ಕೆಲವು ಜನರು ದೇವರ ದರ್ಶನಕ್ಕೆ ಹೋಗುತ್ತೇವೆಂದು ತೀರ್ಥಕ್ಷೇತ್ರಗಳನ್ನು ಸುತ್ತಿ ಸುತ್ತಿ ಬರುವರು. ಗಂಗಾ ಯಮುನಾ, ಸಿಂಧೂ, ತುಂಗಾ ಮುಂತಾದ ನೀರಿನಲ್ಲಿ ಮಿಂದು ಪಾಪ ನಿವಾರಣೆ ಮಾಡಿಕೊಳ್ಳುತ್ತೇವೆಂದು ಭಾವಿಸಿ ನದಿ, ಸರೋವರಗಳಲ್ಲಿ ಮುಳಗಿ ಬರುವರು. ಮತ್ತೆ ಕೆಲವರು ವನಗಳನ್ನು ಸೇರುವರು. ಗಿರಿಗಳ ತುತ್ತತುದಿ ಏರಿ ಅಲ್ಲಿ ನಿಂತು ಪ್ರಾರ್ಥಿಸುವರು. ತಪ್ಪಸು ಮಾಡುವರು, ಮತ್ತೆ ಕೆಲವರು ಉಪವಾಸ ವ್ರತ ಮಾಡಿ ತನುವನ್ನು ಸ್ವಯಂ ಕಷ್ಟಕ್ಕೆ ಒಳಪಡಿಸಿ ನಿತ್ಯ ನೇಮಗಳ ಮೂಲಕ ಸುಟ್ಟುಕೊಳ್ಳುವರು.