<p><strong>ಬಸವನಬಾಗೇವಾಡಿ:</strong> ಸೇವಾ ನಿವೃತ್ತಿ ಹೊಂದಿದ ಬಳಿಗ ಪಟ್ಟಣಕ್ಕೆ ಬಂದ ಸೈನಿಕರಾದ ಮೀಟು ಜಾಧವ್ ಹಾಗೂ ಯಲ್ಲಪ್ಪ ಆರೇರ ಅವರಿಗೆ ಸೋಮವಾರ ಅದ್ಧೂರಿ ಸ್ವಾಗತ ನೀಡಲಾಯಿತು.</p>.<p>ವಿವೇಕ ಬ್ರಿಗೇಡ್ ಸಂಘಟನೆಯ ನೇತೃತ್ವದಲ್ಲಿ ನಿವೃತ್ತ ಸೈನಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡು ಮೆರವಣಿಗೆ ಮಾಡಲಾಯಿತು.</p>.<p>ನಂತರ ವಿರಕ್ತಮಠದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಡಿವೈಎಸ್ಪಿ ಶಾಂತವೀರ, ನಿವೃತ್ತಿ ನಂತರ ಸ್ವಗ್ರಾಮಕ್ಕೆ ಬರುವ ಸೈನಿಕರನ್ನು ಸನ್ಮಾನಿಸುವುರೊಂದಿಗೆ ಅವರು ಸೈನಿಕ ವೃತ್ತಿಯ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಇತರರಲ್ಲಿ ದೇಶಭಕ್ತಿ ಮೂಡಿಸಿದಂತಾಗುತ್ತದೆ ಎಂದು ಹೇಳಿದರು.</p>.<p>ದೇಶದ ರಕ್ಷಣೆಗಾಗಿ ಯುವಕರು ಸೇನೆಗೆ ಸೇರುತ್ತಾರೆ. ಮಳೆ–ಗಾಳಿ ಶೀತವನ್ನು ಲೆಕ್ಕಿಸದೇ ಪ್ರಾಣ ಪಣಕ್ಕಿಟ್ಟು ಪ್ರತಿ ಭಾರತೀಯನು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವ ಯೋಧರು ದೇವರಿಗೆ ಸರಿಸಮಾನರು ಎಂದು ಹೇಳಿದರು.</p>.<p>ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಬರುವ ಸೈನಿಕರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಯುವಕರಿಗೆ ಮಾರ್ಗದರ್ಶನ ಮಾಡಿ, ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.</p>.<p>ವಿವೇಕ ಬ್ರಿಗೇಡ್ನ ವಿನೂತ ಕಲ್ಲೂರ, ಪುರಸಭೆ ಸದಸ್ಯ ರಾಜು ಬೂತನಾಳ, ನಿವೃತ್ತ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಐ.ಬಿರಾದಾರ, ಪತಂಜಲಿ ಯೋಗ ಸಮೀತಿ ತಾಲ್ಲೂಕು ಪ್ರಭಾರಿ ಕಾಶಿನಾಥ ಅವಟಿ, ಬಸವರಾಜ ಹಡಪದ, ನಿವೃತ್ತ ಸೈನಿಕರಾದ ಯಲ್ಲಪ್ಪ ಆರೇರ, ಮೀಟು ಜಾಧವ ಮಾತನಾಡಿದರು.</p>.<p>ರೈತ ಮುಖಂಡ ಅರವಿಂದ ಕುಲಕರ್ಣಿ, ಡಿಎಸ್ಎಸ್ ಮುಖಂಡ ಸುರೇಶ ಮಣ್ಣೂರ, ಅಶೋಕ ಚಲವಾದಿ, ಅಮರಯ್ಯ ಹಿರೇಮಠ ಇದ್ದರು.</p>.<p>ಶಿಕ್ಷಕ ಕೋಟ್ರೆಶಿ ಹೆಗಡ್ಯಾಳ ಸ್ವಾಗತಿಸಿ, ಪ್ರಭಾಕರ ಖೇಡದ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವನಬಾಗೇವಾಡಿ:</strong> ಸೇವಾ ನಿವೃತ್ತಿ ಹೊಂದಿದ ಬಳಿಗ ಪಟ್ಟಣಕ್ಕೆ ಬಂದ ಸೈನಿಕರಾದ ಮೀಟು ಜಾಧವ್ ಹಾಗೂ ಯಲ್ಲಪ್ಪ ಆರೇರ ಅವರಿಗೆ ಸೋಮವಾರ ಅದ್ಧೂರಿ ಸ್ವಾಗತ ನೀಡಲಾಯಿತು.</p>.<p>ವಿವೇಕ ಬ್ರಿಗೇಡ್ ಸಂಘಟನೆಯ ನೇತೃತ್ವದಲ್ಲಿ ನಿವೃತ್ತ ಸೈನಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡು ಮೆರವಣಿಗೆ ಮಾಡಲಾಯಿತು.</p>.<p>ನಂತರ ವಿರಕ್ತಮಠದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಡಿವೈಎಸ್ಪಿ ಶಾಂತವೀರ, ನಿವೃತ್ತಿ ನಂತರ ಸ್ವಗ್ರಾಮಕ್ಕೆ ಬರುವ ಸೈನಿಕರನ್ನು ಸನ್ಮಾನಿಸುವುರೊಂದಿಗೆ ಅವರು ಸೈನಿಕ ವೃತ್ತಿಯ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಇತರರಲ್ಲಿ ದೇಶಭಕ್ತಿ ಮೂಡಿಸಿದಂತಾಗುತ್ತದೆ ಎಂದು ಹೇಳಿದರು.</p>.<p>ದೇಶದ ರಕ್ಷಣೆಗಾಗಿ ಯುವಕರು ಸೇನೆಗೆ ಸೇರುತ್ತಾರೆ. ಮಳೆ–ಗಾಳಿ ಶೀತವನ್ನು ಲೆಕ್ಕಿಸದೇ ಪ್ರಾಣ ಪಣಕ್ಕಿಟ್ಟು ಪ್ರತಿ ಭಾರತೀಯನು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವ ಯೋಧರು ದೇವರಿಗೆ ಸರಿಸಮಾನರು ಎಂದು ಹೇಳಿದರು.</p>.<p>ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಬರುವ ಸೈನಿಕರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಯುವಕರಿಗೆ ಮಾರ್ಗದರ್ಶನ ಮಾಡಿ, ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.</p>.<p>ವಿವೇಕ ಬ್ರಿಗೇಡ್ನ ವಿನೂತ ಕಲ್ಲೂರ, ಪುರಸಭೆ ಸದಸ್ಯ ರಾಜು ಬೂತನಾಳ, ನಿವೃತ್ತ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಐ.ಬಿರಾದಾರ, ಪತಂಜಲಿ ಯೋಗ ಸಮೀತಿ ತಾಲ್ಲೂಕು ಪ್ರಭಾರಿ ಕಾಶಿನಾಥ ಅವಟಿ, ಬಸವರಾಜ ಹಡಪದ, ನಿವೃತ್ತ ಸೈನಿಕರಾದ ಯಲ್ಲಪ್ಪ ಆರೇರ, ಮೀಟು ಜಾಧವ ಮಾತನಾಡಿದರು.</p>.<p>ರೈತ ಮುಖಂಡ ಅರವಿಂದ ಕುಲಕರ್ಣಿ, ಡಿಎಸ್ಎಸ್ ಮುಖಂಡ ಸುರೇಶ ಮಣ್ಣೂರ, ಅಶೋಕ ಚಲವಾದಿ, ಅಮರಯ್ಯ ಹಿರೇಮಠ ಇದ್ದರು.</p>.<p>ಶಿಕ್ಷಕ ಕೋಟ್ರೆಶಿ ಹೆಗಡ್ಯಾಳ ಸ್ವಾಗತಿಸಿ, ಪ್ರಭಾಕರ ಖೇಡದ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>