ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಟ್ಟುವೆ ಚಳಿಗೆ ಬೆಚ್ಚಿದ ವಿಜಯಪುರ

ದಿನವಿಡೀ ಶೀತಗಾಳಿ, ತುಂತುರು ಮಳೆ
Last Updated 28 ನವೆಂಬರ್ 2020, 12:47 IST
ಅಕ್ಷರ ಗಾತ್ರ

ವಿಜಯಪುರ: ಹವಾಮಾನ ವೈಫರಿತ್ಯದ ಪರಿಣಾಮ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಶನಿವಾರ ದಿನಪೂರ್ತಿ ಸುರಿದ ತುಂತುರು ಮಳೆ ಹಾಗೂ ಮರಗಟ್ಟುವ ಚಳಿಗೆ ಜನ ಬೆಚ್ಚಿ ಬಿದ್ದಿದ್ದಾರೆ.

ಆಗಸದಲ್ಲಿ ದಟ್ಟೈಸಿದ ಕರಿಮೋಡಗಳುದಿನಪೂರ್ತಿ ಸೂರ್ಯನ ದರ್ಶನಕ್ಕೆ ಅವಕಾಶ ನೀಡಲಿಲ್ಲ.ಶೀತ ಗಾಳಿ ಬೀಸುತ್ತಿದ್ದು, ಮೈನಡುಗಿಸುತ್ತಿದೆ. ಬಿಸಿಲ ನಾಡಲ್ಲಿ ತಂಪಾದ ವಾತಾವರಣವು ಜನರನ್ನು ಮನೆಯಲ್ಲೇ ದಿನಪೂರ್ತಿ ಕೂಡಿಹಾಕಿತ್ತು.

ಇಳಿಯನ್ನು ತಬ್ಬಿದ್ದ ದಟ್ಟ ಮಂಜು, ಮೋಡದ ನಡುವೆ ವಾಹನ ಸವಾರರು ದೀಪ ಬೆಳಗಿಸಿಕೊಂಡು ಚಲಿಸುತ್ತಿದ್ದ ದೃಶ್ಯ ಕಂಡುಬಂದಿತು.

ವಿವಿಧೆಡೆ ಮಳೆ:

ಬಸವನ ಬಾಗೇವಾಡಿಯಲ್ಲಿ 4.2 ಮಿ.ಮೀ.ಮಳೆಯಾಗಿದೆ. ಉಳಿದಂತೆಆಲಮಟ್ಟಿ 5,
ಅರೇಶಂಕರ 4.2, ವಿಜಯಪುರ 2.2, ಹಿಟ್ನಳ್ಳಿ 2.2, ಮಮದಾಪೂರ 4.2, ಇಂಡಿ 1, ನಾದ ಬಿ. ಕೆ. 2, ಮುದ್ದೆಬಿಹಾಳ 5.5, ನಾಲತವಾಡ 2.4, ಢವಳಗಿ 6, ಸಿಂದಗಿ 3, ಆಲಮೇಲ 2, ಸಾಸಾಬಾಳ 1.5, ರಾಮನಹಳ್ಳಿ 2.6 ಮಿ.ಮೀ.ಮಳೆಯಾದ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT