<p><strong>ತಾಳಿಕೋಟೆ:</strong> ‘ಸ್ವಾಮಿ ವಿವೇಕಾನಂದ ಅವರು ಭಾರತೀಯ ಸಂಸ್ಕೃತಿ, ಆತ್ಮಗೌರವ ಮತ್ತು ಚೇತನವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಯೋಗಿ’ ಎಂದು ಪ್ರಾಚಾರ್ಯ ಆರ್.ಎಂ. ಬಂಟನೂರ್ ಹೇಳಿದರು.</p>.<p>ಪಟ್ಟಣದ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>‘ಪರೀಕ್ಷೆಯಲ್ಲಿ ಪಡೆಯುವ ಅಂಕ ಮತ್ತು ಪದವಿಗಳಷ್ಟೇ ಶಿಕ್ಷಣವಲ್ಲ. ಮೌಲ್ಯ, ಶಿಸ್ತು, ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯೇ ನಿಜವಾದ ಶಿಕ್ಷಣ. ತಾಯಿ, ಮಾತೃಭೂಮಿ ಮತ್ತು ರಾಷ್ಟ್ರದ ಗೌರವವೇ ಜೀವನದ ಮೂಲ ತತ್ವವಾಗಬೇಕು’ ಎಂದರು.</p>.<p>ಐಕ್ಯುಎಸಿ ಸಂಯೋಜಕ ಉಮೇಶ ಮಂಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಗಂಗನಗೌಡರ, ಮನೋಹರ್ ಪೋತದಾರ, ಮಧು ನಾಡಗೌಡ, ಬಸವರಾಜ, ಅನ್ನಪೂರ್ಣೇಶ್ವರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾಳಿಕೋಟೆ:</strong> ‘ಸ್ವಾಮಿ ವಿವೇಕಾನಂದ ಅವರು ಭಾರತೀಯ ಸಂಸ್ಕೃತಿ, ಆತ್ಮಗೌರವ ಮತ್ತು ಚೇತನವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಯೋಗಿ’ ಎಂದು ಪ್ರಾಚಾರ್ಯ ಆರ್.ಎಂ. ಬಂಟನೂರ್ ಹೇಳಿದರು.</p>.<p>ಪಟ್ಟಣದ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>‘ಪರೀಕ್ಷೆಯಲ್ಲಿ ಪಡೆಯುವ ಅಂಕ ಮತ್ತು ಪದವಿಗಳಷ್ಟೇ ಶಿಕ್ಷಣವಲ್ಲ. ಮೌಲ್ಯ, ಶಿಸ್ತು, ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯೇ ನಿಜವಾದ ಶಿಕ್ಷಣ. ತಾಯಿ, ಮಾತೃಭೂಮಿ ಮತ್ತು ರಾಷ್ಟ್ರದ ಗೌರವವೇ ಜೀವನದ ಮೂಲ ತತ್ವವಾಗಬೇಕು’ ಎಂದರು.</p>.<p>ಐಕ್ಯುಎಸಿ ಸಂಯೋಜಕ ಉಮೇಶ ಮಂಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಗಂಗನಗೌಡರ, ಮನೋಹರ್ ಪೋತದಾರ, ಮಧು ನಾಡಗೌಡ, ಬಸವರಾಜ, ಅನ್ನಪೂರ್ಣೇಶ್ವರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>