ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಯುವ ಮೋರ್ಚಾದಿಂದ ಶ್ರಮದಾನ

Last Updated 2 ಅಕ್ಟೋಬರ್ 2020, 12:03 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ಯುವ ಮೋರ್ಚಾ ಕಾರ್ಯಕರ್ತರು ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಉದಾತ್ತ ವಿಚಾರ, ಸರಳತೆ, ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ್ ಹೂಗಾರ ಹೇಳಿದರು.

ಪಟ್ಟಣದ ಪರದೇಶಿಮಠದ ಆವೋಗೇಶ್ವರ ತಪೋಧಾಮದಲ್ಲಿ ಶುಕ್ರವಾರ ಜರುಗಿದ ಗಾಂಧಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಹಾಗೂ ಸ್ವಚ್ಛ ಭಾರತ ಅಭಿಯಾನದಲ್ಲಿ ಅವರು ಮಾತನಾಡಿದರು.

ದೇವರಹಿಪ್ಪರಗಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ರಮೇಶ ಮಸಬಿನಾಳ, ಮಹಾಂತೇಶ ವಂದಾಲ, ಸದಾನಂದ ಅಂಗಡಿ ಮಾತನಾಡಿದರು. ಮಠದ ಶಿವಯೋಗಿ ದೇವರು ಆಶೀರ್ವಚನ ನೀಡಿದರು. ನಂತರ ಕಾರ್ಯಕರ್ತರು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಮಠದ ಆವರಣವನ್ನು ಸ್ವಚ್ಛಗೊಳಿಸಿ, ಸಸಿ ನೆಟ್ಟರು.

ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ರಾಜು ಮೆಟಗಾರ, ದಿನೇಶ ಪಾಟೀಲ, ಭೀಮನಗೌಡ ಲಚ್ಯಾಣ, ಪವನ ಗುಂದಗಿ, ರಾವುತ ಅಗಸರ, ಸಲಬಯ್ಯ ಸದಯ್ಯನಮಠ, ದಯಾನಂದ ಬಂಥನಾಳ, ರಮೇಶ ರೆಡ್ಡಿ, ಶಿವಾನಂದ ದಳವಾಯಿ, ಕಿರಣ ಪಾಟೀಲ, ನೀಲಕಂಠ ಕರಭಂಟನಾಳ, ಪಿಂಟೂ ಬಾಸುತ್ಕರ್, ಶ್ರೀಕಾಂತ ಭಜಂತ್ರಿ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT