ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ಇಣಚಗಲ್ಲ ಗ್ರಾಮದ ಹುಲಗಪ್ಪ ಯಲ್ಲಪ್ಪ ಮಾದರ (38) ಭಾನುವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಇಣಚಗಲ್ಲ ಮತ್ತು ಜಕ್ಕೆರಾಳ ಗ್ರಾಮಗಳ ನಡುವೆ ಇರುವ ಜಮೀನಿನಲ್ಲಿ ಹೊಲ ಉಳುವಾಗ ಮಳೆ ಬಂದ ಕಾರಣ ಮರದ ಅಡಿ ನಿಂತಿದ್ದಾಗ ಸಿಡಿಲು ಬಡಿದಿದೆ. ಜೊತೆಗಿದ್ದ ಎತ್ತುಗಳು ಪ್ರಾಣಾಪಾಯದಿಂದ ಪಾರಾಗಿವೆ.
ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಸಾಧಾಕರಣ ಮಳೆಯಾಗಿದೆ.