<p><strong>ಹುಣಸಗಿ</strong>: ‘ಸಮೀಪದ ಅಗ್ನಿ ಗ್ರಾಮದ ಹತ್ತಿರ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ 61.720 ಕಿ.ಮೀ.ನಲ್ಲಿ ಉಂಟಾಗಿದ್ದ ಕುಸಿತದ ಸ್ಥಳದಲ್ಲಿ ಇದೀಗ ತಾತ್ಕಾಲಿಕ ದುರಸ್ತಿ ಕಾರ್ಯ ಪೂರ್ಣಗೊಂಡಿದೆ’ ಎಂದು ಕೆಬಿಜೆಎನ್ಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ರೆಹಮಾನ್ಸಾಬ್ ಹೇಳಿದ್ದಾರೆ.</p>.<p>‘ವಾರಾಬಂದಿ ಪದ್ಧತಿಯಂತೆ ಜ.31ರ ರಾತ್ರಿ ಕಾಲುವೆಗೆ ನೀರು ಹರಿಸುವುದಕ್ಕೆ ಯಾವುದೇ ಅಡಚಣೆ ಇಲ್ಲ. ಹೀಗಾಗಿ ರೈತರು ಆತಂಕ ಪಡಬೇಕಾಗಿಲ್ಲ. ಮುಖ್ಯ ಕಾಲುವೆಯ ಈ ಸ್ಥಳದಲ್ಲಿ ಸುಮಾರು 35 ಮೀಟರ್ಗಳಷ್ಟು ಕುಸಿತವಾಗಿದ್ದು, ಸದ್ಯ ನೀರು ಹರಿಸುವುದಕ್ಕೆ ತೊಂದರೆ ಆಗದಂತೆ ಮರಳಿನ ಚೀಲಗಳನ್ನು ಅಳವಡಿಸಲಾಗಿದೆ’ ಎಂದರು.</p>.<p>‘ಜ. 21ರಂದು ಕಾಲುವೆಯ ಈ ಸ್ಥಳದಲ್ಲಿ ಕುಸಿತ ಕಂಡು ಬಂದಿದ್ದರೆ, ಇದಕ್ಕೂ ಮೊದಲು ನವೆಂಬರ್ 3 ರಂದು ಕಾಲುವೆಯ 61.45 ಕಿ.ಮೀನಲ್ಲಿ 50 ಮೀಟರ್ಗಳಷ್ಟು ದೊಡ್ಡ ಪ್ರಮಾಣದ ಕುಸಿತ ಕಂಡು ಬಂದಾಗ ರೈತರು ಹಾಗೂ ಮಾಜಿ ಸಚಿವ ರಾಜುಗೌಡರು ಒಮ್ಮಿಂದೊಮ್ಮಿಗೆ ನೀರು ಹರಿಸುವುದನ್ನು ಬಂದ್ ಮಾಡಿರುವುದೆ ಕಾರಣ ಎಂದು’ ನಿಗಮದ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ</strong>: ‘ಸಮೀಪದ ಅಗ್ನಿ ಗ್ರಾಮದ ಹತ್ತಿರ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ 61.720 ಕಿ.ಮೀ.ನಲ್ಲಿ ಉಂಟಾಗಿದ್ದ ಕುಸಿತದ ಸ್ಥಳದಲ್ಲಿ ಇದೀಗ ತಾತ್ಕಾಲಿಕ ದುರಸ್ತಿ ಕಾರ್ಯ ಪೂರ್ಣಗೊಂಡಿದೆ’ ಎಂದು ಕೆಬಿಜೆಎನ್ಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ರೆಹಮಾನ್ಸಾಬ್ ಹೇಳಿದ್ದಾರೆ.</p>.<p>‘ವಾರಾಬಂದಿ ಪದ್ಧತಿಯಂತೆ ಜ.31ರ ರಾತ್ರಿ ಕಾಲುವೆಗೆ ನೀರು ಹರಿಸುವುದಕ್ಕೆ ಯಾವುದೇ ಅಡಚಣೆ ಇಲ್ಲ. ಹೀಗಾಗಿ ರೈತರು ಆತಂಕ ಪಡಬೇಕಾಗಿಲ್ಲ. ಮುಖ್ಯ ಕಾಲುವೆಯ ಈ ಸ್ಥಳದಲ್ಲಿ ಸುಮಾರು 35 ಮೀಟರ್ಗಳಷ್ಟು ಕುಸಿತವಾಗಿದ್ದು, ಸದ್ಯ ನೀರು ಹರಿಸುವುದಕ್ಕೆ ತೊಂದರೆ ಆಗದಂತೆ ಮರಳಿನ ಚೀಲಗಳನ್ನು ಅಳವಡಿಸಲಾಗಿದೆ’ ಎಂದರು.</p>.<p>‘ಜ. 21ರಂದು ಕಾಲುವೆಯ ಈ ಸ್ಥಳದಲ್ಲಿ ಕುಸಿತ ಕಂಡು ಬಂದಿದ್ದರೆ, ಇದಕ್ಕೂ ಮೊದಲು ನವೆಂಬರ್ 3 ರಂದು ಕಾಲುವೆಯ 61.45 ಕಿ.ಮೀನಲ್ಲಿ 50 ಮೀಟರ್ಗಳಷ್ಟು ದೊಡ್ಡ ಪ್ರಮಾಣದ ಕುಸಿತ ಕಂಡು ಬಂದಾಗ ರೈತರು ಹಾಗೂ ಮಾಜಿ ಸಚಿವ ರಾಜುಗೌಡರು ಒಮ್ಮಿಂದೊಮ್ಮಿಗೆ ನೀರು ಹರಿಸುವುದನ್ನು ಬಂದ್ ಮಾಡಿರುವುದೆ ಕಾರಣ ಎಂದು’ ನಿಗಮದ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>