ಬರಗಾಲ ಸಮಯದಲ್ಲಿ ಇಂಚಗೇರಿ, ಶಿರಾಡೋಣ, ರೇವತಗಾಂವ ಗ್ರಾಮಗಳಲ್ಲಿ ತೆರೆಯಲಾದ ಮೇವು ಬ್ಯಾಂಕ್ಗಳಲ್ಲಿ ಪ್ರತಿ ಕೆ.ಜಿಗೆ ₹2ರಂತೆ ಸ್ವೀಕರಿಸಿದ್ದ ಹಣವನ್ನು ಇವರು ಸರ್ಕಾರಕ್ಕೆ ಪಾವತಿಸಿರಲಿಲ್ಲ. ಚಲನ್ಗಳ ನೈಜತೆ ಕುರಿತು ಸಿಂಡಿಕೇಟ್ ಬ್ಯಾಂಕ್ನಲ್ಲಿ ವಿಚಾರಿಸಿದಾಗ ಚಲನ್ಗಳಲ್ಲಿರುವ ಸಹಿ ಮತ್ತು ಮೊಹರು ಬ್ಯಾಂಕಿನದ್ದಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಹಣ ದುರುಪಯೋಗ ಹಾಗೂ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿರುವುದು ಮೆಲ್ನೋಟಕ್ಕೆ ಕಂಡು ಬಂದ ಕಾರಣ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.