<p><span style="font-size: 26px;"><strong>ಸಿಂದಗಿ</strong>: ತಮ್ಮ ನಾಯಕ ಶಾಸಕನಾದರೆ ಬೆಂಬಲಿಗರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸುವುದು ಸಾಮಾನ್ಯ. ಆದರೆ, ಸಿಂದಗಿ ಕ್ಷೇತ್ರದ (ಬಿಜೆಪಿ) ಶಾಸಕ ರಮೇಶ ಭೂಸನೂರ ಸ್ವತಃ ಹರಕೆ ಪೂರೈಸಿದ ಅಪರೂಪದ ಘಟನೆ ನಡೆದಿದೆ.</span><br /> <br /> ಶಾಸಕ ರಮೇಶ ಭೂಸನೂರ ತಮ್ಮ ಸ್ವಗ್ರಾಮ ದೇವಣಗಾಂವದಲ್ಲಿ ಭಾನುವಾರ ನಡೆದ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ತಮ್ಮ ಮನೆಯಿಂದ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿದರು. ಈ ಜಾತ್ರೆ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ.<br /> ತಾವು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಲು ಅವರು ಈ ಹರಕೆ ಹೊತ್ತಿದ್ದರು ಎನ್ನಲಾಗಿದೆ.<br /> <br /> `ದೇವಣಗಾಂವ ಗ್ರಾಮದ ಲಕ್ಷ್ಮಿದೇವಿ ಬೇಡಿದವರ ಇಷ್ಟಾರ್ಥ ಈಡೇರಿಸುವ ಶಕ್ತಿದೇವತೆ' ಎಂಬುದು ಗ್ರಾಮಸ್ಥರ ನಂಬಕೆ. ಹೀಗಾಗಿ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಇದೇ ಹರಕೆ ತೀರಿಸಿದರು.<br /> <br /> `ಶಾಸಕರು ಸಹ ಅದೇ ದಿನ ನಸುಕಿನ ಜಾವದಲ್ಲಿ ಯಾರಿಗೂ ಗೊತ್ತಾಗದಂತೆ ತಮ್ಮ ಕುಟುಂಬದ ಕೆಲವೇ ಸದಸ್ಯರೊಂದಿಗೆ ಈ ಹರಕೆ ತೀರಿಸಿದ್ದಾರೆ' ಎಂದು ಅವರ ಬೆಂಬಲಿಗರೊಬ್ಬರು ತಿಳಿಸಿದ್ದಾರೆ.<br /> <br /> ದೇವರು, ಜ್ಯೋತಿಷದಲ್ಲಿ ಅಪಾರ ನಂಬಿಕೆ ಹೊಂದಿರುವ ಶಾಸಕ ಭೂಸನೂರ, `ಸಿಂದಗಿ ಮತಕ್ಷೇತ್ರದ ವಾಸ್ತು ಸರಿಯಿರಲಿಲ್ಲ. ಹೀಗಾಗಿ ಒಮ್ಮೆ ಆಯ್ಕೆಯಾದ ಶಾಸಕ ಮತ್ತೆ ಆಯ್ಕೆಯಾಗುತ್ತಿರಲಿಲ್ಲ. ಆದರೆ, ಈ ಸಲ ವಾಸ್ತುದೋಷ ನಿವಾರಣೆ ಮಾಡಿದ್ದೇನೆ. ಹೀಗಾಗಿ ಎರಡನೇ ಬಾರಿಗೆ ಆಯ್ಕೆಯಾದ ಪ್ರಥಮ ಶಾಸಕ ಎಂಬ ದಾಖಲೆ ನಿರ್ಮಿಸುವೆ' ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಸಿಂದಗಿ</strong>: ತಮ್ಮ ನಾಯಕ ಶಾಸಕನಾದರೆ ಬೆಂಬಲಿಗರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸುವುದು ಸಾಮಾನ್ಯ. ಆದರೆ, ಸಿಂದಗಿ ಕ್ಷೇತ್ರದ (ಬಿಜೆಪಿ) ಶಾಸಕ ರಮೇಶ ಭೂಸನೂರ ಸ್ವತಃ ಹರಕೆ ಪೂರೈಸಿದ ಅಪರೂಪದ ಘಟನೆ ನಡೆದಿದೆ.</span><br /> <br /> ಶಾಸಕ ರಮೇಶ ಭೂಸನೂರ ತಮ್ಮ ಸ್ವಗ್ರಾಮ ದೇವಣಗಾಂವದಲ್ಲಿ ಭಾನುವಾರ ನಡೆದ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ತಮ್ಮ ಮನೆಯಿಂದ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿದರು. ಈ ಜಾತ್ರೆ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ.<br /> ತಾವು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಲು ಅವರು ಈ ಹರಕೆ ಹೊತ್ತಿದ್ದರು ಎನ್ನಲಾಗಿದೆ.<br /> <br /> `ದೇವಣಗಾಂವ ಗ್ರಾಮದ ಲಕ್ಷ್ಮಿದೇವಿ ಬೇಡಿದವರ ಇಷ್ಟಾರ್ಥ ಈಡೇರಿಸುವ ಶಕ್ತಿದೇವತೆ' ಎಂಬುದು ಗ್ರಾಮಸ್ಥರ ನಂಬಕೆ. ಹೀಗಾಗಿ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಇದೇ ಹರಕೆ ತೀರಿಸಿದರು.<br /> <br /> `ಶಾಸಕರು ಸಹ ಅದೇ ದಿನ ನಸುಕಿನ ಜಾವದಲ್ಲಿ ಯಾರಿಗೂ ಗೊತ್ತಾಗದಂತೆ ತಮ್ಮ ಕುಟುಂಬದ ಕೆಲವೇ ಸದಸ್ಯರೊಂದಿಗೆ ಈ ಹರಕೆ ತೀರಿಸಿದ್ದಾರೆ' ಎಂದು ಅವರ ಬೆಂಬಲಿಗರೊಬ್ಬರು ತಿಳಿಸಿದ್ದಾರೆ.<br /> <br /> ದೇವರು, ಜ್ಯೋತಿಷದಲ್ಲಿ ಅಪಾರ ನಂಬಿಕೆ ಹೊಂದಿರುವ ಶಾಸಕ ಭೂಸನೂರ, `ಸಿಂದಗಿ ಮತಕ್ಷೇತ್ರದ ವಾಸ್ತು ಸರಿಯಿರಲಿಲ್ಲ. ಹೀಗಾಗಿ ಒಮ್ಮೆ ಆಯ್ಕೆಯಾದ ಶಾಸಕ ಮತ್ತೆ ಆಯ್ಕೆಯಾಗುತ್ತಿರಲಿಲ್ಲ. ಆದರೆ, ಈ ಸಲ ವಾಸ್ತುದೋಷ ನಿವಾರಣೆ ಮಾಡಿದ್ದೇನೆ. ಹೀಗಾಗಿ ಎರಡನೇ ಬಾರಿಗೆ ಆಯ್ಕೆಯಾದ ಪ್ರಥಮ ಶಾಸಕ ಎಂಬ ದಾಖಲೆ ನಿರ್ಮಿಸುವೆ' ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>