ಹಾಸನದಲ್ಲಿ ಆಯೋಜಿಸಿದ್ದ ಆಲೂಗಡ್ಡೆ ಮೇಳದಲ್ಲಿ ವಿವಿಧ ತಳಿಯ ಆಲೂಗಡ್ಡೆ ಹಾಗೂ ಅಂಗಾಂಶ ಕೃಷಿಯ ಸಸಿಗಳನ್ನು ಪ್ರದರ್ಶಿಸಲಾಯಿತು.
ಇದೇ ಮೊದಲ ಬಾರಿಗೆ ಹಾಸನದಲ್ಲಿ ಆಲೂಗಡ್ಡೆ ಮೇಳ ಆಯೋಜಿಸಲಾಗಿದ್ದು, ಜಿಲ್ಲೆಯಲ್ಲಿ ಕನಿಷ್ಠ 20 ಸಾವಿರದಿಂದ 25 ಸಾವಿರ ಹೆಕ್ಟೇರ್ನಲ್ಲಿ ಆಲೂಗಡ್ಡೆಯನ್ನು ಬೆಳೆಯುವಂತೆ ಮಾಡುವುದೇ ಮೇಳದ ಉದ್ದೇಶ.
ಯೋಗೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
ಒಂದು ಕಾಲದಲ್ಲಿ ದೇಶದ ಗಮನ ಸೆಳೆದಿದ್ದ, ಆಲೂಗಡ್ಡೆ ಬೆಳೆಯುವ ಜಿಲ್ಲೆಯಾಗಿದ್ದ ಹಾಸನದಲ್ಲಿ, ಬೆಳೆಯನ್ನು ಸಂರಕ್ಷಿಸಿ, ಉತ್ತೇಜಿಸಲಾಗುವುದು.
ಕೃಷ್ಣ ಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ
20 ವರ್ಷಗಳಿಂದ ಚಿಪ್ಸ್ ತಯಾರಿಕೆಗೆ ಬಳಸುವ ವಿಶೇಷ ಎಫ್ಸಿ–5 ಮತ್ತು ಎಫ್ಸಿ–12 ತಳಿಗಳ ಆಲೂಗಡ್ಡೆ ಬೆಳೆಯುತ್ತಿದ್ದೇನೆ. ಕಳೆದ ವರ್ಷ ಎಂಟು ಎಕರೆಯಲ್ಲಿ ಎಕರೆಗೆ ಸುಮಾರು 100 ಚೀಲ ಇಳುವರಿ ದೊರೆತಿದೆ. ಅಂಗಮಾರಿ ರೋಗ, ಅತಿವೃಷ್ಟಿ, ಅನಾವೃಷ್ಟಿಯಿಂದ ಆಲೂಗಡ್ಡೆ ಬೆಳೆಯುವ ಕ್ಷೇತ್ರ ಕಡಿಮೆಯಾಗಿದೆ. ಗುಣಮಟ್ಟದ ಬೀಜ, ಔಷಧಿ, ಮಾರ್ಗದರ್ಶನ ನೀಡಿದಲ್ಲಿ, ಆಲೂಗಡ್ಡೆ ಕೃಷಿ ಹೆಚ್ಚಾಗುವ ಸಾಧ್ಯತೆ ಇದೆ.
ಶಂಕರ್, ಅಪ್ಪೆನಹಳ್ಳಿಯ ಆಲೂಗಡ್ಡೆ ಬೆಳೆಗಾರ
25 ವರ್ಷಗಳಿಂದ ಆಲೂಗಡ್ಡೆ ಕೃಷಿ ಮಾಡುತ್ತಿದ್ದು. ಕೆಲವೊಮ್ಮೆ ಇಳುವರಿ ಕಡಿಮೆಯಾದರೂ, ಪ್ರತಿವರ್ಷ ಆಲೂಗಡ್ಡೆ ಬೆಳೆಯುತ್ತಿದ್ದೇವೆ. ಆದರೆ, ಪ್ರತಿಬಾರಿಯೂ ರೈತರು ನಷ್ಟ ಅನುಭವಿಸಿದರೆ, ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ರೈತರು ಆಲೂಗಡ್ಡೆ ಬೆಳೆಯುವ ನಿಟ್ಟಿನಲ್ಲಿ ಇಲಾಖೆಯಿಂದ ಅಗತ್ಯ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಅವಶ್ಯಕವಾಗಿದೆ.