<p><strong>ಕೊಲ್ಹಾರ</strong>: ಸ್ಪಿಕ್ ಲಿಮಿಟೆಡ್ ಹಾಗೂ ಬೆಳ್ಳುಬ್ಬಿ ಎಂಟರ್ ಪ್ರೈಸಸ್ ಹಿರೇಗರಸಂಗಿ ಸಹಯೋಗದಲ್ಲಿ ಪಟ್ಟಣದಲ್ಲಿ ತಾಲ್ಲೂಕಿನ ರೈತರಿಗಾಗಿ ರೈತರ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.</p>.<p>ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಮಲ್ಲನಗೌಡ ಪಾಟೀಲ ಮಾತನಾಡಿ, ‘ಇಂದಿನ ರೈತರು ಹೆಚ್ಚು ಇಳುವರಿ ಪಡೆಯಲು ಹೆಚ್ಚು ಯುರಿಯಾ ಗೊಬ್ಬರ ಬಳಸಿ ಭೂಮಿ ಬರಡಾಗಲು ಕಾರಣವಾಗಿದ್ದಾರೆ. ಈ ತರಬೇತಿಯಿಂದ ರೈತರು ಮಣ್ಣಿನ ಪರೀಕ್ಷೆ ಮಾಡಿ ಅವಶ್ಯಕತೆ ಇರುವ ಪೋಷಕಾಂಶ ನೀಡಲು ನೈತಿಕ ಬಲ ಬರಲು ಸಹಕಾರಿಯಾಗಿದೆ’ ಎಂದು ಹೇಳಿದರು.</p>.<p>ಕೆ.ಯು.ಗಿಡ್ಡಪ್ಪಗೋಳ ಮಾತನಾಡಿ, ‘ಸಣ್ಣ ಹಿಡುವಳಿ ರೈತರು ಈ ತರಬೇತಿಯಿಂದ ತಾವು ಹೆಚ್ಚು ಇಳುವರಿ ಪಡೆಯುವ ವಿವಿಧ ವಿಧಾನಗಳನ್ನು ಅನುಸರಿಸಲು ಸಹಕಾರಿಯಾಗಿದೆ’ ಎಂದು ತಿಳಿಸಿದರು.</p>.<p>ಹಿರಿಯ ಮಾರಾಟ ಅಧಿಕಾರಿಗಳಾದ ಬಸವರಾಜ ಕೋಳೂರ ಮತ್ತು ಲೋಹಿತ ರಾಠೋಡ ಅವರು ರೈತರಿಗೆ ಮಣ್ಣಿನ ಸಂರಕ್ಷಣೆ ಹಾಗೂ ಹೆಚ್ಚು ಇಳುವರಿ ಪಡೆಯುವ ವಿಧಾನಗಳ ಬಗ್ಗೆ ತರಬೇತಿ ನೀಡಿದರು.</p>.<p>ಹಣಮಂತ ಬೆಳ್ಳುಬ್ಬಿ, ಅರ್ಜುನ್ ಸುಣಗಾರ, ರಮೇಶ ಬಾಲಗೊಂಡ, ಮುರಿಗೆಪ್ಪ ಬೆಳ್ಳುಬ್ಬಿ ಹಾಗೂ ಬೆಳ್ಳುಬ್ಬಿ ಎಂಟರ್ ಪ್ರೈಸಸ್ ಮಾಲೀಕರಾದ ರಾಚಣ್ಣ ಬೆಳ್ಳುಬ್ಬಿ ಮತ್ತು ತಾಲ್ಲೂಕಿನ ನೂರಾರು ರೈತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲ್ಹಾರ</strong>: ಸ್ಪಿಕ್ ಲಿಮಿಟೆಡ್ ಹಾಗೂ ಬೆಳ್ಳುಬ್ಬಿ ಎಂಟರ್ ಪ್ರೈಸಸ್ ಹಿರೇಗರಸಂಗಿ ಸಹಯೋಗದಲ್ಲಿ ಪಟ್ಟಣದಲ್ಲಿ ತಾಲ್ಲೂಕಿನ ರೈತರಿಗಾಗಿ ರೈತರ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.</p>.<p>ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಮಲ್ಲನಗೌಡ ಪಾಟೀಲ ಮಾತನಾಡಿ, ‘ಇಂದಿನ ರೈತರು ಹೆಚ್ಚು ಇಳುವರಿ ಪಡೆಯಲು ಹೆಚ್ಚು ಯುರಿಯಾ ಗೊಬ್ಬರ ಬಳಸಿ ಭೂಮಿ ಬರಡಾಗಲು ಕಾರಣವಾಗಿದ್ದಾರೆ. ಈ ತರಬೇತಿಯಿಂದ ರೈತರು ಮಣ್ಣಿನ ಪರೀಕ್ಷೆ ಮಾಡಿ ಅವಶ್ಯಕತೆ ಇರುವ ಪೋಷಕಾಂಶ ನೀಡಲು ನೈತಿಕ ಬಲ ಬರಲು ಸಹಕಾರಿಯಾಗಿದೆ’ ಎಂದು ಹೇಳಿದರು.</p>.<p>ಕೆ.ಯು.ಗಿಡ್ಡಪ್ಪಗೋಳ ಮಾತನಾಡಿ, ‘ಸಣ್ಣ ಹಿಡುವಳಿ ರೈತರು ಈ ತರಬೇತಿಯಿಂದ ತಾವು ಹೆಚ್ಚು ಇಳುವರಿ ಪಡೆಯುವ ವಿವಿಧ ವಿಧಾನಗಳನ್ನು ಅನುಸರಿಸಲು ಸಹಕಾರಿಯಾಗಿದೆ’ ಎಂದು ತಿಳಿಸಿದರು.</p>.<p>ಹಿರಿಯ ಮಾರಾಟ ಅಧಿಕಾರಿಗಳಾದ ಬಸವರಾಜ ಕೋಳೂರ ಮತ್ತು ಲೋಹಿತ ರಾಠೋಡ ಅವರು ರೈತರಿಗೆ ಮಣ್ಣಿನ ಸಂರಕ್ಷಣೆ ಹಾಗೂ ಹೆಚ್ಚು ಇಳುವರಿ ಪಡೆಯುವ ವಿಧಾನಗಳ ಬಗ್ಗೆ ತರಬೇತಿ ನೀಡಿದರು.</p>.<p>ಹಣಮಂತ ಬೆಳ್ಳುಬ್ಬಿ, ಅರ್ಜುನ್ ಸುಣಗಾರ, ರಮೇಶ ಬಾಲಗೊಂಡ, ಮುರಿಗೆಪ್ಪ ಬೆಳ್ಳುಬ್ಬಿ ಹಾಗೂ ಬೆಳ್ಳುಬ್ಬಿ ಎಂಟರ್ ಪ್ರೈಸಸ್ ಮಾಲೀಕರಾದ ರಾಚಣ್ಣ ಬೆಳ್ಳುಬ್ಬಿ ಮತ್ತು ತಾಲ್ಲೂಕಿನ ನೂರಾರು ರೈತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>