರ್ಕಾರ ದ್ವಿತೀಯ ಕೃಷಿ ಪದ್ಧತಿ ಅನುಸರಿಸುತ್ತಿದ್ದು, ಕೃಷಿ ಉತ್ಪಾದನೆಯಲ್ಲಿ ಮೌಲ್ಯ ವರ್ಧನಕ್ಕೆ ಹೆಚ್ಚಿನ ಪ್ರೋತ್ಸಾಹಿಸಲಾಗುತ್ತಿದೆ. ನಿಂಬೆ ಮೌಲ್ಯವರ್ಧನೆ ಮುಖಾಂತರ ನಿಂಬೆ ರಸ, ಉಪ್ಪಿನಕಾಯಿ, ಕ್ಯಾಂಡಿ ಸೇರಿದಂತೆ ಹತ್ತು ಹಲವು ಪ್ರಕಾರದ ಮೌಲ್ಯವರ್ಧನೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಬಹುದು ಎಂದರು.
ಯುವಕರಿಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಿಂಬೆ ಮೌಲ್ಯವರ್ಧನೆ ಕುರಿತು ತರಬೇತಿ ನೀಡಲಾಗುವುದು ಮತ್ತು ರೈತರು ನಿಂಬೆ ತಂದು ಸಂಸ್ಕರಣೆ ಮಾಡಿಕೊಳ್ಳಬಹುದು. ಸರ್ಕಾರ ಒಂದು ಜಿಲ್ಲೆ ಒಂದು ಬೆಳೆ ಆಯ್ಕೆ ಮಾಡಿದ್ದು, ವಿಜಯಪುರ ಜಿಲ್ಲೆಗೆ ನಿಂಬೆ ವಿಜಯಪುರ ಜಿಲ್ಲೆಯ ಬೆಳೆಯಾಗಿ ಆಯ್ಕೆಯಾಗಿದೆ ಎಂದರು.
ಬೀಜೋತ್ಪಾದನೆ ಮಾಡಿದರೆ ರೈತರು ಆದಾಯ ಹೆಚ್ಚಿಸಿಕೊಳ್ಳಬಹುದು. ಧಾರವಾಡ ಕೇಂದ್ರ ವಿಶ್ವದಲ್ಲಿಯೇ ಬೀಜೋತ್ಪಾದನೆಗೆ ಮೊದಲ ಸ್ಥಾನದಲ್ಲಿದೆ. ಮಣ್ಣಿನ ಮಾದರಿ ಪರೀಕ್ಷಿಸಿ ಮಣ್ಣಿನ ಗುಣಧರ್ಮ, ಕ್ಷಾರ, ಪೋಷಕಾಂಶಗಳ ಕೊರತೆ, ಯಾವ ಬೆಳೆಗೆ ಎಷ್ಟು ಗೊಬ್ಬರ ಹಾಕಬೇಕು ಎನ್ನುವುದರ ಬಗ್ಗೆ ಸಲಹೆ ನೀಡಲಾಗುತ್ತದೆ ಎಂದರು.
ಸಂಶೋಧನಾ ನಿರ್ದೇಶಕ ಬಿ.ಡಿ.ಬಿರಾದಾರ, ವಿಸ್ತರಣಾ ನಿರ್ದೇಶಕ ಎ.ಎಸ್. ವಸ್ತ್ರದ, ಬೀಜ ಘಟಕದ ಮುಖ್ಯ ಅಧಿಕಾರಿ ರವಿ ಹಂಜಿ, ಪ್ರಗತಿಪರ ರೈತ ಅವಿನಾಶ ದೇಶಪಾಂಡೆ ಮತ್ತು ಕೆವಿಕೆ ಮುಖ್ಯಸ್ಥ ಡಾ.ಶಿವಶಂಕರ ಮೂರ್ತಿ, ಡಾ.ಸವಿತಾ ಮಾತನಾಡಿದರು. ಡಾ.ವೀಣಾ ಚಂದಾವರಿ, ಡಾ.ಪ್ರಕಾಶ ಇದ್ದರು.