ಪ್ರಯಾಣಿಕರಿಗೆ ಬದಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ಸಾರಿಗೆ ಅಧಿಕಾರಿ ವರ್ಗ ಸ್ವತ: ಮುಂದೆ ನಿಂತು ನಗರದ ಕೇಂದ್ರ ಬಸ್ ನಿಲ್ದಾಣದಿಂದಲೇಖಾಸಗಿ ಬಸ್, ಇತರೆ ವಾಹನಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಿದರು. ಹುಬ್ಬಳ್ಳಿ, ಅಥಣಿ, ಜಮಖಂಡಿ ಸೇರಿದಂತೆ ವಿವಿಧ ನಗರಗಳಿಗೆ ಖಾಸಗಿ ಬಸ್ಗಳು ಓಡಿದವಾದರೂ ಮುಷ್ಕರದ ಹಿನ್ನೆಲೆಯಲ್ಲಿ ಬೆರಳೆಣಿಕೆ ಪ್ರಯಾಣಿಕರು ಮಾತ್ರ ಬಸ್ಗಳಲ್ಲಿ ಸಂಚರಿಸಿದರು.ಪೊಲೀಸ್ ಭದ್ರತೆಯನ್ನು ಒದಗಿಸಿದ್ದರು.