ವಿಜಯಪುರ: ಕನ್ನಡ ಪರ ಸಂಘಟನೆಗಳನ್ನು ರೋಲ್ ಕಾಲ್ ಸಂಘಟನೆಗಳು ಎಂದು ಟೀಕಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಖಂಡಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಯತ್ನಾಳ ಕಚೇರಿ ಎದುರು ಅವರ ಪ್ರತಿಕೃತಿ ದಹಿಸಿ, ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮರಾಠಾ ಸಮುದಾಯವನ್ನು ಓಲೈಸುವ ಉದ್ದೇಶದಿಂದ ಪ್ರಾಧಿಕಾರ ರಚಿಸಿರುವ ಬಿಜೆಪಿ ಸರ್ಕಾರದ ಕ್ರಮ ಖಂಡನೀಯ ಎಂದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮುಲ್ಲಾ, ಮಹಾದೇವ ರಾವ್ ಜಿ, ಪ್ರಕಾಶ ಕುಂಬಾರ, ಫಯಾಜ್ ಕಲಾದಗಿ, ಅಶೋಕ ಹರಿವಾಳ, ಶ್ರೀಕಾಂತ ಬಿಜಾಪುರ, ಶಿವಾನಂದ ದುದಗಿ, ಬಸವರಾಜ ಬಿ.ಕೆ. , ದಸ್ತಗೀರ ಸಾಲೊಟಗಿ ಇದ್ದರು.