ತಂಡದ ಸದಸ್ಯರಾದ ವಿಜಯಪುರದ ರಾಜಶೇಖರ ಮುತ್ತಿನಪೆಂಡಿಮಠ, ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಮತ್ತು ಮಹಾರಾಷ್ಟ್ರದ ಹಿಮಾಂಶು ಸಾಬಳೆ ಅವರು ‘ಜೈ ಶ್ರೀರಾಮ್’ ಎಂದು ಬರೆದಿರುವ ಹಾಗೂ ಅಯೋಧ್ಯೆಯ ನೂತನ ಶ್ರೀರಾಮ ಮಂದಿರದ ಚಿತ್ರ ಇರುವ ಬ್ಯಾನರ್ ಕೈಯಲ್ಲಿ ಹಿಡಿದು 13 ಸಾವಿರ ಅಡಿ ಎತ್ತರದಿಂದ ಸುರಕ್ಷಿತವಾಗಿ ಸ್ಕೈ ಡೈವಿಂಗ್ ಮಾಡಿದರು.