<p><strong>ಆಲಮೇಲ</strong>: ಸಂಗೀತ ಆಲಿಸುವುದರಿಂದ ಮನ್ಯಷನಲ್ಲಿ ಮೃದುತ್ವ ಗುಣಗಳು ಬರುತ್ತವೆ,ಉತ್ತಮ ಸಂಗೀತವನ್ನು ಇಲ್ಲಿನ ಕಲಾವಿದರು ಕಳೆದ ಹತ್ತು ವರ್ಷಗಳಿಂದ ನೀಡುತ್ತಾ ಬಂದಿರುವುದು ಸ್ತುತ್ಯಾರ್ಹ ಮತ್ತು ಆದರಣೀಯವಾಗಿದೆ ಎಂದು ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಹೇಳಿದರು.<br /> <br /> ಅವರು ಇಲ್ಲಿನ ಮೂರುಜಾವಧೀಶ್ವರ ಮಠದಲ್ಲಿ ಭಾನುವಾರ ನಡೆದ ಭಕ್ತಿ ವಂದನಾ ದಶಮಾನೋತ್ವವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದರು.<br /> <br /> ವಿಶ್ವ ಕರ್ಮರು ಜಗತ್ತಿನ ನವ ನಿರ್ಮಾಣ ಮಾಡಿದರು. ಅವರನ್ನು ಶಿಲ್ಪಿಗಳು ಎನ್ನಲಾಗುತ್ತದೆ. ಅವರಿಲ್ಲದ ಸಂಸ್ಕ್ರತಿ ಇಲ್ಲ,ಇಲ್ಲಿನ ಈ ಮಠದಲ್ಲಿ ವಿಶ್ವಕರ್ಮದ ಶ್ರೀಗಳು ಉತ್ತಮ ಸೇವೆ ನೀಡಿದ್ದರಿಂದ ಇಲ್ಲಿ 10 ವರ್ಷಗಳ ಕಾಲ ಸಂಗೀತ ಸೇವೆ ನಿರಂತರವಾಗಿ ಪೋಷಿಸಿಕೊಂಡು ಬಂದಿದ್ದಾರೆ. ಅದನ್ನು ಮೆಚ್ಚುತಕ್ಕಂತಹದ್ದು ಎಂದರು.<br /> <br /> ಸಮಾಜದ ಎಲ್ಲ ಒಳಪಂಗಡಗಳು ಭೇದ ಮರೆತು ಒಗ್ಗಟ್ಟಿನಿಂದ ಸಂಘಟನೆಗೆ ಮುಂದಾಗಬೇಕಾಗಿದೆ. ಒಗ್ಗಟ್ಟಿನಿಂದ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಿ, ಶೈಕ್ಷಣಿಕವಾಗಿ ಉನ್ನತಿ ಸಾಧಿಸಿದರೆ ರಾಜಕೀಯ ಮತ್ತು ಸಾಮಾಜಿಕ ಬಲ ಸಿಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.<br /> <br /> ಪ್ರಾಸ್ತಾವಿಕವಾಗಿ ಮಾತನಾಡಿದ ಗಂಗಾಧರ ಪತ್ತಾರ ವಿಶ್ವಕರ್ಮ ಜನಾಂಗ ಇಂದು ಸಣ್ಣ ಪ್ರಮಾಣ ದಲ್ಲಿದ್ದರೂ ಅವರು ಸಮಾಜಕ್ಕೆ ಕೊಟ್ಟ ಸೇವೆ ಅನನ್ಯ, ಆದರೆ ಇಂದು ಅವರನ್ನು ಸರಿಯಾದ ರೀತಿಯಲ್ಲಿ ಅವಕಾಶ ಕೊಡುವಲ್ಲಿ ಸರಕಾರ ಹಿಂದೆ ಬಿದ್ದಿದೆ. ಈ ಜನಾಂಗದ ಅಭಿವೃದ್ಧಿಗೆ ರಾಜಕೀಯ ಇಚ್ಚಾಶಕ್ತಿಯ ಕೊರತೆ ಇದೆ. <br /> <br /> ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಕೊಡುವ ಕೆಲಸವನ್ನು ತಾಯಂದಿರು ಮಾಡಬೇಕಾಗಿದೆ ಎಂದರು.<br /> ಶ್ರೀಶೈಲ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದ ಮೋನಪ್ಪ ಬಡಿಗೇರ ಅವರನ್ನು ಸನ್ಮಾನ ನೀಡಲಾಯಿತು.<br /> <br /> ವೇದಿಕೆಯಲ್ಲಿ ಆರ್.ಕೆ. ಕುಲಕರ್ಣಿ, ಲಚ್ಚಪ್ಪ ಪತ್ತಾರ, ಶ್ರೀಧರಾಚ್ಯಾರರು ಮೊದಲಾದವರು ಭಾಗವಹಿಸಿದ್ದರು.<br /> ದುಂಡಮ್ಮ ಬಡಿಗೇರ, ವಿಜಯಲಕ್ಷ್ಮಿ ಸಲಗೊಂಡ ಪ್ರಾರ್ಥನೆ ಗೀತೆ ಹಾಡಿದರು. ರಾಜು ಬಡಿಗೇರ ಸ್ವಾಗತಿಸಿದರು. ಅಶೋಕ ಬಡಿಗೇರ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮೇಲ</strong>: ಸಂಗೀತ ಆಲಿಸುವುದರಿಂದ ಮನ್ಯಷನಲ್ಲಿ ಮೃದುತ್ವ ಗುಣಗಳು ಬರುತ್ತವೆ,ಉತ್ತಮ ಸಂಗೀತವನ್ನು ಇಲ್ಲಿನ ಕಲಾವಿದರು ಕಳೆದ ಹತ್ತು ವರ್ಷಗಳಿಂದ ನೀಡುತ್ತಾ ಬಂದಿರುವುದು ಸ್ತುತ್ಯಾರ್ಹ ಮತ್ತು ಆದರಣೀಯವಾಗಿದೆ ಎಂದು ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಹೇಳಿದರು.<br /> <br /> ಅವರು ಇಲ್ಲಿನ ಮೂರುಜಾವಧೀಶ್ವರ ಮಠದಲ್ಲಿ ಭಾನುವಾರ ನಡೆದ ಭಕ್ತಿ ವಂದನಾ ದಶಮಾನೋತ್ವವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದರು.<br /> <br /> ವಿಶ್ವ ಕರ್ಮರು ಜಗತ್ತಿನ ನವ ನಿರ್ಮಾಣ ಮಾಡಿದರು. ಅವರನ್ನು ಶಿಲ್ಪಿಗಳು ಎನ್ನಲಾಗುತ್ತದೆ. ಅವರಿಲ್ಲದ ಸಂಸ್ಕ್ರತಿ ಇಲ್ಲ,ಇಲ್ಲಿನ ಈ ಮಠದಲ್ಲಿ ವಿಶ್ವಕರ್ಮದ ಶ್ರೀಗಳು ಉತ್ತಮ ಸೇವೆ ನೀಡಿದ್ದರಿಂದ ಇಲ್ಲಿ 10 ವರ್ಷಗಳ ಕಾಲ ಸಂಗೀತ ಸೇವೆ ನಿರಂತರವಾಗಿ ಪೋಷಿಸಿಕೊಂಡು ಬಂದಿದ್ದಾರೆ. ಅದನ್ನು ಮೆಚ್ಚುತಕ್ಕಂತಹದ್ದು ಎಂದರು.<br /> <br /> ಸಮಾಜದ ಎಲ್ಲ ಒಳಪಂಗಡಗಳು ಭೇದ ಮರೆತು ಒಗ್ಗಟ್ಟಿನಿಂದ ಸಂಘಟನೆಗೆ ಮುಂದಾಗಬೇಕಾಗಿದೆ. ಒಗ್ಗಟ್ಟಿನಿಂದ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಿ, ಶೈಕ್ಷಣಿಕವಾಗಿ ಉನ್ನತಿ ಸಾಧಿಸಿದರೆ ರಾಜಕೀಯ ಮತ್ತು ಸಾಮಾಜಿಕ ಬಲ ಸಿಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.<br /> <br /> ಪ್ರಾಸ್ತಾವಿಕವಾಗಿ ಮಾತನಾಡಿದ ಗಂಗಾಧರ ಪತ್ತಾರ ವಿಶ್ವಕರ್ಮ ಜನಾಂಗ ಇಂದು ಸಣ್ಣ ಪ್ರಮಾಣ ದಲ್ಲಿದ್ದರೂ ಅವರು ಸಮಾಜಕ್ಕೆ ಕೊಟ್ಟ ಸೇವೆ ಅನನ್ಯ, ಆದರೆ ಇಂದು ಅವರನ್ನು ಸರಿಯಾದ ರೀತಿಯಲ್ಲಿ ಅವಕಾಶ ಕೊಡುವಲ್ಲಿ ಸರಕಾರ ಹಿಂದೆ ಬಿದ್ದಿದೆ. ಈ ಜನಾಂಗದ ಅಭಿವೃದ್ಧಿಗೆ ರಾಜಕೀಯ ಇಚ್ಚಾಶಕ್ತಿಯ ಕೊರತೆ ಇದೆ. <br /> <br /> ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಕೊಡುವ ಕೆಲಸವನ್ನು ತಾಯಂದಿರು ಮಾಡಬೇಕಾಗಿದೆ ಎಂದರು.<br /> ಶ್ರೀಶೈಲ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದ ಮೋನಪ್ಪ ಬಡಿಗೇರ ಅವರನ್ನು ಸನ್ಮಾನ ನೀಡಲಾಯಿತು.<br /> <br /> ವೇದಿಕೆಯಲ್ಲಿ ಆರ್.ಕೆ. ಕುಲಕರ್ಣಿ, ಲಚ್ಚಪ್ಪ ಪತ್ತಾರ, ಶ್ರೀಧರಾಚ್ಯಾರರು ಮೊದಲಾದವರು ಭಾಗವಹಿಸಿದ್ದರು.<br /> ದುಂಡಮ್ಮ ಬಡಿಗೇರ, ವಿಜಯಲಕ್ಷ್ಮಿ ಸಲಗೊಂಡ ಪ್ರಾರ್ಥನೆ ಗೀತೆ ಹಾಡಿದರು. ರಾಜು ಬಡಿಗೇರ ಸ್ವಾಗತಿಸಿದರು. ಅಶೋಕ ಬಡಿಗೇರ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>