ರಂಗಮಂದಿರ ಕಾಮಗಾರಿಗಾಗಿ ಮತ್ತೆ ₹1.40 ಕೋಟಿ ಅನುದಾನ ಮಂಜೂರಾಗಿದೆ. ಕೆಆರ್ಐಡಿಎಲ್ ವತಿಯಿಂದ ಕಾಮಗಾರಿ ಮಾಡಲಾಗುತ್ತಿದ್ದು ಈ ವರ್ಷದೊಳಗೆ ಪೂರ್ಣಗೊಳಿಸಲು ಗಡವು ನೀಡಲಾಗಿದೆ.
ಉತ್ತರದೇವಿ ಮಠಪತಿ ಸಹಾಯಕ ನಿರ್ದೇಶಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಜಿಲ್ಲಾ ಕೇಂದ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ರಂಗಮಂದಿರ ಕಾಮಗಾರಿ ಇನ್ನೂ ಮುಗಿದಿಲ್ಲ. ಇದರಿಂದ ಕಲಾವಿದರು ಖಾಸಗಿಯಾಗಿ ಅಯೋಜಿಸುವುದರಿಂದ ಸಾವಿರಾರು ರೂಪಾಯಿ ಬಾಡಿಗೆ ವ್ಯಯಿಸಬೇಕಿದೆ
ಸಿದ್ಧರಾಜ ರೆಡ್ಡಿ ಸಾಂಸ್ಕೃತಿಕ ಸಂಘಟಕ
ರಂಗಮಂದಿರಕ್ಕೆ ಮೀಸಲಿಟ್ಟ ಅನುದಾನ ಸಮಪರ್ಕವಾಗಿ ಬಾರದ ಕಾರಣ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಆದರೆ ಒಳಾಂಗಣಕ್ಕೆ ಯಾವುದೇ ಅನುದಾನವಿಲ್ಲ
ಧನಂಜಯ ಆರ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆಆರ್ಐಡಿಎಲ್
ರಂಗಮಂದಿರದ ಎಲ್ಲ ಕಾಮಗಾರಿಯನ್ನು ಶೀಘ್ರ ಮುಗಿಸಿ ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕು. ಈಗಾಗಲೇ ನಮ್ಮ ಸಂಘದಿಂದ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ
ಶರಣು ನಾಟೇಕರ್ ಅಧ್ಯಕ್ಷ ವೃತ್ತಿ ರಂಗಭೂಮಿ ಕವಿ ಕಲಾವಿದರ ಸಂಘ