ದಾವಣಗೆರೆವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಹಲಸೆ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಕೆ.ಸಿ.ವೀರಭದ್ರಯ್ಯ, ಡಿವಿಎಸ್ ಸಮಿತಿ ಅಧ್ಯಕ್ಷ ಕೆ.ಬಸಪ್ಪಗೌಡ ಉಪಸ್ಥಿತರಿರುವರು.ವಿಚಾರ ಸಂಕಿರಣದಲ್ಲಿ ಎರಡು ಗೋಷ್ಠಿಗಳು ನಡೆಯಲಿವೆ. ದೆಹಲಿಯ ರಾಷ್ಟ್ರೀಯ ಹಣಕಾಸು ಮತ್ತು ನೀತಿ ಸಂಸ್ಥೆಯ ಡಾ.ಎನ್.ಗೋವಿಂದರಾವ್, ಕುವೆಂಪು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ.ಆರ್.ಗಣೇಶ್, ಡಾ.ಸಿ.ಕೆ.ರೇಣುಕಾಚಾರ್ಯ ಭಾಗವಹಿಸುವರು. ತಿರುಪತಿ ವಿಶ್ವವಿದ್ಯಾಲಯದ ಡಾ.ಕೆ.ಎಂ.ನಾಯ್ಡು, ಧಾರವಾಡ ವಿಶ್ವವಿದ್ಯಾಲಯದ ಡಾ.ಎಸ್.ಟಿ.ಬಾಗಲಕೋಟಿ, ಮಂಗಳೂರು ವಿಶ್ವವಿದ್ಯಾಲಯದ ಡಾ.ಶ್ರೀಪತಿ ಕಲ್ಲೂರಾಯ, ಬೆಂಗಳೂರು ವಿಶ್ವವಿದ್ಯಾಲಯದ ಡಾ.ಪುಟ್ಟಸ್ವಾಮಯ್ಯ, ಡಾ.ಶ್ರೀನಿವಾಸ ಗೌಡ, ಬಳ್ಳಾರಿ ವಿಶ್ವವಿದ್ಯಾಲಯದ ಡಾ.ತುಳಸಿಮಾಲ ವಿಚಾರ ಮಂಡಿಸುವರು ಎಂದರು.