ಜಿಲ್ಲೆಯ 2,67,720 ಫಲಾನುಭವಿಗಳ ಪೈಕಿ 2,50,063 ರೈತರಿಗೆ ₹413.48 ಕೋಟಿ ಬೆಳೆ ಪರಿಹಾರ ಧನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. 3,278 ವಿವಿಧ ಪ್ರಕರಣಗಳು ಬಾಕಿ ಉಳಿದಿದ್ದು, ಮೇ 22 ರಂದು 1329 ಫಲಾನುಭವಿಗಳ ಪಟ್ಟಿಯನ್ನು ಅನುಮೋದಿಸಿ ಸಲ್ಲಿಸಲಾಗಿದೆ. ಜಿಲ್ಲೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಪರಿಹಾರ ಧನ ಬೆಳೆ ಹಾನಿ ಜಮಾ ಆಗಿದೆ ಎಂದು ತಿಳಿಸಿದರು.