ವಿಜಯಪುರ: ಹವಾಮಾನ ವೈಫರಿತ್ಯದ ಪರಿಣಾಮ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಶನಿವಾರ ದಿನಪೂರ್ತಿ ಸುರಿದ ತುಂತುರು ಮಳೆ ಹಾಗೂ ಮರಗಟ್ಟುವ ಚಳಿಗೆ ಜನ ಬೆಚ್ಚಿ ಬಿದ್ದಿದ್ದಾರೆ.
ಆಗಸದಲ್ಲಿ ದಟ್ಟೈಸಿದ ಕರಿಮೋಡಗಳುದಿನಪೂರ್ತಿ ಸೂರ್ಯನ ದರ್ಶನಕ್ಕೆ ಅವಕಾಶ ನೀಡಲಿಲ್ಲ.ಶೀತ ಗಾಳಿ ಬೀಸುತ್ತಿದ್ದು, ಮೈನಡುಗಿಸುತ್ತಿದೆ. ಬಿಸಿಲ ನಾಡಲ್ಲಿ ತಂಪಾದ ವಾತಾವರಣವು ಜನರನ್ನು ಮನೆಯಲ್ಲೇ ದಿನಪೂರ್ತಿ ಕೂಡಿಹಾಕಿತ್ತು.
ಇಳಿಯನ್ನು ತಬ್ಬಿದ್ದ ದಟ್ಟ ಮಂಜು, ಮೋಡದ ನಡುವೆ ವಾಹನ ಸವಾರರು ದೀಪ ಬೆಳಗಿಸಿಕೊಂಡು ಚಲಿಸುತ್ತಿದ್ದ ದೃಶ್ಯ ಕಂಡುಬಂದಿತು.