ರೈತ ಈರಪ್ಪ ಆರು ಎಕರೆ ಜಮೀನು ಹೊಂದಿದ್ದು, ನೀರಿಲ್ಲದೆ ಯಾವದೇ ಬೇಳೆಯನ್ನು ಮಾಡಿರಲಿಲ್ಲ. ಶುಕ್ರವಾರ ಜಮೀನಿನಲ್ಲಿ ಕೊಳವೆಬಾವಿ ಕೊರೆಸುವಾಗ ಸುಮಾರು 120 ಅಡಿಗೆ ಸಣ್ಣ ಪ್ರಮಾಣದ ನೀರು ಲಭಿಸಿತು, 300 ಅಡಿಗೆ 1.5 ಇಂಚ್ ನೀರು, 425 ಅಡಿಗೆ 3 ಇಂಚ್ ನೀರು, 600 ಅಡಿಗೆ 4 ಇಂಚಿಗೂ ಹೆಚ್ಚು ನೀರು ಲಭಿಸಿತ್ತು. ನಂತರ ಕಾರಂಜಿಯಂತೆ ನೆಲದಿಂದ ನೀರು ಆಕಾಶದೆತ್ತರಕ್ಕೆ ಚಿಮ್ಮಿ ರೈತನಲ್ಲಿ ಮಂದಹಾಸ ಮೂಡಿಸಿದೆ.